Jan Aushadhi Kendra: ಜನೌಷಧಿ ಕೇಂದ್ರ ಸ್ಥಾಪನೆಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ
Karnataka Janaushadhi Kendra: ಉತ್ತರ ಪ್ರದೇಶದಲ್ಲಿ ಭಾರತದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳಿವೆ. 1112 ಜನೌಷಧಿ ಕೇಂದ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ನಂತರದ ಸ್ಥಾನ ಕರ್ನಾಟಕಕ್ಕೆ ಸಿಕ್ಕಿದೆ.

ಬೆಂಗಳೂರು: ಖಾಸಗಿ ಮೆಡಿಕಲ್ ಶಾಪ್ಗಳಿಗಿಂತ ಶೇ. 70ರಷ್ಟು ಕಡಿಮೆ ದರದಲ್ಲಿ ಔಷಧವನ್ನು ವಿತರಿಸುವ ಮೂಲಕ ಎಲ್ಲ ವರ್ಗದವರಿಗೂ ಅಗ್ಗದ ಬೆಲೆಯಲ್ಲಿ ಮಾತ್ರೆ, ಔಷಧಗಳನ್ನು ನೀಡಲು ಕೇಂದ್ರ ಸರ್ಕಾರ ದೇಶಾದ್ಯಂತ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಡಿ ಜನೌಷಧಿ ಕೇಂದ್ರಗಳನ್ನು (Janaushadhi Kendra) ತೆರೆದಿದೆ. ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರ ಅವಧಿಯಲ್ಲಿ ಜನೌಷಧಿ ಕೇಂದ್ರಕ್ಕೆ ಚಾಲನೆ ಸಿಕ್ಕಿತ್ತು. ಇದೀಗ ಇಡೀ ದೇಶದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳಿರುವ (Jan Aushadhi Kendra) ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ.
ಉತ್ತರ ಪ್ರದೇಶದಲ್ಲಿ ಭಾರತದಲ್ಲೇ ಅತಿಹೆಚ್ಚು ಜನೌಷಧಿ ಕೇಂದ್ರಗಳಿವೆ. 1112 ಜನೌಷಧಿ ಕೇಂದ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ನಂತರದ ಸ್ಥಾನ ಕರ್ನಾಟಕಕ್ಕೆ ಸಿಕ್ಕಿದೆ. ಕರ್ನಾಟಕದ ನಗರ ಪ್ರದೇಶಗಳು ಮಾತ್ರವಲ್ಲದೆ ಎಲ್ಲ ತಾಲೂಕು, ನಗರ ಕೇಂದ್ರಗಳಲ್ಲೂ ಒಟ್ಟಾರೆ 905 ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಈ ಮೂಲಕ ಕರ್ನಾಟಕದ ಮತ್ತೊಂದು ದಾಖಲೆ ಬರೆದಿದೆ.
ಜನೌಷಧಿ ಮಳಿಗೆಗಳು 2016-17ರಲ್ಲಿ ಆರಂಭವಾದಾಗ 400 ಔಷಧಗಳು, 88 ಸರ್ಜಿಕಲ್ಗಳಿದ್ದವು. ಈಗ 1,451 ಔಷಧಗಳು ಹಾಗೂ 204 ಸರ್ಜಿಕಲ್ಗಳಿವೆ. ಉತ್ತರ ಪ್ರದೇಶ- 1112, ಕರ್ನಾಟಕ- 905, ತಮಿಳುನಾಡು- 820, ಕೇರಳ- 812, ಮಹಾರಾಷ್ಟ್ರ- 590 ಜನೌಷಧಿ ಕೇಂದ್ರಗಳನ್ನು ಹೊಂದುವ ಮೂಲಕ ಟಾಪ್ 5ನೇ ಸ್ಥಾನದಲ್ಲಿವೆ. ಅತಿಹೆಚ್ಚು ಜನೌಷಧಿ ಕೇಂದ್ರಗಳಿರುವ ಟಾಪ್ 5 ರಾಜ್ಯಗಳ ಪೈಕಿ 3 ರಾಜ್ಯಗಳು ದಕ್ಷಿಣ ಭಾರತದ್ದು ಎಂಬುದು ಮತ್ತೊಂದು ವಿಶೇಷ.
Karnataka has made great progress in providing generic medicines at 70% less rate in #JanaushadhiKendra, boasting of 905 Janaushadhi Kendra, 2nd highest after UP (1112)
From 400 medicines & 88 surgicals in 2016-17, product basket has also grown to 1,451 medicines & 204 surgicals pic.twitter.com/90PMSmJV9B
— Tejasvi Surya (@Tejasvi_Surya) August 9, 2021
ಈ ಮಾಹಿತಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ದೇಶದಲ್ಲಿ 7938 ಜನೌಷಧ ಮಳಿಗೆಗಳನ್ನು ತೆರೆಯಲಾಗಿದ್ದು, ಈ ಮೂಲಕ ಕೋಟ್ಯಂತರ ಜನರು ಅತಿ ಕಡಿಮೆ ಬೆಲೆಗೆ ಔಷಧಗಳನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Tejasvi Surya: ಬೆಂಗಳೂರಲ್ಲಿ ಮಧ್ಯರಾತ್ರಿಯಲ್ಲಿ ಕೋವಿಡ್ ಬೆಡ್ ಬ್ಲಾಕ್ ಮಾಡ್ತಿರೋ ಕರಾಳ ದಂಧೆ ಬಯಲು ಮಾಡಿದ ತೇಜಸ್ವಿ ಸೂರ್ಯ
‘ಮಾಸ್ಕ್ ಎಲ್ಲಿ ಸ್ವಾಮಿ?’ ಮುಖಗವಸು ಇಲ್ಲದೆ ಸೈಕಲ್ನಲ್ಲಿ ಬೆಂಗಳೂರು ಸುತ್ತಿದ ತೇಜಸ್ವಿ ಸೂರ್ಯಗೆ ಜನರ ಪ್ರಶ್ನೆ
(Karnataka Has Second Highest 905 Janaushadhi Kendra in India Providing Medicines in 70 Percent Cheaper Price)
Published On - 2:05 pm, Mon, 9 August 21




