ಪ್ರೀತಿಸಲು ನಿರಾಕರಿಸಿದಕ್ಕೆ ಯುವತಿಯನ್ನು ಅಪಹರಿಸಿದ ಪಾಗಲ್​ಪ್ರೇಮಿ: ವಿದ್ಯಾರ್ಥಿನಿ ರಕ್ಷಿಸಿ ಕರೆತಂದ ಹಾವೇರಿ ಪೊಲೀಸ್​​

ಆ ಯುವತಿ ಜೀವನದಲ್ಲಿ ಹತ್ತಾರು ಕನಸ್ಸು ಕಂಡು ಕಷ್ಟಪಟ್ಟು ಬಿ.ಇಡ್ ಓದುತ್ತಿದ್ದಾಳು ಭಾನುವಾರವಾದರೂ ವಿಶೇಷ ತರಬೇತಿ ಹಿನ್ನಲೆ ಕಾಲೇಜಿಗೆ ತೆರಳುತ್ತಿದ್ದಳು. ಆದರೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಪಾಗಲ್ ಪ್ರೇಮಿ ಹೊತ್ತೋದಿದ್ದಾನೆ. ಮಗಳು ಕಿಡ್ನಾಪ್​​ ಸುದ್ದಿ ತಿಳಿದು ಹೆತ್ತವರು ಗಾಬರಿಯಿಂದ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ. ಪಾಗಲ್ ಪ್ರೇಮಿ ಬೆನ್ನುಹಟ್ಟಿದ ಹಾವೇರಿ ಪೊಲೀಸರು ಯುವತಿಯನ್ನು ಸಿನೀಮಿಯ ರೀತಿ ರಕ್ಷಣೆ ಮಾಡಿದ್ದಾರೆ.

ಪ್ರೀತಿಸಲು ನಿರಾಕರಿಸಿದಕ್ಕೆ ಯುವತಿಯನ್ನು ಅಪಹರಿಸಿದ ಪಾಗಲ್​ಪ್ರೇಮಿ: ವಿದ್ಯಾರ್ಥಿನಿ ರಕ್ಷಿಸಿ ಕರೆತಂದ ಹಾವೇರಿ ಪೊಲೀಸ್​​
ಹಾವೇರಿ ಪೊಲೀಸ ಠಾಣೆ, ಅಪಹರಿಸಿದ ಪಾಗಲ್​ಪ್ರೇಮಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2024 | 7:35 PM

ಹಾವೇರಿ, ಮಾರ್ಚ್​ 10: ಪ್ರೀತಿಸಲು ನಿರಾಕರಿಸಿದ B.ed ವಿದ್ಯಾರ್ಥಿನಿಯನ್ನು ಪಾಗಲ್​ಪ್ರೇಮಿಯೊಬ್ಬ ಅಪಹರಿಸಿದ (kidnapped) ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯನ್ನು ರಕ್ಷಿಸಿ ಹಾವೇರಿ ಪೊಲೀಸರು ಕರೆತಂದಿರುವಂತಹ ಘಟನೆ ನಡೆದಿದೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದೆ. ಬೆಳಗ್ಗೆ 9 ಗಂಟೆಗೆ ಕಾಲೇಜಿಗೆ ತೆರಳುತ್ತಿದ್ದ ಬಿ.ಇಡಿ ವಿದ್ಯಾರ್ಥಿನಿಯನ್ನು ಹಾವೇರಿಯ ಓಲ್ಡ್ ಪೋಸ್ಟ್ ಆಫೀಸ್ ಬಳಿ ನೆರೆಮನೆ ನಿವಾಸಿ ವಿಷ್ಣು ತಗಡಿನಮನಿ ಹಾಡಹಗಲೇ ಅಪಹರಿಸಿದ್ದ. ತಕ್ಷಣ ಹಾವೇರಿ ನಗರ ಠಾಣೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಯುವತಿಯು ಕಾಲೇಜ್ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ. ಕಿಡ್ನಾಪ್ ಮಾಡಿದ ಆರೋಪಿಯನ್ನ ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಯುವತಿ ರಕ್ಷಣೆಗೆ ಮುಂದಾಗಿದ್ದರು. ಯುವತಿಯನ್ನ ಮೋಟೆಬೆನ್ನೂರು ಬಳಿ ಬಿಟ್ಟು ಆರೋಪಿ‌ ವಿಷ್ಣು ಎಸ್ಕೇಪ್ ಆಗಿದ್ದಾನೆ. ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿ ಪತ್ತೆ ಹಚ್ಚಿ ಕರೆತಂದಿದ್ದಾರೆ.ಪೊಲೀಸ್ ಠಾಣೆಗೆ ಯುವತಿಯನ್ನ ಕರೆತರುತ್ತಿದ್ದಂತೆ ತಾಯಿಯನ್ನ ಅಪ್ಪಿ ಯುವತಿ ಗೋಳಾಡಿದ್ಲು. ಈ ವೇಳೆ ಮಗಳ ಜೊತೆ ಪೋಷಕರೂ ಕಣ್ಣೀರು ಹಾಕಿದರು.

ಇದನ್ನೂ ಓದಿ: ಅಕ್ರಮ ಸಂಬಂಧದಿಂದ ಮಗು ಜನನ; ಹುಟ್ಟುತ್ತಲೇ ಕುತ್ತಿಗೆ ಹಿಚುಕಿ ಕೊಂದ‌ ತಂದೆ, ಅಜ್ಜಿ

ಮಗಳನ್ನ ಕಿಡ್ನಾಪ್ ಮಾಡಿದ ಯುವಕನ ಮೇಲೆ ಯುವತಿ ತಂದೆ ದೇವೇಂದ್ರಪ್ಪ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ಯುವತಿಯ ಕಾಲೇಜು ಹೋಗುತ್ತಿದ್ದ ವೇಳೆ, ಹಾಸ್ಟಲ್ ಬಳಿ ಮತ್ತು ಬಸ್ ನಿಲ್ದಾಣದ ಬಂದು ಪಾಗಲ್ ಪ್ರೇಮಿ ಪ್ರೀತಿಸು ಅಂತಾ ಕಾಡುತ್ತಿದ್ದ ಎಂದು ಪೊಷಕರು ಆರೋಪಿಸಿದ್ದಾರೆ.ಇದೇ ವಿಚಾರವಾಗಿ ಒಂದು ವಾರದ ಹಿಂದೆ ರಾಜೀ ಪಂಚಾಯಿತಿಕೂಡಾ ಮಾಡಲಾಗಿತ್ತು ಆಗ ಇನ್ನುಮುಂದೆ ನಿಮ್ಮ ಮಗಳ ತಂಟೆಗೆ ಬರುವುದಿಲ್ಲಾ ಎಂದು ಒಪ್ಪಿಕೊಂಡಿದ್ದಾ ಈಗಾ ಮತ್ತೆ ಹೀಗೆ ಮಾಡಿದ್ದಾನೆ ನಮಗೆ ರಕ್ಷಣೆ ಕೊಡಿ ಎಂದು ಅಂಗಲಾಚಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಬಸವೇಶ್ವರನಗರ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕುಡಿತದ ಚಟ ಬಿಡಸಲಾಗದೆ ಮಗನನ್ನು ಕೊಂದ ತಂದೆ ​

ಪಾಗಲ್ ಪ್ರೇಮಿ ಪ್ರೀತಿ ನೀರಾಕರಿಸಿದಕ್ಕೆ ಯುವತಿ ಕಿಡ್ನಾಪ್ ಪ್ರಕರಣ ಭೇದಿಸಲು ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಇಂಥಾ ಪ್ರಕರಣಗಳು ಜಿಲ್ಲೆಯಲ್ಲಿ ಮರಕಳಿಸ ಬಾರದು. ಇಂತವರಿಗೆ ಕಠಿಣ ಕ್ರಮ ಆಗಬೇಕು ಎಂದು ಪೋಷಕರು ಒತ್ತಾಯಿಸಯತ್ತಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ