AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಸರೋಜಿನಿ ಮಹಿಷಿ ‌ವರದಿ‌: ಱಲಿ ವೇಳೆ ತಟ್ಟಲಿದೆ ಟ್ರಾಫಿಕ್ ಜಾಮ್ ಸಮಸ್ಯೆ

ಬೆಂಗಳೂರು: ಡಾ. ಸರೋಜಿನಿ ಮಹಿಷಿ ‌ವರದಿ‌ ಜಾರಿ ಮಾಡುವಂತೆ ಒತ್ತಾಯಿಸಿ ಇಂದು 10 ಗಂಟೆಗೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ‌ರೈಲು‌ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಸುಮಾರು 11 ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ರ್ಯಾಲಿ ‌ಆರಂಭವಾಗಲಿದೆ. 11:30 ಕ್ಕೆ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 12 ಗಂಟೆಗೆ ಆನಂದ್ ರಾವ್ ಸರ್ಕಲ್​ಗೆ ಆಗಮಿಸಿ. 12 :30 ಕ್ಕೆ ಆನಂದ್ ರಾವ್ ಸರ್ಕಲ್ ಪ್ಲೈ-ಓವರ್​ಗೆ ತಲುಪಲಿದ್ದಾರೆ. […]

ಡಾ. ಸರೋಜಿನಿ ಮಹಿಷಿ ‌ವರದಿ‌: ಱಲಿ ವೇಳೆ ತಟ್ಟಲಿದೆ ಟ್ರಾಫಿಕ್ ಜಾಮ್ ಸಮಸ್ಯೆ
ಸಾಧು ಶ್ರೀನಾಥ್​
|

Updated on:Feb 13, 2020 | 10:11 AM

Share

ಬೆಂಗಳೂರು: ಡಾ. ಸರೋಜಿನಿ ಮಹಿಷಿ ‌ವರದಿ‌ ಜಾರಿ ಮಾಡುವಂತೆ ಒತ್ತಾಯಿಸಿ ಇಂದು 10 ಗಂಟೆಗೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ‌ರೈಲು‌ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಸುಮಾರು 11 ಗಂಟೆಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ರ್ಯಾಲಿ ‌ಆರಂಭವಾಗಲಿದೆ.

11:30 ಕ್ಕೆ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 12 ಗಂಟೆಗೆ ಆನಂದ್ ರಾವ್ ಸರ್ಕಲ್​ಗೆ ಆಗಮಿಸಿ. 12 :30 ಕ್ಕೆ ಆನಂದ್ ರಾವ್ ಸರ್ಕಲ್ ಪ್ಲೈ-ಓವರ್​ಗೆ ತಲುಪಲಿದ್ದಾರೆ. 1 ಗಂಟೆಗೆ ಫ್ರೀಡಂ ಪಾರ್ಕ್​ಗೆ ಬಂದು ಸುಮಾರು ‌2ಗಂಟೆವರೆಗೂ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಿದ್ದಾರೆ. ಸರ್ಕಾರಕ್ಕೆ ವರದಿ ಜಾರಿಗೆ ಒತ್ತಾಯಿಸಿ ಮನವಿ ಮಾಡಲು ಹೋರಾಟದ ಪ್ರತಿಭಟನೆ ನಡೆಯಲಿದೆ.

ವಾಹನ ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ: ಕನ್ನಡಪರ ಸಂಘಟನೆಗಳಿಂದ ಬೃಹತ್ ಱಲಿ ಹಮ್ಮಿಕೊಂಡಿರುವುದರಿಂದಾಗಿ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‌ಗೆ ಱಲಿ ನಡೆಯುವ ವೇಳೆ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದೆ. ಮೆಜೆಸ್ಟಿಕ್, ಕೆ.ಜಿ.ರಸ್ತೆ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ರಸ್ತೆ, ಆನಂದ್‌ರಾವ್ ಸರ್ಕಲ್, ರೇಸ್ ಕೋರ್ಸ್ ರೋಡ್, K.R.ಸರ್ಕಲ್ ಸಂಪರ್ಕಿಸುವ ರಸ್ತೆ, ಕಾರ್ಪೊರೇಷನ್ ‌ಸರ್ಕಲ್, ಫ್ರೀಡಂಪಾರ್ಕ್‌ ‌ರಸ್ತೆಯಲ್ಲಿ ಟ್ರಾಫಿಕ್ ‌ಜಾಮ್ ಉಂಟಾಗಲಿದೆ.

Published On - 10:07 am, Thu, 13 February 20