AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್, ಸೆಕ್ಸ್, ದೋಖಾ ಆರೋಪ: ಯುವಕನ ಮನೆ ಮುಂದೆ ನಡುರಾತ್ರಿ ಏಕಾಂಗಿ ಧರಣಿ ಕುಳಿತ ನೊಂದ ಶಿಕ್ಷಕಿ

ಮಂಜು ಮನೆಯವರೆಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಸುಮಾರಿಗೆ ಆತನ ಮನೆ ಬಳಿಗೆ ಬಂದ ಸಂತ್ರಸ್ತ ಶಿಕ್ಷಕಿ, ಮಂಜು ಹಾಗೂ ತನ್ನ ನಡುವೆ ಹೇಗೆಲ್ಲಾ ಸಂಬಂಧ ಬೆಳೆಯಿತು. ಆತ ಮದುವೆಗೂ ಮೊದಲು ತನ್ನ ಜೊತೆ ಹೇಗೆಲ್ಲಾ ಇದ್ದ, ಈಗ ಮದುವೆಯಾಗಲು ಯಾಕೆ ನಿರಾಕರಿಸುತ್ತಿದ್ದಾನೆ. ತನಗೆ ನ್ಯಾಯ ಬೇಕೇ ಬೇಕು ಎಂದೆಲ್ಲಾ ಹೇಳಿ ಮನೆಯ ಮುಂದೆ ಒಬ್ಬಳೇ ಕುಳಿತಿದ್ದಾಳೆ.

ಲವ್, ಸೆಕ್ಸ್, ದೋಖಾ ಆರೋಪ: ಯುವಕನ ಮನೆ ಮುಂದೆ ನಡುರಾತ್ರಿ ಏಕಾಂಗಿ ಧರಣಿ ಕುಳಿತ  ನೊಂದ ಶಿಕ್ಷಕಿ
ದೋಖಾ: ಯುವಕನ ಮನೆ ಮುಂದೆ ನಡುರಾತ್ರಿ ಏಕಾಂಗಿ ಧರಣಿ ಕುಳಿತ ನೊಂದ ಶಿಕ್ಷಕಿ
Follow us
ಪ್ರಶಾಂತ್​ ಬಿ.
| Updated By: ಸಾಧು ಶ್ರೀನಾಥ್​

Updated on: Jan 09, 2024 | 5:04 PM

ಆಕೆ ತನ್ನ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಹೀಗೆ ಶಾಲೆ ಕಾಲೇಜಿಗೆ ಹೋಗಿ ಬರ್ತಿರಬೇಕಾದ ಸಂದರ್ಭದಲ್ಲಿಅದೇ ಊರಿನ ಒಬ್ಬಾತನ ಜೊತೆಗೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಎಲ್ಲರಂತೆ ಇವರದ್ದೂ ಕೇವಲ ಸ್ನೇಹವಾಗಿಯೇ ಇತ್ತು. ದಿನಗಳು ಕಳೆದಂತೆ ಅವರಿಬ್ಬರ ನಡುವೆ ಹೆಚ್ಚು ಹೆಚ್ಚು ಆತ್ಮೀಯತೆ ಬೆಳೆಯಲಾರಂಭಿಸಿತ್ತು. ಇಬ್ಬರೂ ಅಂದುಕೊಂಡಂತೆ ಪರಸ್ಪರ ಪ್ರೀತಿ ಮಾಡಲಾರಂಭಿಸಿದ್ದರು. ಇಬ್ಬರ ಸಂಬಂಧ ಕೇವಲ ಪ್ರೀತಿಯಲ್ಲಿದ್ದರೆ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಲೇ ಇರಲಿಲ್ಲ. ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನ ಬಳಸಿಕೊಂಡಾತ ಜಾತಿ ಕಾರಣ ನೀಡಿ ಮದುವೆಯಾಗಲು ಹಿಂದೇಟು ಹಾಕಿದ್ದ. ತನಗೆ ನ್ಯಾಯಬೇಕೆಂದು ಹಠ ಹಿಡಿದ ಆಕೆ ಪ್ರಿಯಕರನ ಮನೆ ಮುಂದೆ ಕುಳಿತು, ನ್ಯಾಯಬೇಕು ಎನ್ನುತ್ತಿದ್ದಾಳೆ.

ಹೌದು ಎಂಟು ವರ್ಷಗಳ ಕಾಲ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಮದುವೆಯಾಗುವುದಾಗಿ ನಂಬಿಕೆ, ಯುವಕನೊಬ್ಬ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾಳೆ. ಅಂದಹಾಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನನ್ನ ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡು ಮದುವೆಯಾಗಲು ನಿರಾಕಿಸಿದ್ದಾನೆ ಎಂದು ಆರೋಪಿಸಿ ಗ್ರಾಮದ ಮಂಜು ಎಂಬಾತನ ಮನೆ ಮುಂದೆ ರಮ್ಯಶ್ರೀ ಎಂಬಾಕೆ ಪ್ರತಿಭಟನೆಗೆ ಕುಳಿತಿದ್ದಾಳೆ.

ಮಂಜು ಮನೆಯವರೆಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ ಸುಮಾರಿಗೆ ಆತನ ಮನೆ ಬಳಿಗೆ ಬಂದ ಆಕೆ, ಮಂಜು ಹಾಗೂ ತನ್ನ ನಡುವೆ ಹೇಗೆಲ್ಲಾ ಸಂಬಂಧ ಬೆಳೆಯಿತು. ಆತ ಮದುವೆಗೂ ಮೊದಲು ತನ್ನ ಜೊತೆ ಹೇಗೆಲ್ಲಾ ಇದ್ದ, ಈಗ ಮದುವೆಯಾಗಲು ಯಾಕೆ ನಿರಾಕರಿಸುತ್ತಿದ್ದಾನೆ. ತನಗೆ ನ್ಯಾಯ ಬೇಕೇ ಬೇಕು ಎಂದೆಲ್ಲಾ ಹೇಳಿ ಮನೆಯ ಮುಂದೆ ಒಬ್ಬಳೇ ಕುಳಿತಿದ್ದಾಳೆ.

ಒಂದು ರಾತ್ರಿ ಪೂರ್ತಿ ಮಂಜು ಮನೆಯ ಎದುರಿಗೆ ಕುಳಿತಿದ್ದಳು, ಬೆಳಗಾಗುತ್ತಲೇ ಆಕೆಯ ಮೇಲೆ ಮಂಜು ಮನೆಯವರು ಹಲ್ಲೆ ನಡೆಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ರಮ್ಯ ಶ್ರೀ ಹಾಗೂ ಮಂಜು ಮನೆಯವರ ನಡುವೆ ದೊಡ್ಡ ವಾಗ್ಯುದ್ಧವೇ ನಡೆದಿದ್ದು ಗಲಾಟೆಯಲ್ಲಿ ಗಾಯಗೊಂಡಿರೊ ರಮ್ಯ ಶ್ರೀ ಸದ್ಯ ಮಂಡ್ಯ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲದೆ ಪೊಲೀಸ್ ಠಾಣೆಗೂ ದೂರು ನೀಡಲು ಮುಂದಾಗಿದ್ದಾಳೆ.

Also Read: ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?

ಅಷ್ಟಕ್ಕೂ ಇಲ್ಲಿ ವಂಚನೆಗೊಳಗಾಗಿರೊ ಆರೋಪ ಮಾಡ್ತಿರೊ ರಮ್ಯಶ್ರೀ ಮೂಲತಃ ಮೈಸೂರು ಜಿಲ್ಲೆ ನಂಜನಗೂಡಿನ ನಿವಾಸಿಯಾಗಿದ್ದು, ಎಂಎ ಬಿಇಡಿ ಮಾಡ್ಕೊಂಡು ಖಾಸಗಿ ಶಾಲೆಯೊಂದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ಧಾಳೆ. ಬಳ್ಳಗೆರೆ ಈಕೆಯ ಅಜ್ಜಿ ಊರಾಗಿದ್ದು ಕಳೆದ ಹಲವು ವರ್ಷಗಳಿಂದಲೂ ಅಜ್ಜಿಯ ಮನೆಯಲ್ಲಿಯೇ ಇದ್ದಳು. ಕಾಲೇಜಿಗೆ ಹೋಗಿ ಬರುವ ವೇಳೆ ಅದೇ ಗ್ರಾಮದ ಮಂಜುವಿನ ಪರಿಚಯವಾಗಿದೆ. ಪರಿಚಯ ಸ್ನೇಹ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಪ್ರೀತಿಸಿ ದೈಹಿಕವಾಗಿಯೂ ಒಂದಾಗಿದ್ದಾರೆ.

ಆದರೆ ಪ್ರೀತಿಯ ಸಂದರ್ಭದಲ್ಲಿ ಇಲ್ಲದ ಜಾತಿ ಮದುವೆಗೆ ಅಡ್ಡಿಯಾಗಿತ್ತು. ರಮ್ಯಶ್ರೀ ಮದುವೆಯಾಗುವಂತೆ ಒತ್ತಾಯ ಮಾಡಿದಾಗಲೆಲ್ಲಾ ಮಂಜು ಈಗ ಆಗ ಎಂದು ಸಬೂಬು ಹೇಳುತ್ತಿದ್ದ. ಜಾತಿ ಬೇರೆಯಾಗಿರುವುದರಿಂದ ಮೊದಲು ನನ್ನ ಜೊತೆ ಹುಟ್ಟಿದವರ ಮದುವೆಯಾಗಲಿ ನಂತರ ನಾವು ಮದುವೆಯಾಗೋಣ ಎಂದು ಹೇಳಿ ನಂಬಿಸಿದ್ದ. ಆದ್ರೆ ಅದಕ್ಕೆ ಕಾಲ ಕೂಡಿ ಬರಲೇ ಇಲ್ಲ. ಕಡೆಗೆ ಬೆಂಗಳೂರಿನ ಖಾಸಗಿ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇರಲಾರಂಭಿಸಿದ್ದ.

ಆದ್ರೆ ಮಂಜು ಮೇಲಿನ ಪ್ರೀತಿಯಿಂದ ರಮ್ಯಶ್ರೀ ಬೆಂಗಳೂರಿಗೂ ತೆರಳಿದ್ದಳು. ಆದರೆ ಮಂಜು ಮಾತ್ರ ಮದುವೆಗೆ ಒಪ್ಪಲೇ ಇಲ್ಲ. ಜೊತೆಗೆ ರಮ್ಯಶ್ರೀ ಕೈಗೆ ಸಿಗದೇ ಆಟ ಆಡಿಸಲು ಶುರು ಮಾಡಿದ್ದ. ಕಡೆಗೆ ಮಂಜು ಬಳ್ಳಗೆರೆಯ ಊರಿನಲ್ಲೇ ಇದ್ದಾನೆ ಎಂದು ತಿಳಿದು ಆತನ ಮನೆಗೆ ಹೋಗಿ ಪ್ರತಿಭಟನೆಗೆ ಕುಳಿತ ರಮ್ಯಾಶ್ರೀ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಬಲವಂತವಾಗಿ ಕಳುಹಿಸಿದ್ದಾರೆ. ಮಂಜುವಿನಿಂದ ಅನ್ಯಾಯಕ್ಕೊಳಗಾಗಿರೊ ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಿ ಎನ್ನುತ್ತಿದ್ದಾರೆ ರಮ್ಯಶ್ರೀ ಹೆತ್ತವರು.

ಇನ್ನು ಘಟನೆ ಸಂಬಂಧ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಇಲ್ಲಿ ಮಂಜುವಿನ ಮೇಲೆ ಆರೋಪ ಮಾಡ್ತಿರೊ ರಮ್ಯ ಶ್ರೀ ಮೇಲೂ ಮಂಜು ಕಡೆಯವರು ಆರೋಪ ಮಾಡುತ್ತಿದ್ದಾರೆ. ಈಕೆ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಪ್ರೀತಿಸಿ ನಂಬಿಕೆ ದ್ರೋಹ ಮಾಡಿದ್ದಾನೆ ಎಂದು ಯುವತಿ ಆರೋಪಿ ಮಾಡುತ್ತಿದ್ದರೆ, ಆಕೆಯೇ ನಮಗೆ ಮೋಸ ಮಾಡಿದ್ದಾಳೆ ಎಂದು ಯುವಕನ ಕಡೆಯವರು ಆರೋಪ ಮಾಡುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿಯಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್