AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bonded Labour: ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!

Hassan police: ಸಂತ್ರಸ್ಥ ಜನರಿಗೆ ಪುನರ್ವಸತಿ ಕಲ್ಪಿಸೋ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೇ ಆರೋಪಿ ಮೂರು ವರ್ಷಗಳ ಹಿಂದೆಯೂ ಕೂಡ ಇಂತಹುದೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಇದೊಂದು ದುರಂತ. ಇವರನ್ನು ನೋಡಿದಾಗ ತುಂಬಾ ಕಷ್ಟವಾಯಿತು ಎಂದು ಪ್ರಕರಣದ ಬಗ್ಗೆ ಹೆಚ್ಚುವರಿ ಎಸ್ಪಿ ಡಾ.ನಂದಿನಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Bonded Labour: ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!
ಕೂಲಿ ಅರಸಿ ಬರುವ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ತೆ!
TV9 Web
| Edited By: ಸಾಧು ಶ್ರೀನಾಥ್​|

Updated on:Apr 05, 2022 | 2:16 PM

Share

ಹಾಸನ: ಕೂಲಿ ಅರಸಿ ಬರೋ ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಜೀತಕ್ಕೆ ತಳ್ಳೋ ಕತರ್ನಾಕ್ ಗ್ಯಾಂಗ್ ಪತ್ರೆಯಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಅಣ್ಣನಾಯಕನಹಳ್ಳಿಯ ಮುನೇಶ್ ಎಂಬಾತನಿಂದ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಒಂದು ದಿನದ ಕೆಲಸವಿದೆ ಎಂದು ಆಸೆ ಹುಟ್ಟಿಸಿ, ಕರೆತಂದು ಕೂಡಿ ಹಾಕ್ತಿದ್ದ ಕಿರಾತಕ ಗುಂಪು ಈತನದ್ದಾಗಿದೆ. ಹೀಗೆ ಅರಸೀಕೆರೆ ಸುತ್ತಮುತ್ತ ಸಿಕ್ಕ 50 ಕ್ಕೂ ಹೆಚ್ಚು ನಿರ್ಗತಿಕರನ್ನು (down trodden Labourer) ಮುನೇಶ್ ಗ್ಯಾಂಗ್​ ಅಕ್ರಮ‌ ಬಂಧನದಲ್ಲಿಟ್ಟು, ಅನ್ನ ಅಹಾರ, ನೀರು, ಸ್ನಾನ ಇಲ್ಲದೆ ನರಳಾಡುವಂತೆ ಆ ಕಾರ್ಮಿಕರನ್ನು ಮಾಡುತ್ತಿದ್ದುದ್ದು ಪತ್ತೆ ಹಚ್ಚಲಾಗಿದೆ. ಊಟ, ನೀರು ಕೇಳಿದರ ಹಲ್ಲೆ, ಕೂಲಿ ಕೇಳಿದರೂ ನೀಡದೆ ಹಲ್ಲೆ ಮಾಡಿ ಒಂದು ಕೊಠಡಿಯಲ್ಲಿ ಈ 50 ಜನರನ್ನು ಬಂಧಿಸಿಡಲಾಗಿತ್ತು (bonded labour). ಗೂಡಿನ ಗಾಡಿಯಲ್ಲಿ ಕೂಡಿಹಾಕಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಮಾಲೀಕ ಮುನೇಶ್. ಮುನೇಶ್ ಮತ್ತವನ ತಂಡದಿಂದ ಅಮಾನುಷ ವರ್ತನೆ ನಡೆದಿದ್ದು ಶೌಚಕ್ಕೂ ಹೊರಗೆ ಬಿಡದೆ ಕೂಡಿ ಹಾಕಿ ಅಮಾನವೀಯತೆ ಮೆರೆದಿದ್ದಾರೆ. ಐದಾರು ತಿಂಗಳುಗಳಿಂದ ಹೀಗೆ ಕೂಡಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. ತಿಂಗಳಾನುಗಟ್ಟಲೆಯಿಂದ ಸ್ನಾನ ಇಲ್ಲದೆ, ಕೊಳಕು ಬಟ್ಟೆಯಲ್ಲಿ ನರಳಾಡುತ್ತಿದ್ದರು ಜೀತದ ಈ ಜನ. ಎಲ್ಲ ಅತಿರೇಕಗಳಿಗೂ ಒಂದು ಅಂತ್ಯವಿರಬೇಕು ಎಂಬಂತೆ ಕೊನೆಗೂ, ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಹಾಸನ ಜಿಲ್ಲೆ ಅಣ್ಣೇನಹಳ್ಳಿ ಗ್ರಾಮದಲ್ಲಿ 45 ಪುರುಷರು 10 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ (Annenahalli, Hassan).

ರಾಜ್ಯದ ಬೇರೆ ಬೇರೆ ಕಡೆಯಿಂದ ಇವರನ್ನಲ್ಲ ಕರೆತಂದು ಅಕ್ರಮವಾಗಿ ಬಂಧನದಲ್ಲಿಟ್ಟು ಕೆಲಸ ತೆಗೆಸುತ್ತಿದ್ದರು. ಶುಂಠಿ ಕೀಳುವ ಕೆಲಸಕ್ಕೆ ಕರೆತಂದು ದುಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು, ಮಧುಗಿರಿ, ಪಾವಗಡ, ತಮಿಳುನಾಡು, ಮಂಡ್ಯ ಹೀಗೆ ನಾನಾ ಭಾಗಗಳಿಂದ ಜನರನ್ನು ಕರೆತಂದು ಜೀತದಾಉಗಳಂತೆ ದುಡಿಸಿಕೊಳ್ಳಲಾಗಿದೆ. ಕೆಲವರು ಎರಡು ವರ್ಷಗಳಿಂದ ಇನ್ನು ಹಲವರು ಆರು ತಿಂಗಳು, ಕೆಲವರು ವಾರಗಳಿಂದ ಬಂಧಿಯಾಗಿದ್ದಾರೆ. ಸರಿಯಾದ ಕೂಲಿಯಿಲ್ಲ, ಮೂಲಭೂತ ಸೌಲಭ್ಯವೂ ಇಲ್ಲ ಎಂಬಂತಾಗಿತ್ತು ಇವರ ಪಾಡು. ಹೆಚ್ಚುವರಿ ಎಸ್​ಪಿ ಡಾ. ನಂದಿನಿ ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುನೇಶನಿಗೆ ಕುಮಾರ ಲಕ್ಷ್ಮಿ, ಮನು ಎಂಬುವವರು ಕುಮ್ಮಕ್ಕು ಕೊಟ್ಟಿದ್ದಾರೆ.

ಸಂತ್ರಸ್ಥ ಜನರಿಗೆ ಪುನರ್ವಸತಿ ಕಲ್ಪಿಸೋ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದೇ ಆರೋಪಿ ಮೂರು ವರ್ಷಗಳ ಹಿಂದೆಯೂ ಕೂಡ ಇಂತಹುದೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ನಿರ್ಗತಿಕರನ್ನು ಟಾರ್ಗೆಟ್ ಮಾಡಿ ಕರೆತಂದು ಹೀಗೆ ಕೂಡಿ ಹಾಕಿದ್ದಾರೆ. ಈ ಘಟನೆ ನೋಡಿದರೆ ಘೋರ ಅನ್ನಿಸುತ್ತೆ, ಇದೊಂದು ದುರಂತ. ಇವರನ್ನು ನೋಡಿದಾಗ ತುಂಬಾ ಕಷ್ಟವಾಯಿತು ಎಂದು ಪ್ರಕರಣದ ಬಗ್ಗೆ ಹೆಚ್ಚುವರಿ ಎಸ್ಪಿ ಡಾ.ನಂದಿನಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮಾಡುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Also Read: ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ

Also Read: Number 9: ನವ ನವೀನ ಬ್ರಹ್ಮ ಸಂಖ್ಯೆ 9, ಏನಿದರ ಮಹತ್ವ-ವಿಶೇಷತೆ

Published On - 2:13 pm, Tue, 5 April 22

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ