Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವರನ್ನು ಪರಚಿದ ಹುಲಿ ಉಗುರು: ವನ್ಯಜೀವಿ ಸಂಪತ್ತು, ಅಂಗಾಂಗ ಹೊಂದಿದವರಿಗೆ ಡಬಲ್ ಶಾಕ್, ನುಂಗಂಗಿಲ್ಲ..ಉಗುಳಂಗಿಲ್ಲ..

ಹುಲಿ ಉಗುರು, ಚರ್ಮ, ಆನೆದಂತ, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ವಸ್ತು ಹೊಂದಿದವಗೆ ಢವ ಢವ ಶುರುವಾಗಿದೆ. ಹತ್ತಿರ ಇಟ್ಟುಕೊಳ್ಳುವಂಗಿಲ್ಲ. ವಾಪಸ್ ಕೊಟ್ಟರೂ, ಹತ್ತಿರ ಇಟ್ಟುಕೊಂಡರು ಕೇಸ್ ಬೀಳುತ್ತೆ. ಇದರಿಂದ ಕೆಲವರಿಗೆ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ. ಇನ್ನು ಈ ಬಗ್ಗೆ ವನ್ಯಜೀವಿ ಅರಣ್ಯಾಧಿಕಾರಿ ಹಾಗೂ ಬೆಂಗಳೂರು ನಗರ DCF ರವೀಂದ್ರ ಕುಮಾರ್‌ TV9 ಜೊತೆ ಮಾತನಾಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಹಲವರನ್ನು ಪರಚಿದ ಹುಲಿ ಉಗುರು: ವನ್ಯಜೀವಿ ಸಂಪತ್ತು, ಅಂಗಾಂಗ ಹೊಂದಿದವರಿಗೆ ಡಬಲ್ ಶಾಕ್, ನುಂಗಂಗಿಲ್ಲ..ಉಗುಳಂಗಿಲ್ಲ..
ಪ್ರಾತಿನಿಧಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on:Oct 26, 2023 | 11:17 AM

ಬೆಂಗಳೂರು, (ಅಕ್ಟೋಬರ್ 26): ಬಿಗ್​ಬಾಸ್ ಸ್ಪರ್ಧಿ ಹಳ್ಳಿಕಾರ್ ಸಂತೋಷ್ ಬಂಧನವಾಗುತ್ತಿದ್ದಂತೆಯೇ ಹುಲಿ ಉಗುರಿನ ಲಾಕೆಟ್(Tiger Claw pendant )ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವನ್ಯಜೀವಿ ಸಂಪತ್ತು ಹಾಗೂ ಅಂಗಾಂಗ (wild animals organs) ಹೊಂದಿದ ಒಂದೊಂದೇ ಪ್ರಕರಣಗಳು ಬಯಲಿಗೆ ಬರುತ್ತಿವೆ. ಆದ್ರೆ, ಇದೀಗ ವನ್ಯಜೀವಿ ಸಂಪತ್ತು ಹಾಗೂ ಅಗಾಂಗ ಹೊಂದಿದವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಹುಲಿ ಉಗುರು, ಚರ್ಮ, ಆನೆದಂತ, ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ವಸ್ತು ಹೊಂದಿದವಗೆ ಢವ ಢವ ಶುರುವಾಗಿದೆ. ಏಕೆಂದರೆ ವನ್ಯಜೀವಿ ಸಂರಕ್ಷಣಾಧಿಕಾರಿಗಳಿಗೆ ವನ್ಯಜೀವಿ ಅಗಾಂಗ ಅಥವಾ ಸಂಪತ್ತು ವಾಪಸ್ ಕೊಂಡಂಗಿಲ್ಲ.. ಹತ್ತಿರ ಇಟ್ಟುಕೊಳ್ಳುವಂಗಿಲ್ಲ. ವಾಪಸ್ ಕೊಟ್ಟರೂ, ಹತ್ತಿರ ಇಟ್ಟುಕೊಂಡರು ಕೇಸ್ ಬೀಳುತ್ತೆ. ಇದರಿಂದ ಕೆಲವರಿಗೆ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ.

ಸದ್ಯ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಹುಲಿ ಉಗರಿನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿವಿಧ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಸಾಕಷ್ಟು ಜನರು ಸೆಲೆಬ್ರಿಟಿಗಳು ವನ್ಯಜೀವಿಗಳಿನಿಂದ ಮಾಡಿರುವ ವಸ್ತುಗಳನ್ನು ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದೀಗ ವಾಪಸ್ ವಲಯ ಅರಣ್ಯಧಿಕಾರೊಗಳಿಗೆ ಕೊಡುವುದಕ್ಕೆ ಹೋದರೂ ಕೇಸ್ ಬೀಳುತ್ತೆ. ಯಾರು ಕೊಟ್ಟರು? ಎಲ್ಲಿಂದ ಖರೀದಿಸಿದ್ರಿ? ಏಕೆ ಬೇಕಿತ್ತು? ಹೀಗೆ ಹತ್ತಾರು ಪ್ರಶ್ನೆಗಳನ್ನು ಅರಣಾಧಿಕಾರಿಗಳು ಕೇಳುತ್ತಾರೆ.

ಇದನ್ನೂ ಓದಿ: ಕಾಟಾಚಾರಕ್ಕೆ ಸೆಲೆಬ್ರಿಟಿ ಮನೆಗಳ ಪರಿಶೀಲನೆ, ನಾಮಕಾವಸ್ತೆ ನೊಟೀಸ್: ಅನುಮಾನ ಮೂಡಿಸಿದ ಅರಣ್ಯಾಧಿಕಾರಿಗಳ ನಡೆ

ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಇದ್ದರೂ ವಾಪಸ್ ನೀಡುವಂತೆ ಈ ಹಿಂದೆ ಕೇಂದ್ರ ಸರ್ಕಾರ ಎರಡು ಬಾರಿ ಅವಕಾಶ ನೀಡಿತ್ತು. ಟೈಮ್​ ಕೊಟ್ಟರೂ ಸಹ ಹಲವರು ನಿರ್ಲಕ್ಷ್ಯ ತೋರಿಸಿದ್ದರು. ಈಗ ವನ್ಯಜೀವಿ ಅಧಿಕಾರಿಗಳು ಭೇಟೆಗೆ ಮುಂದಾಗಿದ್ದು, ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಷ್ಟು ದಿನ ಸುಮ್ಮನಿದ್ದವರು ಈಗ ವ್ಯನ್ಯಜೀವಿ ಅಂಗಾಂಗಗಳನ್ನು ವಾಪಸ್ ಮಾಡಲು ಮುಂದಾಗುತ್ತಿದ್ದಾರೆ. ಸದ್ಯ ವಾಪಸ್ ಕೊಟ್ಟರೂ ಕೇಸ್ ಬೀಳುತ್ತೆ. ಇಟ್ಟುಕೊಂಡರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದರಿಂದ ವನ್ಯಜೀವಿಗಳ ವಸ್ತು ಹೊಂದಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವನ್ಯಜೀವಿ ಅರಣ್ಯಾಧಿಕಾರಿ ಹೇಳುವುದೇನು?

ಇನ್ನು ಈ ಬಗ್ಗೆ ವನ್ಯಜೀವಿ ಅರಣ್ಯಾಧಿಕಾರಿ ಹಾಗೂ ಬೆಂಗಳೂರು ನಗರ DCF ರವೀಂದ್ರ ಕುಮಾರ್‌ TV9 ಜೊತೆ ಮಾತನಾಡಿದ್ದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಬಂದ ಮೇಲೆ ಕೇಂದ್ರ ಸರ್ಕಾರ ಎರಡು ಭಾರಿ ಅವಕಾಶ ನೀಡಿತ್ತು. ಯಾರ ಬಳಿ ವನ್ಯಜೀವಿ ಸಂಪತ್ತು, ಉತ್ಪನ ಇದೆ ಹಾಗೂ ಯಾರು ವನ್ಯಜೀವಿ ಸಂಪತ್ತು ಹೊಂದಿರುವವರು ಪೋಟೋ ದಾಖಲೆ ಮಾಹಿತಿಯೊಂದಿಗೆ ನೊಂದಾಯಿಸಿ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗಿತ್ತು. ಆದ್ರೆ ಈಗ ಯಾರ ಬಳಿಯಾದ್ದರೂ ವನ್ಯಜೀವಿ ಉತ್ಪನ ಇದ್ರೆ ಹತ್ತಿರದ ವಲಯ ಅರಣ್ಯಧಿಕಾರಿಗಳಿಗೆ ನೀಡಬೇಕು. ಆದ್ರೆ ಇದಕ್ಕೆ ಸೂಕ್ತ ಕಾರಣ ನೀಡಬೇಕು, ಹೇಗೆ ಬಂತು? ಯಾರಿಂದ ಬಂತು ಅಂತಾ ಸೂಕ್ತ ಕಾರಣ ನೀಡಬೇಕು ಎಂದು ಸ್ಪಷ್ಟಪಡಿಸಿದರು.

ಈಗ ತಾವಾಗಿಯೂ ಹಿಂದುರಗಿಸಲು ಬಂದರೂ ವನ್ಯಜೀವ ಕಾಯ್ದೆ ಕಾನೂನಿನಲ್ಲಿ ವಿನಾಯಿತಿಗೆ ಅವಕಾಶ ಇಲ್ಲ. ಯಾಕಂದ್ರೆ ಈ ಹಿಂದೆ ಲೈಸೆನ್ಸ್ ಪಡೆಯಲು ಅವಕಾಶ ನೀಡಲಾಗಿತ್ತು . ಆದ್ರೆ ಈಗ ವನ್ಯಜೀವಿ ಕಾಯ್ದೆಯಲ್ಲಿ ಲೈಸೆನ್ಸ್ ಪಡೆಯಲು ಅವಕಾಶ ಇಲ್ಲ. ಈಗಾಲಾದರೂ ಬಂದು ವನ್ಯಜೀವಿ ಸಂಪತ್ತು ಹಾಗೂ ಸತ್ತ ವನ್ಯಜೀವಿಗಳ ಯಾವುದೇ ಅಗಾಂಗ ಹೊಂದಿದ್ರೆ ಹತ್ತಿರದ ವಲಯ ಅರಣ್ಯಧಿಕಾರಿಗಳಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ವನ್ಯಜೀವಿಗಳ ಸಂಪತ್ತು ಹೊಂದಿದವರ ಸ್ಥಿತಿ ನುಂಗಂಗಿಲ್ಲ..ಉಗುಳಂಗಿಲ್ಲ ಎನ್ನುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Thu, 26 October 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​