AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Number 9: ನವ ನವೀನ ಬ್ರಹ್ಮ ಸಂಖ್ಯೆ 9, ಏನಿದರ ಮಹತ್ವ-ವಿಶೇಷತೆ

Number 9: ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು 'ಬ್ರಹ್ಮಸಂಖ್ಯೆ' ಎನ್ನುತ್ತಾರೆ. 'ದೈವಸಂಖ್ಯೆ' ಮತ್ತು 'ವೃದ್ಧಿಸಂಖ್ಯೆ' ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ' ಎಂದೂ ನಂಬುತ್ತಾರೆ. ಈ ಒಂಬತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ!

Number 9: ನವ ನವೀನ ಬ್ರಹ್ಮ ಸಂಖ್ಯೆ 9, ಏನಿದರ ಮಹತ್ವ-ವಿಶೇಷತೆ
Number 9: ನವ ನವೀನ ಬ್ರಹ್ಮಸಂಖ್ಯೆ 9! ಏನಿದರ ಮಹತ್ವ-ವಿಶೇಷತೆ
TV9 Web
| Updated By: ಸಾಧು ಶ್ರೀನಾಥ್​|

Updated on: Apr 05, 2022 | 6:06 AM

Share

ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ ಎಂದೂ ನಂಬುತ್ತಾರೆ. ಈ ಒಂಬತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ! ಸೊನ್ನೆ ಬಿಟ್ಟರೆ ಒಟ್ಟು ಸಂಖ್ಯೆಗಳು ಒಂಬತ್ತು. ನೀವು ಯಾವುದಾದರೂ ನಿಮ್ಮಿಷ್ಟ ಬಂದ ಒಂದು ಸಂಖ್ಯೆಯನ್ನು ಒಂಬತ್ತನೆಯ ಸಂಖ್ಯೆಯಿಂದ ಗುಣಾಕಾರ ಮಾಡಿರಿ. ಬಂದ ಶೇಷ ಸಂಖ್ಯೆಗಳನ್ನು ಸಂಕಲನ ಮಾಡಿ ಏಕ ಸಂಖ್ಯೆಯನ್ನಾಗಿಸಿರಿ, ಒಂಬತ್ತು ಅಗುತ್ತದೆ. ಇಲ್ಲಿ ಪೂರಾ ಒಂಬತ್ತು ಸಂಖ್ಯೆಗಳನ್ನು ಒಂಬತ್ತರಿಂದ ಗುಣಿಸಲಾಗಿದೆ.

123456789×9=1111111101 ಒಟ್ಟಾಗಿ ಕೂಡಿಸಿದರೆ “9” ಆಗುತ್ತದೆ. ಇದೇ ರೀತಿ ಒಂಬತ್ತನೆಯ ‘ಮಗ್ಗಿಯನ್ನು ನೋಡೋಣ.

9 × 1 = 9 — 9 = 9 9 × 2 = 18 — 1 + 8 = 9 9 × 3 = 27 — 2 + 7 = 9 9 × 4 = 36 — 3 + 6 = 9 9 × 5 = 45 — 4 + 5 = 9 9 × 6 = 54 — 5 + 4 = 9 9 × 7 = 63 — 6 + 3 = 9 9 × 8 = 72 — 7 + 2 = 9 9 × 9 = 81 — 8 + 1 = 9 9 × 10= 90 — 9 + 0 = 9

ಇಲ್ಲೀಗ ಚತುರ್ಯುಗಗಳ ಕಾಲಾವಧಿಗಳನ್ನು ನೋಡೋಣ.

ಕಲಿಯುಗದ ಅವಧಿ: 4,32,000 ವರ್ಷಗಳು 4+3+2+0+0+0 = 9

ದ್ವಾಪರಯುಗದ ಅವಧಿ: 8,64,000 ವರ್ಷಗಳು 8+6+4+0+0+0=18, 1+8=9

ತ್ರೇತಾಯುಗದ ಅವಧಿ: 12,96,000 ವರ್ಷಗಳು 1+2+9+6+0+0+0 = 18, 1+8=9

ಕೃತಯುಗದ ಅವಧಿ: 17,28,000 ವರ್ಷಗಳು 1+7+2+8+0+0+0= 18,1+8=9

ಇಲ್ಲಿ ನೀವು ಗಮನಿಸಿರಬಹುದು. ಕಲಿಯುಗದ ಎರಡರಷ್ಟು ದ್ವಾಪರಯುಗವಿದೆ. ಕಲಿಯುಗದ ಮೂರರಷ್ಟು ತ್ರೇತಾಯುಗವಿದೆ. ಕಲಿಯುಗದ ನಾಲ್ಕರಷ್ಟು ಕೃತಯುಗವಿದೆ. ಹೀಗೆ ನಾಲ್ಕು ಯುಗಗಳ ಒಟ್ಟು ವರ್ಷಗಳು 43,20,000 * 4+3+2+0+0+0+0 = 9

ಮಹಾ ಇತಿಹಾಸವೆಂದು ಖ್ಯಾತಿಯಿರುವ ‘ಮಹಾಭಾರತ’ದ ಪರ್ವಗಳು: 18 * 1+8 = 9 ಮಹಾಭಾರತದ ಕುರುಕ್ಷೇತ್ರ ಯುದ್ಧದ ದಿನಗಳು: 18 * 1+8 = 9 ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡ ಸೈನ್ಯದ ಸಂಖ್ಯೆ: ಪಾಂಡವರದು: 7 ಅಕ್ಷೋಹಿಣಿ ಕೌರವರದು: 11 ಅಕ್ಷೋಹಿಣಿ ಒಟ್ಟು 18 ಅಕ್ಷೋಹಿಣಿಗಳು! 18 * 1+8 = 9 ಮಹಾಭಾರತದ ಭಗವದ್ಗೀತೆಯ ಅಧ್ಯಾಯಗಳು ಹದಿನೆಂಟು: 18 * 1+8 =

ವ್ಯಾಸಮಹರ್ಷಿಗಳು ಬರೆದ ಪುರಾಣಗಳು 18, (ಅಷ್ಟಾದಶ ಪುರಾಣಗಳು): 18* 1+8 = 9 ವ್ಯಾಸಭಗವಾನರಿಗೂ ಒಂಬತ್ತನೆಯ ಸಂಖ್ಯೆಗೂ ಏನೋ ಅವಿನಾಭಾವ ಸಂಬಂಧವಿದೆ.

ಸಂಖ್ಯಾಶಾಸ್ತ್ರ ಮಹತ್ವದಿಂದಾಗಿ ಒಂಬತ್ತನೆಯ ಸಂಖ್ಯೆಗೆ ದೈವತ್ವವು ಬಂದಿದೆ. ನಕ್ಷತ್ರಗಳು: 27 — 2+7 = 9 ರುದ್ರಾಕ್ಷಿ ಮಾಲೆಯಲ್ಲಿರುವ ರುದ್ರಾಕ್ಷಿಮಣಿಗಳ ಸಂಖ್ಯೆ: 108 — 1+0+8 = 9

ಈ ಒಂಬತ್ತನೆಯ ಸಂಖ್ಯೆಯ ಬಗ್ಗೆ ಮತ್ತಷ್ಟು ನೋಡೋಣ! ಗಂಟೆಗೆ 3,600 ಸೆಕೆಂಡುಗಳು * 3+6+0+0=9 ದಿನಕ್ಕೆ 1,440 ನಿಮಿಷಗಳು * 1+4+4+0 = 9 ವಾರಕ್ಕೆ 10,080 ನಿಮಿಷಗಳು *1+0+0+8+0=9 ತಿಂಗಳಿಗೆ 720 ಗಂಟೆಗಳು * 7+2+0 = 9 ವರ್ಷಕ್ಕೆ 360 ದಿನಗಳು * 3+6+0 = 9

60 ವರ್ಷಗಳಿಗೆ 720 ತಿಂಗಳುಗಳು *7+2+0=9 60 ವರ್ಷಗಳಿಗೆ 21,600 ದಿನಗಳು *2+1+6+0+0 = 9 ಮನುಷ್ಯನ ಶರೀರಕ್ಕಿರುವ ರಂಧ್ರಗಳು 9 (ಸೃಷ್ಟಿಯ ಪ್ರಾಣಿಗಳಲ್ಲಿ ಸರ್ಪವನ್ನು ಬಿಟ್ಟರೆ ಉಳಿದ ಪ್ರಾಣಿಗಳಿಗೆ ಒಂಭತ್ತು ರಂಧ್ರಗಳಿರುತ್ತವೆ.)

ಮಾನವ ಶಿಶು ತಾಯಿಗರ್ಭದಲ್ಲಿ ಇರುವುದು: 9 ತಿಂಗಳುಗಳು, ಅಂದರೆ 270 ದಿನಗಳು, 7+2+0 = 9

ನವಗ್ರಹಗಳು *9 ನವರತ್ನಗಳು *9 ನವರಸಗಳು *9 ನವನಾದಗಳು *9 ನವನಿಧಿಗಳು *9 ನವಚಿತ್ತವೃತ್ತಿಗಳು *9 ನವರಂಧ್ರಗಳು *9 ನವಚಕ್ರಗಳು *9 ನವಧಾನ್ಯಗಳು *9 ನವನಾಥ ಸಿದ್ಧರು *9 ನವಭಯಗಳು *9 ನವನಾಡಿಗಳು *9

ಹೀಗೆ ಒಂಬತ್ತರ ಸಂಖ್ಯೆಗೆ ಮಹತ್ವದ ಸ್ಥಾನವಿದೆ (ಬರಹ – ವಾಟ್ಸಪ್ ಸಂದೇಶ)

ಇದನ್ನೂ ಓದಿ: ಏಳು ಸಂಖ್ಯೆಯ ಕೋಟೆ! ಸಪ್ತ ಸಂಖ್ಯೆಗಳ ವಿಶೇಷತೆಯ ಸುತ್ತ ಒಂದು ಸುತ್ತು!

ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಅಪ್ರಾಪ್ತೆಯ ಕೊರಳಿಗೆ ಚಾಕು ಹಿಡಿದ ಪಾಗಲ್ ಪ್ರೇಮಿ,
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಸಿಎಂ ಗಾದಿಗಾಗಿ ತಿಕ್ಕಾಟ ಜೋರಾಗಿರುವ ಸೂಚನೆಗಳು ಸ್ಪಷ್ಟ!
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
ಕಲಬುರಗಿ ಜಿಲ್ಲೆಯ ಹಲವಾರು ಕಡೆ ತುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
Video:ಕೇರಳದಲ್ಲಿ ಸಿಲುಕಿದ್ದ ಬ್ರಿಟಿಷ್ ಫೈಟರ್ ಜೆಟ್ ಯುಕೆಗೆ ವಾಪಸ್
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಫಿನಾಲೆಗೆ ದಿನಾಂಕ ನಿಗದಿ; ಕಪ್ ಯಾರಿಗೆ?
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು
ಉತ್ತಮ ಮಳೆಯಿಂದಾಗಿ ತುಂಬಿ ತುಳುಕುತ್ತಿರುವ ಕರ್ನಾಟಕದ ಜಲಾಶಯಗಳು