ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್​ನಲ್ಲಿ ಹೈದರಾಬಾದ್​ಗೆ ರವಾನೆ

| Updated By: sandhya thejappa

Updated on: Aug 28, 2021 | 9:41 AM

ಹತ್ತೊಂಬತ್ತು ವರ್ಷದ ಯುವಕನೋರ್ವ ಮಹಡಿ ಮೇಲಿಂದ ಕಾಲು ಜಾರಿ ಬಿದ್ದಿದ್ದ. ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು.

ಕಲಬುರಗಿ ಯುವಕನ ಅಂಗಾಂಗ ದಾನ; ಜಿರೋ ಟ್ರಾಫಿಕ್​ನಲ್ಲಿ ಹೈದರಾಬಾದ್​ಗೆ ರವಾನೆ
ಅಂಗಾಂಗ ರವಾನೆಗೆ ಜಿರೋ ಟ್ರಾಫಿಕ್
Follow us on

ಕಲಬುರಗಿ: ಇತ್ತೀಚೆಗೆ ಅಂಗಾಗ ದಾನದ ಪರಿಕಲ್ಪನೆ ಹೆಚ್ಚಾಗುತ್ತಿದೆ. ಮೃತ ವ್ಯಕ್ತಿಯ ಕೆಲ ಅಂಗಾಗಗಳನ್ನು ನಿಗದಿತ ಸಮಯದಲ್ಲಿ ತೆಗೆದು, ಬೇರೆಯವರಿಗೆ ಹಾಕಿದರೆ ಅನೇಕರ ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಲಬುರಗಿ ನಗರದ ಚಿರಾಯು ಆಸ್ಪತ್ರೆಯ ವೈದ್ಯರು ಕೆಲಸ ಮಾಡಿದ್ದು, ಇಂದು (ಆಗಸ್ಟ್ 28) ಕಲಬುರಗಿಯಿಂದ ಜಿರೋ ಟ್ರಾಫಿಕ್ ಮೂಲಕ ಮೃತ ಯುವಕನ ಅಂಗಾಗವನ್ನು ಹೈದರಾಬಾದ್​ಗೆ ಕಳಿಸಿ, ಅಲ್ಲಿಂದ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ.

ಘಟನೆ ವಿವರ
ಹತ್ತೊಂಬತ್ತು ವರ್ಷದ ಯುವಕನೋರ್ವ ಮಹಡಿ ಮೇಲಿಂದ ಕಾಲು ಜಾರಿ ಬಿದ್ದಿದ್ದ. ಆತನನ್ನು ಕಲಬುರಗಿ ನಗರದ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನದ ಹಿಂದೆ ಆತನ ಮೆದುಳು ನಿಷ್ಕ್ರಿಯವಾಗಿತ್ತು. ಈ ಬಗ್ಗೆ ವೈದ್ಯರು ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಜೊತೆಗೆ ಅಂಗಾಗ ಧಾನದ ಬಗ್ಗೆಯೂ ಮಾಹಿತಿ ನೀಡಿದ್ದರು. ವೈದ್ಯರ ಮಾತಿಗೆ ಯುವಕನ ಕುಟುಂಬದವರು ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಅನೇಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಯುವಕನ ಮೆದುಳು ನಿಷ್ಕ್ರಿಯವಾಗಿದ್ದನ್ನು ಖಚಿತಪಡಿಸಿಕೊಂಡು, ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬರಿಗೆ ಲಿವರ್ ಅವಶ್ಯಕತೆ ಇತ್ತು. ಹೀಗಾಗಿ ಇಂದು ಮುಂಜಾನೆ ಮೃತ ಯುವನಕ ಲಿವರ್​ನ ತೆಗೆದು ಹೈದರಾಬಾದ್​ಗೆ ಕಳುಹಿಸಲಾಗಿದೆ. ನಂತರ ಹೈದರಾಬಾದ್​ನಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.

ಜಿರೋ ಟ್ರಾಫಿಕ್ ವ್ಯವಸ್ಥೆ
ಮೃತರ ಅಂಗಾಗಳನ್ನು ತೆಗೆದು ಬೇರೆಯವರಿಗೆ ಹಾಕಬೇಕಾದರೆ ನಿಗದಿತ ಸಮಯದಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು. ಹೀಗಾಗಿ ವಿಳಂಬವನ್ನು ತಪ್ಪಿಸಲು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಕಲಬುರಗಿಯಿಂದ ಹೈದರಾಬಾದ್ ವರಗೆ ಕಲಬುರಗಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಮುಂದೆ ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಕೂಡಾ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. 221 ಕಿಲೋಮೀಟರ್ ವರಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಹೈದರಾಬಾದ್ ವಿಮಾನ ನಿಲ್ದಾಣ ಮುಟ್ಟಲು ನಾಲ್ಕು ಗಂಟೆ ಸಮಯಬೇಕು. ಆದರೆ ಜಿರೋ ಟ್ರಾಫಿಕ್​ನಿಂದಾಗಿ ಕೇವಲ ಎರಡುವರೆ ಗಂಟೆಯಲ್ಲಿ ಹೈದರಾಬಾದ್ ತಲುಪಬಹುದಾಗಿದೆ.

ಮಹಡಿ ಮೇಲಿಂದ ಬಿದ್ದಿದ್ದ ಯುವಕನ ಮೆದುಳು ನಿಷ್ಕ್ರಿಯ ಆಗಿತ್ತು. ಕುಟುಂಬದವರು ಅಂಗಾಗ ದಾನ ಮಾಡಲು ಒಪ್ಪಿಕೊಂಡಿದ್ದರು. ಹೀಗಾಗಿ ಇಂದು ಬೆಂಗಳೂರನಿಂದ ಬಂದಿದ್ದ ನುರಿತ ವೈದ್ಯರ ತಂಡ, ಯುವಕನ ಲಿವರ್ನ ತಗೆದು ಅದನ್ನು ಬೆಂಗಳೂರಿಗೆ ತಗೆದುಕೊಂಡು ಹೋಗಿದ್ದಾರೆ. ಲಿವರ್ ಸಾಗಿಸಲು ಪೊಲೀಸರು ಮತ್ತು ರಾಜ್ಯ ಸರ್ಕಾರ ಸಹಾಯ ಮಾಡಿದೆ ಎಂದು ಚಿರಾಯು ಆಸ್ಪತ್ರೆ ವೈದ್ಯ ಡಾ.ಮಂಜುನಾಥ್ ಹೇಳಿದರು.

ನಮ್ಮ ಮಗನನ್ನು ಉಳಿಸಿಕೊಳ್ಳಲು ನಾವು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಆತನಿಂದ ಬೇರೆಯವರಿಗೆ ಅನಕೂಲವಾಗಲೆಂದು ಅಂಗಾಗ ದಾನ ಮಾಡಿದ್ದೇವೆ ಅಂತ ಯುವಕನ ಕುಟುಂಬಸ್ಥರು ತಿಳಿಸಿದರು.

ಇದನ್ನೂ ಓದಿ

ಹಾಸನದಲ್ಲಿ ಪುರಾತನ ಕಾಲದ ಶಿವಲಿಂಗವನ್ನು ಅಗೆದು ತೆಗೆದ ಆರೋಪಿಗಳ ವಿರುದ್ಧ ಕೇಸ್!

ಕೋಲಾರದ ಕಲ್ಲು ಕುಟುಕರ ಸವಾಲಿನಂತಹ ಕಷ್ಟದ ಕೆಲಸಕ್ಕೆ ಬೇಕಿದೆ ಕಾನೂನಾತ್ಮಕ ಪರಿಹಾರ

(young man organs were transported From Kalaburagi to Hyderabad by Zero traffic)

Published On - 9:39 am, Sat, 28 August 21