AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಭರ್ತಿ; ಲಿಂಗನಮಕ್ಕಿಯಲ್ಲಿ ಭಾರಿ ಕುಸಿತ

ರಾಜ್ಯದ ಪ್ರಮುಖ ಆರು ಜಲಾಶಯಗಳ ಇಂದಿನ (ಆ. 20, 2026) ನೀರಿನ ಮಟ್ಟ ವರದಿ ಇಲ್ಲಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ಆದರೆ, ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 38ರಷ್ಟು ನೀರಿನ ಸಂಗ್ರಹ ಕುಸಿದಿದೆ. ಕೆಆರ್‌ಎಸ್ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಒಳಹರಿವು ನಿಧಾನವಾಗಿದೆ.

ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಭರ್ತಿ; ಲಿಂಗನಮಕ್ಕಿಯಲ್ಲಿ ಭಾರಿ ಕುಸಿತ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 20, 2026 | 1:17 PM

Share

ಬೆಂಗಳೂರು, ಆ.20: ರಾಜ್ಯಾದ್ಯಂತ ಮಳೆಯ ಪ್ರಮಾಣದಲ್ಲಿ ಏರಿಳಿತ ಕಂಡುಬರುತ್ತಿದ್ದು, ಉತ್ತರ ಕರ್ನಾಟಕದ ಕೃಷ್ಣಾ ಹಾಗೂ ತುಂಗಭದ್ರಾ ನದಿ ಪಾತ್ರದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದರೆ, ಮಲೆನಾಡು ಹಾಗೂ ಹಳೆಯ ಮೈಸೂರು ಭಾಗದ ಪ್ರಮುಖ ಜಲಾಶಯಗಳಲ್ಲಿ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ನೀರಿನ ಸಂಗ್ರಹದಲ್ಲಿ ವ್ಯತ್ಯಾಸ ಕಂಡುಬಂದಿದೆ. ರಾಜ್ಯದ ಪ್ರಮುಖ 6 ಜಲಾಶಯಗಳ ಇಂದಿನ (20.08.2026) ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವರದಿ ಇಲ್ಲಿದೆ.

ಆಲಮಟ್ಟಿ ಹಾಗೂ ಬಸವಸಾಗರ ಡ್ಯಾಂ ಭರ್ತಿ:

ವಿಜಯಪುರ ಜಿಲ್ಲೆಯ ಆಲಮಟ್ಟಿ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ) ಆಣೆಕಟ್ಟು ಗರಿಷ್ಠ ಮಟ್ಟವಾದ 519.60 ಮೀಟರ್‌ಗಳಲ್ಲಿ 519.51 ಮೀಟರ್ ತಲುಪಿದ್ದು, ಬಾರೀ ಪ್ರಮಾಣದ ಹೊರಹರಿವು (58,658 ಕ್ಯೂಸೆಕ್) ದಾಖಲಾಗಿದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಭಾರಿ ಒಳಹರಿವು (57,500 ಕ್ಯೂಸೆಕ್) ಬರುತ್ತಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ತುಂಗಭದ್ರಾ ಜಲಾಶಯದ ಸ್ಥಿತಿ:

ವಿಜಯನಗರ/ಬಳ್ಳಾರಿ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ 94.51 TMC નીರು ಸಂಗ್ರಹವಾಗಿದ್ದು, ಪ್ರಸ್ತುತ 12,025 ಕ್ಯೂಸೆಕ್ ಒಳಹರಿವು ಇದೆ.

ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಕುಸಿತ:

ರಾಜ್ಯದ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ (94.58%) ಹೋಲಿಸಿದರೆ ಈ ಬಾರಿ ಶೇ. 56.36 ರಷ್ಟು ಮಾತ್ರ నీರು ಸಂಗ್ರಹವಾಗಿದ್ದು, ಸುಮಾರು 38% ನಷ್ಟು ಕಡಿಮೆ ಸಂಗ್ರಹ ಕಂಡುಬಂದಿದೆ.

ಇದನ್ನೂ ಓದಿ: ದಕ್ಷಿಣ ವಲಯ ಮಂಡಳಿ ಸಭೆ: ತಮಿಳುನಾಡು ಸಿಎಂ ವಿಜಯ್​​ ಮುಂದೆಯೇ ಕಾವೇರಿ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಕೆಆರ್‌ಎಸ್ ಮತ್ತು ಭದ್ರಾ ಡ್ಯಾಂ:

ಮಂಡ್ಯದ ಕೆಆರ್‌ಎಸ್ ಜಲಾಶಯದಲ್ಲಿ 109.15 ಅಡಿ ನೀರಿದ್ದು (ಒಟ್ಟು ಸಾಮರ್ಥ್ಯ 49.45 TMC ಪೈಕಿ 30.87 TMC ಸಂಗ್ರಹ), ನಿಧಾನಗತಿಯಲ್ಲಿ ನೀರು ಹರಿದುಬರುತ್ತಿದೆ.

ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ 174.4 ಅಡಿ ನೀರಿದ್ದು, 57.63 TMC ನೀರು ಸಂಗ್ರಹವಾಗಿದೆ.

ಜಲಾಶಯದ ಹೆಸರು ಗರಿಷ್ಠ ಮಟ್ಟ ಇಂದಿನ ನೀರಿನ ಮಟ್ಟ ಒಳ ಹರಿವು (Inflow) ಹೊರ ಹರಿವು (Outflow) ಒಟ್ಟು / ಪ್ರಸ್ತುತ ಸಂಗ್ರಹ
ಕೃಷ್ಣರಾಜಸಾಗರ (KRS) 124.80 ಅಡಿ 109.15 ಅಡಿ 1,628 ಕ್ಯೂಸೆಕ್ 2,294 ಕ್ಯೂಸೆಕ್ 30.875 / 49.452 TMC
ಆಲಮಟ್ಟಿ (ಆಲಮಟ್ಟಿ ಡ್ಯಾಂ) 519.60 ಮೀ. 519.51 ಮೀ. 48,508 ಕ್ಯೂಸೆಕ್ 58,658 ಕ್ಯೂಸೆಕ್ ಸಂಪೂರ್ಣ ಭರ್ತಿಯತ್ತ
ತುಂಗಭದ್ರಾ (Tungabhadra) 1633.00 ಅಡಿ 1630.12 ಅಡಿ 12,025 ಕ್ಯೂಸೆಕ್ 8,028 ಕ್ಯೂಸೆಕ್ 94.514 / 105.788 TMC
ಬಸವಸಾಗರ (ನಾರಾಯಣಪುರ) 492.25 ಮೀ. 492.09 ಮೀ. 57,500 ಕ್ಯೂಸೆಕ್ 8,500 ಕ್ಯೂಸೆಕ್ ಗರಿಷ್ಠ ಮಟ್ಟದ ಸನ್ನಿಹಿತ
ಲಿಂಗನಮಕ್ಕಿ (Linganamakki) 1819.00 ಅಡಿ 1795.65 ಅಡಿ 11,097 ಕ್ಯೂಸೆಕ್ ಶೇ. 56.36% (30 ಸೆಂ.ಮೀ ಏರಿಕೆ)
ಭದ್ರಾ (Bhadra Dam) 186.00 ಅಡಿ 174.04 ಅಡಿ 4,533 ಕ್ಯೂಸೆಕ್ 204 ಕ್ಯೂಸೆಕ್ 57.631 / 71.535 TMC

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ