AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನಿಂದಲೇ ಇನ್ನಿಲ್ಲದ ಕಿರುಕುಳ; ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡ ಮಗ, ಡೆತ್​ನೋಟ್​​ನಲ್ಲಿ ಬಯಲಾಯ್ತು ಸತ್ಯ

ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ.

ಅಪ್ಪ-ಅಮ್ಮನಿಂದಲೇ ಇನ್ನಿಲ್ಲದ ಕಿರುಕುಳ; ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡ ಮಗ, ಡೆತ್​ನೋಟ್​​ನಲ್ಲಿ ಬಯಲಾಯ್ತು ಸತ್ಯ
ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಗಿರೀಶ್​
TV9 Web
| Edited By: |

Updated on:Sep 09, 2021 | 11:41 AM

Share

ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಡೆತ್​ ನೋಟ್​  (Death Note) ಬರೆದಿಟ್ಟ ಮಗ ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ. 32 ವರ್ಷದ ಗಿರೀಶ್​ ಆತ್ಮಹತ್ಯೆ ಮಾಡಿಕೊಂಡವರು.  ‘ನನ್ನ ಸಾವಿಗೆ ಅಪ್ಪ ರಾಜು..ಅಮ್ಮ ದೇವಮಣಿಯೇ ಕಾರಣ’ ಎಂದು ಸ್ಪಷ್ಟವಾಗಿ ಡೆತ್​ ನೋಟ್​ ಬರೆದಿದ್ದಾರೆ. ಹಾಗೇ, ತಮಗೆ ತಂದೆ-ತಾಯಿ ಹೇಗೆ ಕಿರುಕುಳ ನೀಡಿದ್ದರು ಎಂಬುದನ್ನೂ ಡೆತ್​ ನೋಟ್​ನಲ್ಲಿ ವಿವರಿಸಿದ್ದಾರೆ. 

ಗಿರೀಶ್​ ತಂದೆ  ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರಾಗಿದ್ದಾರೆ. ಹಾಗೇ ತಾಯಿ ದೇವಮಣಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಗಿರೀಶ್​ಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ರಾಜು ಮತ್ತು ದೇವಮಣಿ ಇಬ್ಬರೂ ಮಗನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಪದೇಪದೆ ಮಗ-ಸೊಸೆಯನ್ನು ಹಂಗಿಸುತ್ತಿದ್ದರು ಎಂದು ಹೇಳಲಾಗಿದೆ.  ಇದೆಲ್ಲ ಗಿರೀಶ್ ಬರೆದಿಟ್ಟಿರುವ ಡೆತ್​ನೋಟ್​​ನಲ್ಲೇ ಉಲ್ಲೇಖವಾಗಿದೆ.

ರಾಜು ಮತ್ತು ದೇವಮಣಿ ದಂಪತಿ ಒಂದು ಚೆಂದನೆಯ ಮನೆಯಲ್ಲಿ ಇದ್ದರು. ಆದರೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ಕೊಟ್ಟಿಗೆಯಲ್ಲಿ ಇಟ್ಟಿದ್ದರು. ಹಾಗೇ, ಆಸ್ತಿಯನ್ನೂ ಕೊಟ್ಟಿರಲಿಲ್ಲ. ಗಿರೀಶ್​ ಬಳಿ ಜೀವನೋಪಾಯಕ್ಕೆ ಇದ್ದಿದ್ದ ಒಂದು ಟ್ರ್ಯಾಕ್ಟರ್​ನ್ನೂ ಕೂಡ ಕಸಿದುಕೊಂಡಿದ್ದರು. ಜಮೀನು, ಮನೆ, ಆಸ್ತಿ ಏನೂ ಇಲ್ಲದೆ ಗಿರೀಶ್​ ತೀರ ಕಷ್ಟಪಡುತ್ತಿದ್ದರು. ಇದೆಲ್ಲದರಿಂದ ಮನನೊಂದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು-ಪತ್ನಿಯೊಂದಿಗೆ ವಾಸವಾಗಿದ್ದ ಕೊಟ್ಟಿಗೆ ಗೋಡೆ ಮೇಲೆಲ್ಲ, ‘ನನ್ನ ಸಾವಿಗೆ ಅಪ್ಪ-ಅಮ್ಮನೇ ಕಾರಣ, ಹೆತ್ತವರ ಕಿರುಕುಳವೇ ಕಾರಣ’ ಎಂದು ಬರೆದಿಟ್ಟಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಗಿರೀಶ್​ ಹೆತ್ತವರಾದ ರಾಜು ಮತ್ತು ದೇವಮಣಿ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: Farmers Protest ಕರ್ನಾಲ್ ಮಾಜಿ ಎಸ್‌ಡಿಎಮ್ ವಿರುದ್ಧ ಕ್ರಮದ ಕುರಿತು ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಸಿದ ರೈತರು

CM Bommai Interview LIVE: ಟಿವಿ9 ಸ್ಟುಡಿಯೋದಲ್ಲಿ ಸಿಎಂ ಬೊಮ್ಮಾಯಿ; ಕಾಮನ್​ಮ್ಯಾನ್ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

Published On - 11:40 am, Thu, 9 September 21

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!