
ಬೆಂಗಳೂರು: ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಬಂಧನದ ಹಿಂದಿನ ರೋಚಕ ಮಾಹಿತಿ ಇದೀಗ ಬಯಲಾಗಿದೆ. ನವೆಂಬರ್ 4ರಂದು ನಗರದ ಚಾಮರಾಜಪೇಟೆಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳಿಗೆ ಕೆಲ ಪೆಡ್ಲರ್ಗಳು ವಿದೇಶದಿಂದ ಗಾಂಜಾ ತರಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತಿತ್ತು. ವಿದೇಶಿ ಅಂಚೆ ಕಚೇರಿಗೆ ಪಾರ್ಸಲ್ನಲ್ಲಿ ಗಾಂಜಾ ತರಿಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.
ಇವರಿಬ್ಬರ ಜೊತೆ ದರ್ಶನ್ ಕುಮಾರ್ ಸಹ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ದರ್ಶನ್ ಕುಮಾರ್ ಗೋವಾದಲ್ಲಿ ಹೇಮಂತ್, ಸುನೀಶ್ಗೆ ಆಶ್ರಯ ನೀಡಿದ್ದ ಎಂಬ ಮಾಹಿತಿ ಸಹ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳ ಜೊತೆ ದರ್ಶನ್ ಕುಮಾರ್ ನಿಕಟ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.