AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವನ ದೇವಾಲಯ ಕಂಡು ಖುಷಿಯಾಗಿದೆ! ಆದರೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕದಲ್ಲಿ ಕೊಡಗು ಜನತೆ

ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ದೇವಸ್ಥಾನ ಎಷ್ಟೋ ವರ್ಷಗಳ ಬಳಿಕ ಗೋಚರವಾಗಿರುವುದು ಇಲ್ಲಿನ ಜನರ ಸಂತಸ, ಕುತೂಹಲಕ್ಕೆ ಕಾರಣವಾಗಿದೆ. ಗರ್ಭಗುಡಿ ಮುಖಮಂಟಪ ಮತ್ತು ಬಾವಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮತ್ತೊಂದ್ಕಡೆ ಇದು ಭೀಕರ ಬರಗಾಲದ ಸ್ಪಷ್ಟ ಮುನ್ಸೂಚನೆಯಾಗಿದೆ. ಏಕೆಂದರೆ

ಶಿವನ ದೇವಾಲಯ ಕಂಡು ಖುಷಿಯಾಗಿದೆ! ಆದರೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕದಲ್ಲಿ ಕೊಡಗು ಜನತೆ
ಕೊಡಗು ಜನತೆಗೆ ಶಿವನ ದೇವಾಲಯ ಕಾಣಿಸಿರುವುದು ಖುಷಿಯಾಗಿದೆ! ಆದರೆ
Gopal AS
| Edited By: |

Updated on: Nov 27, 2023 | 4:54 PM

Share

ಬರದಿಂದಾಗಿ ಈ ವರ್ಷ ಇಡೀ ನಾಡಿಗೆ ನಾಡೇ ತತ್ತರಿಸುತ್ತಿರೋದು ಎಲ್ಲರಿಗೂ ಗೊತ್ತಿರೊ ವಿಚಾರ. ಅದ್ರಲ್ಲೂ ಸದಾ ಮಳೆಯಿಂದ ತೊಯ್ದು ತೊಪ್ಪೆಯಾಗೋ ಕೊಡಗು ಜಿಲ್ಲೆಯಲ್ಲೂ ಬರದ ಛಾಯೆ ಆವರಿಸಿದೆ! ಹಾಗಾಗಿ ಜಿಲ್ಲೆಯ ಜಲಾಶಯಗಳು ಬತ್ತಿ ಬರಿದಾಗುತ್ತಿವೆ. ಇದೇ ಸಂದರ್ಭದಲ್ಲಿ ಜಲಾಶಯದ ಹಿನ್ನಿರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ಶಿವನ ದೇವಾಲಯವೊಂದು ಗೋಚರವಾಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಒಂದ್ಕಡೆ ಬತ್ತಿ ಬರಿದಾಗಿರೋ ಜಲಾಶಯ. ಮತ್ತೊಂದ್ಕಡೆ ಬರಿದಾಗಿರೋ ಜಲಾಶಯದಲ್ಲಿ ತಲೆ ಎತ್ತಿ ನಿಂತಿರೋ ಪುರಾತನ ದೇವಾಲಯ.. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಕಂಡು ಬಂದಿರೋ ದೃಶ್ಯ. ಜಲಾಶಯ ನಿರ್ಮಾಣವಾಗಿದ್ದಾಗ ಹಿನ್ನೀರಲ್ಲಿ ಈ ಶಿವನ ದೇವಾಲಯ ಮುಳುಗಡೆಯಾಗಿತ್ತು. ಸುಮಾರು 50 ವರ್ಷಗಳ ಹಿಂದೆ ಈ ಜಲಾಶಯ ನಿರ್ಮಾಣವಾಗಿತ್ತು.

ಈ ಸಂದರ್ಭ ಈ ಊರಿನ ದೇವಲಾಯವಾಗಿದ್ದ ಇದು ಮುಳುಗಡೆಯಾಗಿತ್ತು. ಆದರೆ ಸಾಮಾನ್ಯವಾಗಿ ಬೇಸಗೆಯಲ್ಲಿ ಎಷ್ಟೋ ವರ್ಷಗಳಿಗೊಮ್ಮೆ ಮಾತ್ರ ಈ ದೇವಾಲಯ ಗೋಚರವಾಗುತ್ತಿತ್ತು. ಆದ್ರೆ ಈ ವರ್ಷ ಮಳೆಯ ತೀವ್ರ ಕೊರತೆಯಿಂದಾಗಿ ನವೆಂಬರ್ ತಿಂಗಳಿನಲ್ಲೇ ದೇವಾಲಯ ಗೋಚರವಾಗಿದೆ ಎಂದು ಗ್ರಾಮಸ್ಥ ರವಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕೊಡಗು: ಆನಂದಪುರ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಆವರಣದಲ್ಲಿ ನಿಧಿ ಪತ್ತೆ

ತಮ್ಮೂರಿನ ದೇವಸ್ಥಾನ ಎಷ್ಟೋ ವರ್ಷಗಳ ಬಳಿಕ ಗೋಚರವಾಗುತ್ತಿರುವುದು ಇಲ್ಲಿನ ಜನರ ಸಂತಸ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಹಾಗಾಗಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿ ವೀಕ್ಷಿಸುತ್ತಿದ್ದಾರೆ. ಗರ್ಭಗುಡಿ ಮುಖಮಂಟಪ ಮತ್ತು ಬಾವಿ ಇದ್ದು ಎಲ್ಲರನ್ನು ಆಕರ್ಷಿಸುತ್ತಿದೆ. ಒಂದು ಕಡೆ ಕುತೂಹಲವಾದ್ರೆ ಮತ್ತೊಂದ್ಕಡೆ ಇದು ಭೀಕರ ಬರಗಾಲದ ಸ್ಪಷ್ಟ ಮುನ್ಚೂಚನೆಯೂ ಆಗಿದೆ. ಏಕೆಂದರೆ ನವೆಂಬರ್​ ತಿಂಗಳಿನಲ್ಲೇ ನದಿ ತೊರೆ ಜಲಾಶಯಗಳು ಬತ್ತಿ ಹೋಗಿದ್ದು ಇನ್ನು ಜನವರಿ ನಂತರದ ಪಾಡೇನು ಎಂದು ಸ್ಥಳೀಯರು ಆತಂಕಪಡುವಂತಾಗಿದೆ.

ಒಟ್ಟಾರೆ ಸಾರ್ವಜನಿಕರಿಗೆ ಒಂದು ಕಡೆ ದೇವಾಲಯ ಗೋಚರವಾಗಿರುವುದು ಖುಷಿ ಒಂದಾದರೆ ಮತ್ತೊಂದ್ಕಡೆ ಮುಂದಿನ ದಿನಗಳಲ್ಲಿ ಭೀಕರ ಬರ ಎದುರಿಸಬೇಕಲ್ಲ ಎಂಬ ಆತಂಕವೂ ಕಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು