ಮಲ್ಲಿಕಾರ್ಜುನ್​ ಖರ್ಗೆ ಅಳಿಯ ಕೂಡ ಕೋಟ್ಯಾಧೀಶ; ಆಸ್ತಿವಿವರ ಇಲ್ಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 12, 2024 | 7:58 PM

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಇಂದು(ಏ.12) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಆಸ್ತಿವಿವರ ಸಲ್ಲಿಸಿದರು.

ಮಲ್ಲಿಕಾರ್ಜುನ್​ ಖರ್ಗೆ ಅಳಿಯ ಕೂಡ ಕೋಟ್ಯಾಧೀಶ; ಆಸ್ತಿವಿವರ ಇಲ್ಲಿದೆ
ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ನಾಮಪತ್ರ ಸಲ್ಲಿಕೆ
Follow us on

ಕಲಬುರಗಿ, ಏ.12: 2024 ರ ಲೋಕಸಭಾ ಚುನಾವಣಾ(Lok sabha election) ಅಖಾಡ ದಿನೇ ದಿನೇ ರಂಗೇರುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆಯಲ್ಲೂ ಭರಪೂರ ಗ್ಯಾರಂಟಿ ಯೋಜನೆಗಳನ್ನ ಘೋಷಿಸಿದೆ. ಅದರಂತೆ ಇಂದು(ಏ.12) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ, ಕಲಬುರಗಿ(Kalaburagi) ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ (Radhakrishna) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಧಾಕೃಷ್ಣ ಅವರು ಆಸ್ತಿವಿವರ ಸಲ್ಲಿಸಿದರು.

ಮಲ್ಲಿಕಾರ್ಜುನ್​ ಖರ್ಗೆ ಅಳಿಯ ಕೋಟ್ಯಾಧೀಶ

ಇಂದು ನಾಮಪತ್ರ ಸಲ್ಲಿಕೆ ಹಿನ್ನಲೆ ಆಸ್ತಿವಿವರ ಸಲ್ಲಿಸಿದರು. ರಾಧಾಕೃಷ್ಣ ದೊಡ್ಡಮನಿ ಹಾಗೂ ಪತ್ನಿ ಜಯಶ್ರಿ ಇಬ್ಬರು ಕೋಟ್ಯಾಧಿಪತಿಗಳು. ರಾಧಾಕೃಷ್ಣ ದೊಡ್ಡಮನಿ ಒಟ್ಟು ಆಸ್ತಿ 29.48 ಕೋಟಿ ರೂ. ಇದೆ. ಜೊತೆಗೆ 4.18 ಕೋಟಿ ಸಾಲ ಪಡೆದಿದ್ದಾರೆ.
ಇವರ ಹೆಸರಲ್ಲಿ ಇನ್ನೋವಾ, ಮಹಿಂದ್ರಾ ಬುಲೆರೋ ಕಾರುಗಳಿವೆ. ಇನ್ನು 255 ಗ್ರಾಂ ಚಿನ್ನ, 6 ಕೆ.ಜಿ ಬೆಳ್ಳಿ ಹೊಂದಿರುವ ರಾಧಕೃಷ್ಣ, 18 ಎಕರೆ ಕೃಷಿ ಜಮೀನು ಹೊಂದಿದರೆ, 16.32 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಕೂಡ ಇವರ ಹೆಸರಲ್ಲಿದೆ.
2.59 ಕೋಟಿಯ ವಾಣಿಜ್ಯ ಕಟ್ಟಡ ಕೂಡ ಇದೆ. ಇನ್ನು ರಾಧಾಕೃಷ್ಣ ಅವರ ಪತ್ನಿ ಡಾ.ಜಯಶ್ರಿ ಕೂಡ 13.03 ಕೋಟಿ ಆಸ್ತಿ ಒಡತಿಯಾಗಿದ್ದಾರೆ. ಇವರ ಬಳಿ 810 ಗ್ರಾಂ ಚಿನ್ನ, 11 ಕೆ ಜಿ ಬೆಳ್ಳಿ ಇದೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಇನ್ನು ಇಂದು ಕಲಬುರಗಿ ನಗರದ  ಎನ್‌ವಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಿತ್ತು. ಸಮಾವೇಶವನ್ನ ಜ್ಯೋತಿ ಬೆಳಗಿಸುವುದರ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ‘ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನ ಕೊಟ್ಟಿದ್ದೇನೆಂದು ಖರ್ಗೆ ಹೇಳಿದರು. ನಮ್ಮದು ಇನ್ನೂ 25 ಗ್ಯಾರಂಟಿಗಳಿದ್ದು, ಅದನ್ನ ಮಾಡಿ ತೋರಿಸುತ್ತೇವ., ಖರ್ಗೆ ಒಳ್ಳೆ‌ಕೆಲಸ ಮಾಡಿದ್ದಾರೆಂದು ಹೇಳ್ತಾರೆ. ಆದರೆ, ಮತಗಟ್ಟೆಗೆ ಹೋದಾಗ ಏನು ಅನ್ಸುತ್ತೋ ಗೋತ್ತಿಲ್ಲ, ನಮ್ಮನ್ನೆ ಮರೆತು ಬಿಡ್ತಾರೆ. ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಕೆಲಸ ಮಾಡಲು ಬದ್ಧನಾಗಿದ್ದೇನೆಂದು ಖರ್ಗೆ ಭಾವುಕರಾದರು. ಅದೇನೆ ಇರಲಿ ಕಾಂಗ್ರೆಸ್ ಗ್ಯಾರಂಟಿ ವರ್ಸೆಸ್ ಮೋದಿ ಗ್ಯಾರಂಟಿ ಮಧ್ಯೆ ಇದೀಗ ವಾರ್ ಶುರುವಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆ ಮೇಲೆ ಯಾವ ಪ್ರಭಾವ ಬೀರುತ್ತವೆ ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ