AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಗ್ರಾಮ ಪಂಚಾಯತಿ ಅಧ್ಯಕ್ಷ ಅರೆಸ್ಟ್! ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ಗೆ ನ್ಯಾಯಾಂಗ ಬಂಧನ

ಪ್ರಕರಣದ ಕಿಂಗ್​ಪಿನ್ ಆಗಿರುವ ರುದ್ರಗೌಡ ಪಾಟೀಲ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್​ನ​ ಇಂದು ಜಡ್ಜ್​ ಮುಂದೆ ಹಾಜರುಪಡಿಸಿದ್ದರು.

545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಗ್ರಾಮ ಪಂಚಾಯತಿ ಅಧ್ಯಕ್ಷ ಅರೆಸ್ಟ್! ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ಗೆ ನ್ಯಾಯಾಂಗ ಬಂಧನ
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ
TV9 Web
| Updated By: sandhya thejappa|

Updated on:May 08, 2022 | 12:19 PM

Share

ಹಾಸನ: 545 ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು (CID Officials) ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಈ ಅಕ್ರಮ ನಡೆದಿರುವ ಶಂಕೆ ಮೂಡಿದೆ. ಇನ್ನು ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಬಂಧನಕ್ಕೊಳಗಾಗಿದ್ದಾನೆ. ಕೇಶವಮೂರ್ತಿಯನ್ನು ವಿಚಾರಣೆಗೆ ಕರೆಸಿ ಸಿಐಡಿ ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಗಾಗಿ ಸಿಐಡಿ ಶೋಧಕಾರ್ಯ ಮುಂದುವರಿಸಿದೆ.

ನೇಮಕಾತಿ ಹಗರಣದ ನಂಟು ಹಾಸನ ಜಿಲ್ಲೆಗೂ ಹಬ್ಬಿದೆ. ಸಿಐಡಿ ಜಿಲ್ಲೆಯಲ್ಲಿ ಹಲವರನ್ನು ವಶಕ್ಕೆ ಪಡೆದಿದೆ. ಪಿಎಸ್​​ಐ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ವೆಂಕಟೇಶ್​ನ​ ವಶಕ್ಕೆ ಪಡೆಯಲಾಗಿದೆ. ವೆಂಕಟೇಶ್ಬೆಕ್ಕ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್​ನ ಪುತ್ರ. ಚಂದ್ರಶೇಖರ್​ ಬೆಕ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವಮೂರ್ತಿಯ ಆಪ್ತ. ಕೇಶವಮೂರ್ತಿ ಮೂಲಕ ಪಿಎಸ್​ಐ ನೇಮಕಾತಿಯಲ್ಲಿ ಡೀಲ್​ ಮಾಡಿ ಪುತ್ರನ ಆಯ್ಕೆ ಮಾಡಿಸಿರುವ ಆರೋಪದಡಿ ವೆಂಕಟೇಶ್​ನ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣದ ಕಿಂಗ್​ಪಿನ್ ಆಗಿರುವ ರುದ್ರಗೌಡ ಪಾಟೀಲ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್​ನ​ ಇಂದು ಜಡ್ಜ್​ ಮುಂದೆ ಹಾಜರುಪಡಿಸಿದ್ದರು.

8 ವಿಶೇಷ ತಂಡಗಳ ರಚನೆ: ಪ್ರಕರಣದ ತನಿಖೆಗೆ ಸಿಐಡಿಯಿಂದ 8 ವಿಶೇಷ ತಂಡಗಳ ರಚನೆಯಾಗಿದೆ. ಎಂಟು ಡಿವೈಎಸ್​​ಪಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳ ನೇಮಕ ಮಾಡಲಾಗಿದೆ. ಪ್ರತಿ ಡಿವೈಎಸ್​​ಪಿ ತಂಡದಲ್ಲೂ ಇನ್ಸ್​ಪೆಕ್ಟರ್​​, ಸಿಬ್ಬಂದಿ ಇರಲಿದ್ದಾರೆ. ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಆತಂಕಕಾರಿ ಅಂಶ ಪತ್ತೆಯಾಗಿದೆ.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಲವು ಕೇಸ್ ದಾಖಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ 8 ಡಿವೈಎಸ್​​ಪಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. 8 ತಂಡಗಳ ಪೈಕಿ ಟೆಕ್ನಿಕಲ್​ ಅನಾಲಿಸಿಸ್​, ಡಿಜಿಟಲ್ ಇನ್ವೆಸ್ಟಿಗೇಷನ್​ಗೆ ಮೀಸಲಿಡಲಾಗಿದೆ. ಎಲ್ಲಿ ಅಕ್ರಮ ನಡೆದಿದೆಯೋ ಆಯಾ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಅನಿವಾರ್ಯ ಇದ್ದಲ್ಲಿ ಸಿಐಡಿ ಹೆಚ್ಚುವರಿ ಸಿಬ್ಬಂದಿ ಬಳಕೆ ಮಾಡಲು ಸೂಚನೆ ನಿಡಲಾಗಿದೆ.

ಇದನ್ನೂ ಓದಿ

Mother’s Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!

ಮರಿಯುಪೋಲ್ ಉಕ್ಕಿನ ಸ್ಥಾವರನಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಸ್ಥಳಾಂತರಿಸಲಾಗಿದೆ: ಉಕ್ರೇನ್

Published On - 12:07 pm, Sun, 8 May 22