AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ ಚಾರ್ಜ್​ ಹಾಕೋಕೂ ದುಡ್ಡು ಕೊಡ್ಬೇಕು, ಡೈಪರ್​ ತಂದುಕೊಟ್ರೆ ಅದನ್ನೂ ಮಾರ್ತಾರೆ​, ಇವರೇ ನಮ್ಮಪ್ಪನ್ನ ಸಾಯಿಸಿದ್ದು: ಮಕ್ಕಳ ಆಕ್ರೋಶ

ಎಲ್ಲಿ ಹೋದ್ರೂ, ಎಲ್ಲದಕ್ಕೂ ದುಡ್ಡು ದುಡ್ಡು ಅಂತ ಸಾಯ್ತಾರೆ. ಮೊಬೈಲ್ ಚಾರ್ಜ್ ಹಾಕ್ಬೇಕು ಅಂದ್ರೂ, ರೋಗಿನಾ ನೋಡ್ಬೇಕಂದ್ರೂ ದುಡ್ಡು ಕೇಳ್ತಾರೆ. ಈಗ ದುಡ್ಡು ಕೊಡ್ತೇನೆ ನಮ್ಮ ತಂದೆಯನ್ನ ವಾಪಾಸ್ ಕೊಡ್ತಾರಾ?

ಮೊಬೈಲ್​ ಚಾರ್ಜ್​ ಹಾಕೋಕೂ ದುಡ್ಡು ಕೊಡ್ಬೇಕು, ಡೈಪರ್​ ತಂದುಕೊಟ್ರೆ ಅದನ್ನೂ ಮಾರ್ತಾರೆ​, ಇವರೇ ನಮ್ಮಪ್ಪನ್ನ ಸಾಯಿಸಿದ್ದು: ಮಕ್ಕಳ ಆಕ್ರೋಶ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: May 05, 2021 | 8:51 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಗಂಭೀರಾವಸ್ಥೆಗೆ ತಲುಪಿದ್ದರೂ ಕೆಲ ಆಸ್ಪತ್ರೆಗಳು ಮಾತ್ರ ರೋಗಿಗಳಿಂದ ಹಣ ದೋಚುವುದರಲ್ಲಿ ಮಗ್ನರಾಗಿದ್ದಾರೆ. ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಈ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದ್ದು ನಿನ್ನೆ (ಮೇ.4) ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಮೇಲೆ ಅನುಮಾನ ಇನ್ನಷ್ಟು ಬಲವಾಗಿದೆ. ಇದೀಗ ಬೆಂಗಳೂರು ಆಸ್ಪತ್ರೆಗಳ ಧನದಾಹದಿಂದಾಗಿ 63ವರ್ಷದ ತಂದೆಯನ್ನು ಕಳೆದುಕೊಂಡ ಮಕ್ಕಳು ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಯನ್ನು ಕರೆದುಕೊಂಡು 100 ಆಸ್ಪತ್ರೆಗಳನ್ನು ಸುತ್ತಿದರೂ ಆಕ್ಸಿಜನ್ ಸಿಕ್ಕಿಲ್ಲ. ಪ್ರೈವೇಟ್ ಆಸ್ಪತ್ರೆಯವರು ಒಳಗಡೆ ಬಿಟ್ಟಿಕೊಳ್ಳಲು ಹಿಂದೇಟು ಹಾಕಿದರು. ಎಲ್ಲಿ ಹೋದರೂ BU ನಂಬರ್ ಅಂತ ಕೇಳ್ತಾರೆ. ಆದ್ರೆ, 4 ದಿನ ಕಳೆದ್ರೂ ನಂಬರ್ ಜನರೇಟ್ ಆಗಿಲ್ಲ. ನೈಸರ್ಗಿಕ ಗಾಳಿ ಸಿಕ್ಕು ಅದರಿಂದಾದರೂ ತಂದೆ ಉಳಿಯಬಹುದು ಎಂದು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದೀವಿ. ಅಂತೂ ಕೊನೆಗೆ ಸರ್ಕಾರಿ ಆಸ್ಪತ್ರೆ ಬೌರಿಂಗ್​ನಲ್ಲಿ‌ ಬೆಡ್ ಸಿಕ್ಕಿತು. ಆದ್ರೆ ಅವರುಆಕ್ಸಿಜನ್ ಕೊಡದೇ ನಮ್ಮ ತಂದೆಯನ್ನು ಸಾಯಿಸಿಯೇ ಬಿಟ್ಟರು ಎಂದು ಮೃತ ವ್ಯಕ್ತಿಯ ಮಗ ಹಾಗೂ ಮಗಳು ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಒಂದು ರೀತಿಯಾದ್ರೆ ಸರ್ಕಾರಿ ಆಸ್ಪತ್ರೆಗಳದ್ದು ಇನ್ನೊಂದು ರೀತಿಯ ಅವಸ್ಥೆ. ಎಲ್ಲಿ ಹೋದ್ರೂ, ಎಲ್ಲದಕ್ಕೂ ದುಡ್ಡು ದುಡ್ಡು ಅಂತ ಸಾಯ್ತಾರೆ. ಮೊಬೈಲ್ ಚಾರ್ಜ್ ಹಾಕ್ಬೇಕು ಅಂದ್ರೂ, ರೋಗಿನಾ ನೋಡ್ಬೇಕಂದ್ರೂ ದುಡ್ಡು ಕೇಳ್ತಾರೆ. ಈಗ ದುಡ್ಡು ಕೊಡ್ತೇನೆ ನಮ್ಮ ತಂದೆಯನ್ನ ವಾಪಾಸ್ ಕೊಡ್ತಾರಾ? ಕುಡಿಯೋಕೆ ನೀರು ಕೇಳಿದ್ರೆ ಕೊಡಲ್ವಂತೆ. ಡೈಪರ್​ ಹಾಕಿ ಅಂತ ತಂದು ಕೊಟ್ರೆ ಅದನ್ನೂ ಹಾಕಿಲ್ಲ. ಆಸ್ಪತ್ರೆಯಲ್ಲಿ ಎಲ್ಲವನ್ನೂ ಮಾರಿಕೊಳ್ತಿದ್ದಾರೆ. ನಮ್ಮ ತಂದೆ ಮೈ ಮೇಲಿನ ಒಡವೆಗಳನ್ನೆಲ್ಲಾ ಕೊಟ್ರೂ ಅವರನ್ನ ಶವವಾಗಿ ಕೊಟ್ಟಿದ್ದಾರೆ ಅಂತ ಮೃತರ ಮಗಳು ಕಣ್ಣೀರಿಟ್ಟಿದ್ದಾರೆ.

ತಂದೆಯನ್ನ ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಆಕ್ಸಿಜನ್​ ಸಿಗದೇ ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರ ಸಾವಿಗೆ ಈ ಸರ್ಕಾರವೇ ಕಾರಣ. ನಾವು ಇಬ್ಬರು ಮಕ್ಕಳಿದ್ದರೂ ತಂದೆಯನ್ನ ಉಳಿಸಿಕೊಳ್ಳಲಾಗಲಿಲ್ಲ. ಈ ರೀತಿ ವ್ಯವಸ್ಥೆ ಇದ್ದರೆ ಏನು ಮಾಡ್ಬೇಕು? ಬರೀ ಹಣಕ್ಕಾಗಿ ಆಸ್ಪತ್ರೆಗಳು ಕೆಲಸ ಮಾಡ್ತಾವಾ? ಅಲ್ಲಿ ಇರುವವರಿಗೆ ಹಣ ಕೊಟ್ಟರೆ ಸತ್ತವರನ್ನೂ ಬದುಕಿಸ್ತಾರಾ? ಎಂದು ದುಃಖ ಹೊರಹಾಕಿದ್ದಾರೆ.

ಇದನ್ನೂ ಓದಿ: 12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ – ಸಂಸದ ತೇಜಸ್ವಿ ಸೂರ್ಯ 

ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್​ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ

ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ