AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡಿಯಲು ಸಮರ್ಥ ಪತಿ ಪತ್ನಿಯಿಂದ‌ ಜೀವನಾಂಶ ಕೇಳುವಂತಿಲ್ಲ, ಸೋಮಾರಿ ಪತಿಗೆ ಹೈಕೋರ್ಟ್ ತಪರಾಕಿ

ಪತ್ನಿ ಅನುಮತಿ ಕೇಳದೇ ತನ್ನ ಸಹೋದರಿಯ ಮಗಳ ಹುಟ್ಟುಹಬ್ಬಕ್ಕೆ ಹೋಗಿದ್ದಾಳೆಂದು ಜಗಳ ಮಾಡಿ ಪತಿರಾಯ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾನೆ. ಅಲ್ಲದೇ ಪತ್ನಿಯಿಂದಲೇ ಜೀವನಾಂಶ ಕೇಳಿ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ದುಡಿಯಲು ಸಮರ್ಥ ಪತಿ ಪತ್ನಿಯಿಂದ‌ ಜೀವನಾಂಶ ಕೇಳುವಂತಿಲ್ಲ, ಸೋಮಾರಿ ಪತಿಗೆ ಹೈಕೋರ್ಟ್ ತಪರಾಕಿ
ಕರ್ನಾಟಕ ಹೈಕೋರ್ಟ್
TV9 Web
| Edited By: |

Updated on:Jan 24, 2023 | 3:48 PM

Share

ಬೆಂಗಳೂರು: ದೈಹಿಕನಾಗಿ ಸಮರ್ಥನಿರುವ ಪತಿ(Husband) ಪತ್ನಿಯಿಂದ ಜೀವನಾಂಶ( sustenance) ಕೇಳುವಂತಿಲ್ಲವೆಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ನೀಡಿದೆ. ಹೀಗೆ ಪತ್ನಿಯಿಂದ ಜೀವನಾಂಶ ಕೇಳುವುದು ಸೋಮಾರಿತನಕ್ಕೆ ಕಾರಣವಾಗಬಹುದೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. 2017 ರಲ್ಲಿ ಪತ್ನಿಯೊಬ್ಬಳು(Wife) ತನ್ನ ಗಂಡನ ಅನುಮತಿ ಪಡೆಯದೇ ಆಕೆಯ ಸಹೋದರಿ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿದ್ದಕ್ಕೆ ಉಂಟಾದ ಕಲಹ ವಿಚ್ಚೇದನ ತನಕ ಹೋಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿಯಿಂದಲೇ ಜೀವನಾಂಶ ಕೇಳಿದ್ದ ಪತಿಗೆ ಹೈಕೋರ್ಟ್ ತಪರಾಕಿ ನೀಡಿದೆ.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯನ್ನೇ ಮದ್ವೆಯಾದ ಆರೋಪಿ, ಕೇಸ್ ರದ್ದುಗೊಳಸಿದ ಹೈಕೋರ್ಟ್

2017 ರಲ್ಲಿ ವಿವಾಹವಾದ ದಂಪತಿ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಪತ್ನಿ ಪತಿಯ ಮನೆ ತೊರೆದು ತವರು ಮನೆ ಸೇರಿದ್ದಳು. ಪತಿಯ ಅನುಮತಿ ಪಡೆಯದೇ ಆತನ ಸೋದರಿ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿದ್ದೇ ದಾಂಪತ್ಯದಲ್ಲಿ ಕಲಹಕ್ಕೆ ಕಾರಣವಾಗಿತ್ತು. ತವರು ಮನೆಗೋ ಹೋದ ಪತ್ನಿಯಿಂದ ವಿಚ್ಚೇದನ ಕೋರಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ವಿಚ್ಚೇದನದ ಅರ್ಜಿ ವಿಚಾರಣೆ ವೇಳೆ ಪತ್ನಿ ತನಗೆ ಪತಿಯಿಂದ 25 ಸಾವಿರ ಜೀವನಾಂಶ ಹಾಗೂ ಕೇಸ್ ವೆಚ್ಚ ಕೊಡಿಸುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಇದಕ್ಕೆ ತಕರಾರು ತೆಗೆದ ಪತಿ ಕೋವಿಡ್ ನಿಂದಾಗಿ ಕಳೆದ 2 ವರ್ಷಗಳಿಂದ ತಾನು ನಿರುದ್ಯೋಗಿಯಾಗಿದ್ದೇನೆ/ ತನಗೇ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಪತ್ನಿಯ ತವರುಮನೆ ಕಡೆಯವರು ಆರ್ಥಿಕವಾಗಿ ಸಬಲರಾಗಿದ್ದಾರೆ. ಹೀಗಾಗಿ ಪತ್ನಿಯಿಂದಲೇ ತನಗೆ 2 ಲಕ್ಷ ಜೀವನಾಂಶ ಕೊಡಿಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.

ಕೌಟುಂಬಿಕ ನ್ಯಾಯಲಯ ಪತಿಯ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಪತಿಯ ಅರ್ಜಿಯನ್ನು ತಿರಸ್ಕರಿಸಿದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 24 ರಡಿ ಆದಾಯವಿಲ್ಲದ ಪತಿಯಾಗಲೀ ಅಥವಾ ಪತ್ನಿಯಾಗಲೀ ತನ್ನ ಸಂಗಾತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಪತ್ನಿ ಜೀವನಾಂಶ ನಿರಾಕರಿಸುವ ಉದ್ದೇಶದಿಂದ ಪತಿ ಈ ಉಪಾಯ ಮಾಡಿದ್ದಾನೆ. ದೈಹಿಕವಾಗಿ ಸಮರ್ಥನಾಗಿರುವ ಪತಿ ಉದ್ಯೋಗವಿಲ್ಲವೆಂದು ಪತ್ನಿಯಿಂದ ಜೀವನಾಂಶ ಕೇಳಿದರೆ ಅದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತೆ ಎಂದು ಹೈಕೋರ್ಟ್ ತಿಳಿಸಿದೆ.

ನಿರುದ್ಯೋಗದ ನೆಪವೊಡ್ಡಿ ಪತ್ನಿ ನೀಡುವ ಜೀವನಾಂಶದಿಂದ ಆರಾಮವಾಗಿ ಕಾಲ ಕಳೆಯಲು ಪತಿ ಬಯಸಿದಂತಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಅಸಮರ್ಥನೆಂದು ಸಾಬೀತುಪಡಿಸದ ಹೊರತು ಪತ್ನಿಯಿಂದ ಪತಿ ಜೀವನಾಂಶ ಪಡೆಯಲಾಗದೆಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ. ನೈತಿಕ ದಾರಿಯಲ್ಲಿ ಹಣ ಸಂಪಾದಿಸಿ, ಪತ್ನಿ ಮಕ್ಕಳನ್ನು ಸಾಕುವುದು ಪತಿಯ ಕರ್ತವ್ಯ. ಬಳಸದೇ ತುಕ್ಕು ಹಿಡಿಯುವುದಕ್ಕಿಂತ, ಸವೆಸುವುದು ಉತ್ತಮ ಎಂಬ ಮಾತನ್ನು ಪತಿಗೆ ನೆನಪಿಸಿದ ಹೈಕೋರ್ಟ್ ಜೀವನಾಂಶ ಕೋರಿದ್ದ ಆತನ ಅರ್ಜಿಯನ್ನು ವಜಾಗೊಳಿಸಿದೆ.

ವರದಿ: ರಮೇಶ್ ಮಹದೇವ್ TV9 ಬೆಂಗಳೂರು

Published On - 3:11 pm, Tue, 24 January 23

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?