AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದ ಪತ್ನಿಯ ಹತ್ಯೆ; ಮೈಸೂರು, ಚಿತ್ರದುರ್ಗದಲ್ಲಿ ಪತ್ಯೇಕ ಘಟನೆ

ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು ದಿನಗಳೆದಂತೆ ಕಿರಣ್ ವಿಪರೀತ ಮದ್ಯ ವ್ಯಸನಿಯಾದ. ಕಿರಣ್ ದುಡಿಯಲೂ ಹೋಗದೆ ಹೆಂಡತಿಯನ್ನ ಹಣಕ್ಕೆ ಪೀಡಿಸುತ್ತಿದ್ನಂತೆ. ಎಣ್ಣೆ ಚಟ ಬಿಡಿಸಲು ಕಿರಣ್ನನ್ನು ಮದ್ಯ ವ್ಯಸನದ ಶಿಬಿರ ಸೇರಿಸಲಾಗಿತ್ತು.

ಪ್ರೀತಿಸಿ ಮದುವೆಯಾದ ಪತ್ನಿಯ ಹತ್ಯೆ; ಮೈಸೂರು, ಚಿತ್ರದುರ್ಗದಲ್ಲಿ ಪತ್ಯೇಕ ಘಟನೆ
ಪ್ರೀತಿಸಿ ಮದುವೆಯಾದ ಪತ್ನಿಯ ಹತ್ಯೆ; ಮೈಸೂರು, ಚಿತ್ರದುರ್ಗದಲ್ಲಿ ಪತ್ಯೇಕ ಘಟನೆ
TV9 Web
| Updated By: ಆಯೇಷಾ ಬಾನು|

Updated on: Feb 14, 2022 | 7:45 AM

Share

ಮೈಸೂರು: ಗಂಡ-ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಮಾತೊಂದಿದೆ. ಆದ್ರೆ, ಇತ್ತೀಚೆಗೆ ಆ ಗಾದೆ ಮಾತು ಪದೇ ಪದೇ ಸುಳ್ಳಾಗ್ತಿದೆ. ಯಾಕಂದ್ರೆ 11 ವರ್ಷ ಸಂಸಾರ ಮಾಡಿದ ಪತಿಯೊಬ್ಬ ಹೆಂಡತಿಯನ್ನೇ ಕೊಚ್ಚಿ ಹಾಕಿರೋ ಆರೋಪ ಕೇಳಿ ಬಂದಿದ್ರೆ, ಇನ್ನೊಂದು ಕಡೆ ಪ್ರೀತಿಸಿ ಮದುವೆಯಾದವನೇ ತನ್ನಾಕೆಯನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಚಿತ್ರದುರ್ಗ ನಗರದ ಹೊರಪೇಟೆ ಬಡಾವಣೆ ನಿವಾಸಿ ಸೈಯದ್ ಮುಬಾರಕ್ ಉನ್ನಿಸಾ, ಕಳೆದ 11 ವರ್ಷದ ಹಿಂದೆ ಇಸ್ಮಾಯಿಲ್ ಜಬೀವುಲ್ಲಾ ಎಂಬುವವನನ್ನು ಮದುವೆ ಆಗಿದ್ದಳು. ಆಟೋ ಚಾಲಕನಾಗಿದ್ದ ಜಬೀವುಲ್ಲಾ, ಟೈಲ್ಸ್ ಕೆಲಸವನ್ನೂ ಮಾಡ್ತಿದ್ದ. ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಗಂಡು, ಒಬ್ಬ ಹೆಣ್ಣುಮಗಳಿದ್ದಾರೆ. ಆದ್ರೆ, ದಿನಕಳೆದಂತೆ ಪತಿ ವರದಕ್ಷಿಣೆ ಕಿರುಕುಳ ನೀಡತೊಡಗಿದ್ದಾನೆ. ಉನ್ನಿಸ್ಸಾ ಕುಟುಂಬಸ್ಥರು ಆಗಾಗ ಕೈಲಾದಷ್ಟು ಹಣ ಸಹಾಯ ಮಾಡಿದ್ದಾರೆ. ಆದ್ರೂ, ಪತ್ನಿಗೆ ಹಿಂಸೆ ಕಡಿಮೆಯಾಗಿಲ್ಲ. ಪತಿ ಕಾಟಕ್ಕೆ ಬೇಸತ್ತು ಸುಮಾರು 4 ವರ್ಷ ಉನ್ನಿಸ್ಸಾ ತವರು ಮನೆಯಲ್ಲೇ ಇದ್ದಳು. ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಸಹ ದಾಖಲಿಸಿದ್ದಳು. ಆದ್ರೆ, ಎರಡು ತಿಂಗಳ ಹಿಂದೆ ದರ್ಗಾವೊಂದರಲ್ಲಿ ಸಮಾಜದ ಮುಖಂಡರು ರಾಜಿ ಮಾಡಿಸಿದ್ದಾರೆ. ಆದ್ರೆ, ಮತ್ತೆ ಜಗಳ ಮಾಡಿ ಕೊಲೆ ಮಾಡಿದ್ದಾನೆಂಬುದು ಉನ್ನಿಸ್ಸಾ ಕುಟುಂಬಸ್ಥರ ವಾದ. ಇನ್ನು ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಕೋಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಜಬೀವುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ಇತ್ತ ಮೈಸೂರಿನಲ್ಲೂ ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ ಅಂದ್ಹಾಗೆ ಕಿರಣ್ ಎಂಬುವವನನ್ನ ಸಂಧ್ಯಾ(23) ನಾಲ್ಕು ವರ್ಷಗಳ ಹಿಂದೆ ಇವರು ಪ್ರೀತಿಸಿ ಮದುವೆಯಾಗಿದ್ಳು. ಮೈಸೂರಿನ ಕ್ಯಾತಮಾರ‌ನಹಳ್ಳಿಯ ಅಂಬೇಡ್ಕರ್ ಕಾಲೋನಿ ನಿವಾಸಿಗಳು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು ದಿನಗಳೆದಂತೆ ಕಿರಣ್ ವಿಪರೀತ ಮದ್ಯ ವ್ಯಸನಿಯಾದ. ಕಿರಣ್ ದುಡಿಯಲೂ ಹೋಗದೆ ಹೆಂಡತಿಯನ್ನ ಹಣಕ್ಕೆ ಪೀಡಿಸುತ್ತಿದ್ನಂತೆ. ಎಣ್ಣೆ ಚಟ ಬಿಡಿಸಲು ಕಿರಣ್ನನ್ನು ಮದ್ಯ ವ್ಯಸನದ ಶಿಬಿರ ಸೇರಿಸಲಾಗಿತ್ತು. ಇತ್ತೀಚೆಗೆ ಸಂಬಂಧಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆ ಮನೆಗೆ ಬಂದಿದ್ದ ಕಿರಣ್ ಪತ್ನಿ ಜೊತೆ ಜಗಳ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಸಂಧ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಮೈಸೂರಿನ ಉದಯಗಿರಿ‌ ಪೊಲೀಸರು ಆರೋಪಿ ಕಿರಣ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಾರೆ ಸುಖವಾಗಿ ಬಾಳಿ ಬದುಕಬೇಕಿದ್ದವರು ಯಾರದ್ದೋ ತಪ್ಪಿಗಾಗಿ ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರಂತ.

ವರದಿ: ಚಿತ್ರದುರ್ಗದಿಂದ ಬಸವರಾಜ್ ಜೊತೆ ರಾಮ್ TV9 ಮೈಸೂರು

ಇದನ್ನೂ ಓದಿ: Taliban: ತಾಲಿಬಾನ್​ಅನ್ನು ಒಪ್ಪಿಕೊಂಡು-ಅಪ್ಪಿಕೊಳ್ಳುವುದಷ್ಟೇ ಈಗ ಪ್ರಪಂಚಕ್ಕೆ ಉಳಿದಿರುವ ಮಾರ್ಗ ಎಂದ ಜನಾಬ್​ ಇಮ್ರಾನ್​ ಖಾನ್!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ