ಮಡಿಕೇರಿ: ಆಟೋ ಚಾಲಕನ ಆತ್ಮಹತ್ಯೆ ಕೇಸ್​ಗೆ ಬಿಗ್​ ಟಿಸ್ಟ್: ಶೆಡ್​ನಲ್ಲಿ ಹತ್ಯೆ ಮಾಡಲಾಯ್ತೆ?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 3:07 PM

ಸೆಪ್ಟೆಂಬರ್ 3 ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನೇಣುಬಿಗಿದು ಸ್ಥಿತಿಯಲ್ಲಿ ಆಟೋ ಚಾಲಕನ ಮೃತದೇಹ ಪತ್ತೆ ಆಗಿತ್ತು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಯುವಕನ ಪೋಷಕರಿಂದ‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಬಿಗ್​ ಟಿಸ್ಟ್ ಸಿಕ್ಕಿದೆ.

ಮಡಿಕೇರಿ: ಆಟೋ ಚಾಲಕನ ಆತ್ಮಹತ್ಯೆ ಕೇಸ್​ಗೆ ಬಿಗ್​ ಟಿಸ್ಟ್: ಶೆಡ್​ನಲ್ಲಿ ಹತ್ಯೆ ಮಾಡಲಾಯ್ತೆ?
ಮಡಿಕೇರಿ: ಆಟೋ ಚಾಲಕನ ಆತ್ಮಹತ್ಯೆ ಕೇಸ್​ಗೆ ಬಿಗ್​ ಟಿಸ್ಟ್: ಶೆಡ್​ನಲ್ಲಿ ಹತ್ಯೆ ಮಾಡಲಾಯ್ತೆ?
Follow us on

ಕೊಡಗು, ಸೆಪ್ಟೆಂಬರ್​​ 09: ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಸೆಪ್ಟೆಂಬರ್ 3 ರಂದು ನೇಣುಬಿಗಿದು ಸ್ಥಿತಿಯಲ್ಲಿ ದೇವಿಪ್ರಸಾದ್ (27) ಎಂಬ ಆಟೋ ಚಾಲಕನ (Auto driver) ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಕೇಸ್​ಗೆ ಸಂಬಂಧಿಸಿದಂತೆ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಯುವಕನ ಪೋಷಕರಿಂದ‌ ಪೊಲೀಸರಿಗೆ ದೂರು ನೀಡಲಾಗಿದೆ.

ಮದೆನಾಡು ಗ್ರಾಮದಲ್ಲಿ ಮೃತ ದೇವಿಪ್ರಸಾದ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾವಿಗೂ ಮುನ್ನ ದೇವಿಪ್ರಸಾದ್ ಮೇಲೆ ಊರಿನ ಕೆಲವರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹಲ್ಲೆ‌ ಮಾಡಿದ ಹಲವರ ಜೊತೆ ದೇವಿಪ್ರಸಾದ್​ಗೆ ಹಿಂದಿನಿಂದಲೂ ದ್ವೇಷ ಇತ್ತು.

ಇದನ್ನೂ ಓದಿ: ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ದುಷ್ಕೃತ್ಯ; ದೇವಸ್ಥಾನ ದೋಚಿದ್ದ ದುಷ್ಕರ್ಮಿಗಳು ಅರೆಸ್ಟ್

ಹಲ್ಲೆ ಬಳಿಕ ದೇವಿಪ್ರಸಾದ್​ನನ್ನು ಶೆಡ್​ನಲ್ಲಿ ನೇಣಿಗೇರಿಸಿದ್ದಾರೆ. ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪೊಷಕರಿಂದ ದೂರು ನೀಡಲಾಗಿದೆ.

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ ಮಾಡಿದ್ದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕಾಫಿ ಎಸ್ಟೇಟ್ ಒಂದರಲ್ಲಿ ಕಾರ್ಮಿಕರಾಗಿದ್ದ ವಿಶ್ವ ಎಂಬಾತನೆ ಕೊಲೆಯಾದ ವ್ಯಕ್ತಿ.

ಇದನ್ನೂ ಓದಿ: ಬೆಳಗಾವಿ: ಓಡಿ ಹೋದ ಮಗಳು ಗರ್ಭಿಣಿ ಅಂತ ಅಪಪ್ರಚಾರ, ತಮ್ಮನನ್ನು ಕೊಂದ ಅಣ್ಣ

ಮೊಗೇರ ಗಣೇಶ ಎಂಬಾತ ಕೊಲೆ ಆರೋಪಿಯಾಗಿದ್ದಾನೆ. ತೀವ್ರ ಪಾನಮತ್ತನಾಗಿದ್ದ ಗಣೇಶ ವಿಶ್ವನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ತೋಟದ ಮನೆಯಲ್ಲಿದ್ದ ಮಚ್ಚು ತಂದು ವಿಶ್ವನನ್ನ ಕೊಚ್ಚಿದ್ದ. ತೀವ್ರ ಗಾಯಗೊಂಡ ವಿಶ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಕಲಾಗಿದ್ದು, ಆರೋಪಿ ಗಣೇಶನನ್ನ ಬಂಧಸಿದ್ದರು.

ರೇಣುಕಾಸ್ವಾಮಿ ಶವ ಪತ್ತೆಯಾಗಿದ್ದ ಸ್ಥಳದಲ್ಲಿಯೇ ವೃದ್ಧೆ ಶವ ಪತ್ತೆ

ಬೆಂಗಳೂರು: ಸುಮ್ಮನಹಳ್ಳಿ ಮೋರಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿರುವಂತಹ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ರೇಣುಕಾಸ್ವಾಮಿ ಶವ ಪತ್ತೆಯಾಗಿದ್ದ ಸ್ಥಳದ ಹತ್ತಿರದಲ್ಲಿಯೇ ವೃದ್ಧೆ ಶವ ಪತ್ತೆಯಾಗಿತ್ತು. ಆಯತಪ್ಪಿ ಮೋರಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.