AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದಲ್ಲೂ ಹರಿಯುತಿದೆ ಹಾಲಿನ ಹೊಳೆ: ಕೃಪೆ-ಮಾರ್ಗದರ್ಶನ ಕೋಲಾರ ಜಿಲ್ಲಾಡಳಿತ ಹಾಗೂ ಹಾಲು ಒಕ್ಕೂಟ

Kolar Milk production: ಕೋಲಾರದಲ್ಲಿ ರೈತರಿಗೆ ಮಳೆ ಬೆಳೆ ಕೈ ಕೊಟ್ಟರೂ ಹೈನೋದ್ಯಮ ಸದ್ಯಕ್ಕೆ ರೈತರ ಕೈ ಹಿಡಿದಿದೆ. ಅದರ ಜೊತೆಗೆ ರೈತರ ಶ್ರಮದ ಪರಿಣಾಮ ಕೋಲಾರದಲ್ಲಿ ಬರಗಾಲದಲ್ಲೂ ಹಾಲಿನ ಹೊಳೆ ಹರಿಯುತ್ತಿದೆ. ಹಾಗಾಗಿ ಇದು ರೈತರಿಗಷ್ಟೇ ಅಲ್ಲಾ ಕೋಲಾರ ಹಾಲು ಒಕ್ಕೂಟಕ್ಕೂ ಕೂಡಾ ಸಹಕಾರಿಯಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಬರದಲ್ಲೂ ಹರಿಯುತಿದೆ ಹಾಲಿನ ಹೊಳೆ: ಕೃಪೆ-ಮಾರ್ಗದರ್ಶನ ಕೋಲಾರ ಜಿಲ್ಲಾಡಳಿತ ಹಾಗೂ ಹಾಲು ಒಕ್ಕೂಟ
ಬರದಲ್ಲೂ ಹರಿಯುತಿದೆ ಹಾಲಿನ ಹೊಳೆ: ಕೃಪೆ ಕೋಲಾರ ಜಿಲ್ಲಾಡಳಿತ- ಹಾಲು ಒಕ್ಕೂಟ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Feb 08, 2024 | 10:51 AM

Share

ಅದು ಹೇಳಿಕೇಳಿ ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ, ಅದರಲ್ಲೂ ದುರಾದೃಷ್ಟ ಎಂಬಂತೆ ಈ ವರ್ಷ ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ. ಇಂಥ ದಾರುಣ ಪರಿಸ್ಥಿತಿಯಲ್ಲಿಯೂ ಜಿಲ್ಲೆಯ ಹೈನೋದ್ಯಮ ರೈತರ ಕೈಹಿಡಿದೆ. ಜೊತೆಗೆ ಹೈನೋದ್ಯಮ (Milk production) ಬರಗಾಲದಲ್ಲೂ (drought) ಹೆಚ್ಚಿನ ಹಾಲು ಉತ್ಪಾದನೆ ಮಾಡುವ ಮೂಲಕ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು (Kolar Milk Federation) ರಕ್ಷಣೆ ಮಾಡಿದೆ.

ಹೌದು ಕೋಲಾರ ಜಿಲ್ಲೆ ಅಂದರೆ ಸದಾ ಬರಗಾಲದ ಹಣೆಪಟ್ಟಿ ಕಟ್ಟಿಕೊಳ್ಳುವ ಜಿಲ್ಲೆ. ಕೋಲಾರದಲ್ಲಿ ನದಿ ನಾಲೆಗಳಿಲ್ಲದೆ ಹೋದರು ಸವಾಲಿನ ಕೃಷಿ ಮಾಡಿ ಬದುಕುವ ಕೋಲಾರ ಜಿಲ್ಲೆಯ ರೈತರದು ಕೃಷಿಯ ಜೊತೆಗೆ ಹೈನುಗಾರಿಕೆ ಮುಖ್ಯ ಕಸುಬಾಗಿದೆ. ಪರಿಣಾಮವಾಗಿ ಈ ವರ್ಷ ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲೂ ಸರಿಯಾದ ಮಳೆಯಾಗದೆ ಸರ್ಕಾರವೇ ಬರದ ಜಿಲ್ಲೆ ಎಂದು ಘೋಷಣೆ ಮಾಡಿದೆ.

ಇಂಥ ಪರಿಸ್ಥಿತಿಯಲ್ಲೂ ಜಿಲ್ಲೆಯ ಹಾಲು ಉತ್ಪಾದಕರು ತಮ್ಮ ಶ್ರಮದ ಫಲವಾಗಿ ಹೆಚ್ಚಿನ ಹಾಲು ಉತ್ಪಾದನೆ ಮಾಡಿದ್ದಾರೆ, ಪರಿಣಾಮ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸರಾಸರಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದೆ. ಬರಗಾಲದಲ್ಲಿ ಹಾಲು ಉತ್ಪಾದನೆ ಕುಸಿಯುತ್ತದೆ ಎಂದು ನಿರೀಕ್ಷೆ ಮಾಡಿದ್ದ ಕೋಲಾರ ಹಾಲು ಒಕ್ಕೂಟಕ್ಕೆ ಆಶ್ಚರ್ಯ ಎನ್ನುವಂತೆ ಹಾಲು ಉತ್ಪಾದನೆಯಲ್ಲಿ ಏರಿಕೆ ಕಂಡಿದೆ ಎಂದು ಗೋಪಾಲಮೂರ್ತಿ, ವ್ಯವಸ್ಥಾಪಕ ನಿರ್ದೇಶಕ, ಕೋಚಿಮುಲ್​ ಸಂತಸ ವ್ಯಕ್ತಪಡಿಸಿದ್ದಾರೆ.

Also Read: White Paper – ಯುಪಿಐ ಮತ್ತು ಎನ್​ಡಿಎ ಅವಧಿಯಲ್ಲಿನ ಆರ್ಥಿಕ ನಿರ್ವಹಣೆ ಕುರಿತು ಕೇಂದ್ರದಿಂದ ಇಂದು ಶ್ವೇತಪತ್ರ

ಒಂದೆಡೆ ಬರದ ಹಿನ್ನೆಲೆಯಲ್ಲಿ ರೈತರು ಬೆಳೆ ಬೆಳೆಯಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು, ಸಮಯಕ್ಕೆ ಸರಿಯಾಗಿ ಮಳೆ ಬಾರದ ಹಿನ್ನೆಲೆ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬೆಳೆಯಲಾಗಲಿಲ್ಲ, ಇದರ ಪರಿಸ್ಥಿತಿ ಅರ್ಥ ಮಾಡಿಕೊಂಡ ಕೋಲಾರ ಜಿಲ್ಲಾಡಳಿತ ಹಾಗೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರೈತರಿಗೆ ಅದರಲ್ಲೂ ಹಾಲು ಉತ್ಪಾದಕರಿಗೆ ಮೇವಿನ ಬೀಜಗಳು, ಮೇವಿನ ಕಿಟ್​, ಜೊತೆಗೆ ಸಬ್ಸಿಡಿ ದರಲ್ಲಿ ಫೀಡ್ಸ್​ ವಿತರಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ ಮಳೆಯಿಂದ ಬರಗಾಲ ಆವರಿಸಿದರೂ ಜಾನುವಾರುಗಳ ಮೇವಿಗೆ ಕೊರತೆಯಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲಾಯಿತು. ಪರಿಣಾಮವಾಗಿ ಬರಗಾದಲ್ಲೂ ಕೂಡಾ ಕೋಲಾರದಲ್ಲಿ ಉತ್ತಮ ಹಾಲು ಉತ್ಪಾದನೆಯಾಗಿದೆ, ಇದರಿಂದ ರೈತರೂ ಕೂಡಾ ಪುಲ್​ ಖುಷಿಯಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ