ರೆಸಾರ್ಟ್ ರಾಜಕೀಯ ಮಾಡಲ್ಲ ಅಂತ ಜನಪ್ರತಿನಿಧಿಗಳಿಂದ ಪ್ರತಿಜ್ಞೆ ಮಾಡಿಸಬೇಕು: ತರಳಬಾಳು ಸ್ವಾಮೀಜಿ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ‌ ಸೇರಿಸಿ ಅವರಿಗೆ ಪ್ರತಿಜ್ಞೆ ಮಾಡಿಸಬೇಕು. ರಾಜ್ಯಪಾಲರು ಎಲ್ಲ ಅಭ್ಯರ್ಥಿಗಳಿಗೆ ಪ್ರತಿಜ್ಞೆ ಭೋದನೆ ಮಾಡಿಸಬೇಕು. ಬ್ರಷ್ಟಾಚಾರ ಮಾಡಲ್ಲ, ರೆಸಾರ್ಟ್ ರಾಜಕೀಯ ಮಾಡಲ್ಲ, ವ್ಯಕ್ತಿ ನಿಂದನೆ ಮಾಡಲ್ಲ ಎಂದು ಪ್ರತಿಜ್ಞೆ ಮಾಡಿಸಬೇಕು  ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರೆಸಾರ್ಟ್ ರಾಜಕೀಯ ಮಾಡಲ್ಲ ಅಂತ ಜನಪ್ರತಿನಿಧಿಗಳಿಂದ ಪ್ರತಿಜ್ಞೆ ಮಾಡಿಸಬೇಕು: ತರಳಬಾಳು ಸ್ವಾಮೀಜಿ
ತರಳಬಾಳು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ
Edited By:

Updated on: Jan 14, 2024 | 1:29 PM

ಹಾವೇರಿ, ಜನವರಿ 14: ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lokasbha Election) ಎಲ್ಲ ಅಭ್ಯರ್ಥಿಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ‌ ಸೇರಿಸಿ ಅವರಿಗೆ ಪ್ರತಿಜ್ಞೆ ಮಾಡಿಸಬೇಕು. ರಾಜ್ಯಪಾಲರು ಎಲ್ಲ ಅಭ್ಯರ್ಥಿಗಳಿಗೆ ಪ್ರತಿಜ್ಞೆ ಭೋದನೆ ಮಾಡಿಸಬೇಕು. ಈ ಸಮಯದಲ್ಲಿ ಘೋಷಣೆಯಾದ ಅಭ್ಯರ್ಥಿಗಳು ಹಾಗೂ ಪಕ್ಷದ ಅಧ್ಯಕ್ಷರು ಇರಬೇಕು. ರಾಜ್ಯಪಾಲರು ಎಲ್ಲ ಅಭ್ಯರ್ಥಿಗಳಿಗೆ ನಾವು ಗೆದ್ದ ಮೇಲೆ ಬ್ರಷ್ಟಾಚಾರ ಮಾಡಲ್ಲ, ರೆಸಾರ್ಟ್ ರಾಜಕೀಯ ಮಾಡಲ್ಲ (Resort Politics) , ವ್ಯಕ್ತಿ ನಿಂದನೆ ಮಾಡಲ್ಲ ಎಂದು ಭೋದನೆ ಮಾಡಬೇಕು. ಈ ವ್ಯವಸ್ಥೆ ನಮ್ಮಲ್ಲಿ ಆಗಬೇಕು ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರನಲ್ಲಿ ಸಿದ್ದರಾಮೇಶ್ವರ 851ನೇ ಜಯಂತೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್​ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಚಿವ ಮಾಧುಸ್ವಾಮಿ ಭಾಗಿಯಾಗಿದ್ದಾರೆ.

ಕಾರ್ಯಕ್ರಮದ ವೇದಿಕೆ ಮೇಲೆ ಕೂತಿದ್ದ ಬಿವೈ ವಿಜಯೇಂದ್ರ ಅವರಿಗೆ ಇದಕ್ಕೇನಂತಿಯಪ್ಪ? ನೀನು ಕ್ರೀಡಾಂಗಣಕ್ಕೆ ಬರುತ್ತಿಯಲ್ಲ ಎಂದು ತರಳಬಾಳು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಶ್ನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ