Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ: ಗಮನ ಸೆಳೆದ ಲಂಬಾಣಿ ನೃತ್ಯ, ಕೋಲಾಟ

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 282ನೇ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ ನಡೆಯಿತು. ವಿಶೇಷವಾಗಿ ಲಂಬಾಣಿಗಳು ಎಂದರೆ ನೃತ್ಯ ಹಾಡು ಇಲ್ಲದೆ ಹೋದರೆ ಅದಕ್ಕೆ ಲಂಬಾಣಿ ಉತ್ಸವ ಎನ್ನುವುದೇ ತಪ್ಪು. ಇಂತಹ ಒಂದು ಉತ್ಸವಕ್ಕೆ ಸಾಕ್ಷಿ ಆಗಿದ್ದು ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನ.

ದಾವಣಗೆರೆಯಲ್ಲಿ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ: ಗಮನ ಸೆಳೆದ ಲಂಬಾಣಿ ನೃತ್ಯ, ಕೋಲಾಟ
ಲಂಬಾಣಿ ನೃತ್ಯ
Follow us
sandhya thejappa
|

Updated on: Mar 14, 2021 | 4:02 PM

ದಾವಣಗೆರೆ: ಲಂಬಾಣಿಗಳು ಎನ್ನುವ ಹೆಸರು ಕೇಳುತ್ತಿದ್ದಂತೆ ಎನೋ ಒಂದು ರೀತಿಯ ಖುಷಿ. ಅವರ ಬದುಕುವ ರೀತಿ, ಮಾತನಾಡುವ ಭಾಷೆ, ಹಾಡು-ಕುಣಿತ ಹೀಗೆ ಒಂದು ರೀತಿಯ ಸಂಭ್ರಮವೇ ಅವರ ಜೀವನ. ತನ್ನದೇ ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಲಂಬಾಣಿ ಸಮುದಾಯದ ರಾಜ್ಯಮಟ್ಟದ ಸಮ್ಮೇಳನ ನಿನ್ನೆ (ಫೆಬ್ರವರಿ 13) ಚನ್ನಗಿರಿಯಲ್ಲಿ ನಡೆಯಿತು. ಸಮ್ಮೇಳನದಲ್ಲಿ ಲಂಬಾಣಿ ನೃತ್ಯ, ಕೋಲಾಟ, ಜಾನಪದ ಶೈಲಿ ಇತರೆ ಕಲಾಪ್ರಕಾರಗಳು ಗಮನಸೆಳೆದವು.

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ 282ನೇ ಜಯಂತೋತ್ಸವ ಹಾಗೂ ರಾಜ್ಯಮಟ್ಟದ ಬಂಜಾರ ಜಾಗೃತಿ ಸಮಾವೇಶ ನಡೆಯಿತು. ವಿಶೇಷವಾಗಿ ಲಂಬಾಣಿಗಳು ಎಂದರೆ ನೃತ್ಯ ಹಾಡು ಇಲ್ಲದೆ ಹೋದರೆ ಅದಕ್ಕೆ ಲಂಬಾಣಿ ಉತ್ಸವ ಎನ್ನುವುದೇ ತಪ್ಪು. ಇಂತಹ ಒಂದು ಉತ್ಸವಕ್ಕೆ ಸಾಕ್ಷಿ ಆಗಿದ್ದು ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನ. ವಿಶೇಷವಾಗಿ ಕುಡಚಿ ಕ್ಷೇತ್ರದ ಶಾಸಕ, ತಾಂಡಾ ನಿಗಮ ಅಭಿವೃದ್ಧಿ ಅಧ್ಯಕ್ಷ ಪಿ.ರಾಜೀವ್ ಉದ್ಘಾಟನೆ ಮಾಡಿದರು. ರಾಜ್ಯ ಬಂಜಾರ ಸಮುದಾಯದ ಎಲ್ಲಾ ನಾಯಕರು, ಬಂಜಾರ ಸಂಘಗಳ ಪದಾಧಿಕಾರಿಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಮಾತನಾಡಿದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಬುಡಕಟ್ಟು ಸಂಪ್ರದಾಯದ ಬಂಜಾರ ಸಂಸ್ಕೃತಿ ಇನ್ನು ಜೀವಂತವಾಗಿದೆ. ಬಂಜಾರ ತಾಂಡಾಗಳಲ್ಲಿ ಕಾಂಕ್ರೀಟ್ ರಸ್ತೆ, ಬಂಜಾರ ಸಮುದಾಯ ಭವನ, ಕಂದಾಯ ಗ್ರಾಮ ಘೋಷಣೆ, ಬಗರ್ ಹುಕಂ ಜಮೀನಿನಲ್ಲಿ ಉಳುಮೆ ಮಾಡಿರುವವರಿಗೆ ಹಕ್ಕು ಪತ್ರ ನೀಡುವುದು ಹೀಗೆ ಹಲವು ಅಭಿವೃದ್ಧಿ ಕೆಲಸಗಳನ್ನು ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಇಂತಹದೊಂದು ಸಮಾವೇಶ ನಡೆದಿರುವುದು ಲಂಬಾಣಿ ಸಮುದಾಯ ಜಾಗೃತವಾಗಿರುವುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.

ಲಂಬಾಣಿ ಸಮುದಾಯದ ಉತ್ಸವ

ಚನ್ನಗಿರಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಲಂಬಾಣಿ ಉತ್ಸವ

ಗೌರಿ ಹುಣ್ಣಿಮೆಗೆ ಬಂಜಾರ ಸಮುದಾಯದ ಸಂಭ್ರಮ: 9 ದಿನ ಯುವತಿಯರಿಂದ ಕಠಿಣ ವ್ರತ

Perseverance Rover: ಸೆರೆಯಾಯ್ತು ಮಂಗಳನ ಅಂಗಳದ ಸದ್ದು, ನೀವೂ ಕೇಳಿನೋಡಿ

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ