Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ; ವಿಷ ಕುಡಿದು KSRTC ನೌಕರ ಆತ್ಮಹತ್ಯೆಗೆ ಯತ್ನ

ಕೊಡಗು ಜಿಲ್ಲೆಯ ಮಡಿಕೇರಿ ಕೆಎಸ್​ಆರ್​ಟಿಸಿ ಡಿಪೋದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವ ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಇನ್ನು ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕುರಿತು ಮಡಿಕೇರಿ ಟೌನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಕೇರಿ ಡಿಪೋ ವ್ಯವಸ್ಥಾಪಕಿಯಿಂದ ಕಿರುಕುಳ ಆರೋಪ; ವಿಷ ಕುಡಿದು KSRTC ನೌಕರ ಆತ್ಮಹತ್ಯೆಗೆ ಯತ್ನ
ಮಡಿಕೇರಿ
Follow us
Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 29, 2023 | 7:52 PM

ಕೊಡಗು, ಆ.29: ಇತ್ತೀಚೆಗೆ ಸಾರಿಗೆ ನೌಕರರು ಮೇಲಾಧಿಕಾರಿಗಳ ಕಿರುಕುಳಕ್ಕೆ ಬೆಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಂತೆ ಇದೀಗ ವಿಷ ಕುಡಿದು KSRTC ನೌಕರ ಅಭಿಷೇಕ್ ಎಂಬಾತ​ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ (Madikeri) ಕೆಎಸ್​ಆರ್​ಟಿಸಿ  ಡಿಪೋದಲ್ಲಿ‌ ನಡೆದಿದೆ. ಅಸ್ವಸ್ಥಗೊಂಡ ನೌಕರ ಅಭಿಷೇಕ್​​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಡಿಪೋ ವ್ಯವಸ್ಥಾಪಕಿ ಗೀತಾ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ಮಡಿಕೇರಿ ಟೌನ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.​

ಸಾಲಗಾರರ ಕಿರುಕುಳ; ಮನನೊಂದು ಜ್ಯೂನಿಯರ್ ಯಶ್ ಆತ್ಮಹತ್ಯೆ

ಬಾಗಲಕೋಟೆ: ಸಾಲಗಾರರ ಕಿರುಕುಳ ಹಿನ್ನಲೆ ಮನನೊಂದು ಬಾಗಲಕೋಟೆ ಮೂಲದ ಆನಂದ್​(ಜ್ಯೂನಿಯರ್ ಯಶ್) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಾಗಲಕೋಟೆಯ ಘಟಪ್ರಭಾ ‌ನದಿ ಹಿನ್ನೀರು ಪ್ರದೇಶವಾದ ಮಹಾರುದ್ರಪ್ಪನ ಹಳ್ಳಕ್ಕೆ ಹಾರಿ ಆತ್ಮಹತ್ಯೆ ಯತ್ನಿಸಿದ್ದು, ತಕ್ಷಣ ಸ್ಥಳಕ್ಕೆ ಬಂದ‌ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಕೂಡಲೇ ಆತನನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ‌ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್​ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಧಾರವಾಡ: ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಆಕೆ ಬರೆದ ಡೆತ್​ನೋಟ್​ನಲ್ಲಿ ಏನಿದೆ?

5 ರಿಂದ 6 ಲಕ್ಷ ಸಾಲ ಮಾಡಿದ್ದ ಆನಂದ್​

ಹೌದು, ಆನಂದ್ ಖಾಸಗಿ ವ್ಯಕ್ತಿಗಳ ಬಳಿ ಸುಮಾರು 5 ರಿಂದ 6 ಲಕ್ಷ ಸಾಲ ಮಾಡಿದ್ದಾರೆ. ಸಾಲವನ್ನು ವಾಪಾಸ್ಸು ಕೊಡದ ಹಿನ್ನಲೆ ನಿತ್ಯ ಕಿರುಕುಳ ಹಾಗೂ ಬೈಕ್​ನ್ನು ಸಾಲಗಾರರು ತೆಗೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ ಇದಾದ ಬಳಿಕ ಮನೆಗೆ ಬಂದು ನಿತ್ಯ ಕಿರುಕುಳ, ಮಾನಮರ್ಯಾದೆ ತಗೆಯುತ್ತೇವೆ ಮತ್ತು ಹಲ್ಲೆ ಮಾಡೋದಾಗಿ ಬೆದರಿಕೆ ಕೊಡುತ್ತಿದ್ದಾರಂತೆ. ಈ ಹಿನ್ನಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೋರ್ಟ್​ನಲ್ಲಿರುವ ಪತ್ನಿ ಹೊಲದ ವ್ಯಾಜ್ಯ

ಮನೆಯಲ್ಲಿ ಪತ್ನಿ ಗರ್ಭಿಣಿಯಾಗಿದ್ದು, ಹೊಲದ ವ್ಯಾಜ್ಯ ಕೋರ್ಟ್​ನಲ್ಲಿದೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ಆನಂದ್​​ಗೆ ಬೇರೆ ಆದಾಯದ ಮೂಲವಿಲ್ಲ. ಕಲೆಯೇ ನಮಗೆ ಅನ್ನ. ಕಳೆದ‌ ಮೇ ತಿಂಗಳಿಂದ ಸೀಜನ್ ಇಲ್ಲದ ಕಾರಣ ಯಾವುದೇ ಕಾರ್ಯಕ್ರಮ ಸಿಕ್ಕಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ. ಮೇಲಾಗಿ ಸಾಲ ಕೊಡುವಾಗ ಹೇಳಿದ ಬಡ್ಡಿ ಬೇರೆ. ಇವಾಗ ಮೀಟರ್ ಬಡ್ಡಿ ರೀತಿಯಲ್ಲಿ ಬಡ್ಡಿ ಕೇಳ್ತಿದಾರೆ. ಬಡ್ಡಿ ಕಟ್ಟಿ ಸಾಕಾಗಿದೆ. ಕಾಲಾವಕಾಶ ಕೇಳಿದರೂ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನ ‌ಮಾಡಿದೆ ಎಂದ ಜ್ಯೂನಿಯರ್ ಯಶ್(ಆನಂದ್) ಹೇಳಿಕೊಂಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​