AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯೋತ್ಸವ ವೇಳೆಗೆ ಪೊಲೀಸ್ ಸಿಬ್ಬಂದಿ ಕಷ್ಟ ಪರಿಹಾರ ಭತ್ಯೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಯ ಕಷ್ಟಕ್ಕೆ ಸ್ಪಂದಿಸಿದ್ದು, ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿದೆ. ನವೆಂಬರ್‌ 1ರಿಂದ ಪರಿಷ್ಕೃತ ಕಷ್ಟ ಪರಿಹಾರ ಭತ್ಯೆ ಅನ್ವಯವಾಗಲಿದೆ. ರಿಸ್ಕ್ ಅಂಡ್ ಹಾರ್ಡ್​ಷಿಪ್​ ಬಾಬತ್ತಿನಲ್ಲಿ ಪೊಲೀಸ್​ ಸಿಬ್ಬಂದಿಗೆ ತಲಾ 1 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಪಿಎಸ್‌ಐ, ಎಎಸ್‌ಐ, ಮುಖ್ಯಪೇದೆ, ಪೊಲೀಸ್‌ ಪೇದೆಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ವೇತನ ಪರಿಷ್ಕರಣೆಯವರೆಗೂ ಈ ಕಷ್ಟ ಪರಿಹಾರ ಭತ್ಯೆ ಪಾವತಿಯಾಗಲಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ 1 ಸಾವಿರ ರೂ. ವಿಶೇಷ ಭತ್ಯೆ ಕೊಡಮಾಡಲು ರಾಜ್ಯ ಸರ್ಕಾರ […]

ರಾಜ್ಯೋತ್ಸವ ವೇಳೆಗೆ ಪೊಲೀಸ್ ಸಿಬ್ಬಂದಿ ಕಷ್ಟ ಪರಿಹಾರ ಭತ್ಯೆ ಹೆಚ್ಚಳ
ಸಾಧು ಶ್ರೀನಾಥ್​
|

Updated on:Oct 18, 2019 | 5:59 PM

Share

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಸಿಬ್ಬಂದಿಯ ಕಷ್ಟಕ್ಕೆ ಸ್ಪಂದಿಸಿದ್ದು, ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಿಸಿದೆ. ನವೆಂಬರ್‌ 1ರಿಂದ ಪರಿಷ್ಕೃತ ಕಷ್ಟ ಪರಿಹಾರ ಭತ್ಯೆ ಅನ್ವಯವಾಗಲಿದೆ.

ರಿಸ್ಕ್ ಅಂಡ್ ಹಾರ್ಡ್​ಷಿಪ್​ ಬಾಬತ್ತಿನಲ್ಲಿ ಪೊಲೀಸ್​ ಸಿಬ್ಬಂದಿಗೆ ತಲಾ 1 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಪಿಎಸ್‌ಐ, ಎಎಸ್‌ಐ, ಮುಖ್ಯಪೇದೆ, ಪೊಲೀಸ್‌ ಪೇದೆಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ವೇತನ ಪರಿಷ್ಕರಣೆಯವರೆಗೂ ಈ ಕಷ್ಟ ಪರಿಹಾರ ಭತ್ಯೆ ಪಾವತಿಯಾಗಲಿದೆ. ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ 1 ಸಾವಿರ ರೂ. ವಿಶೇಷ ಭತ್ಯೆ ಕೊಡಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Published On - 5:57 pm, Fri, 18 October 19