58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ; ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ

| Updated By: ಆಯೇಷಾ ಬಾನು

Updated on: Feb 20, 2022 | 9:42 AM

ಮಂಡ್ಯ ಜಿಲ್ಲೆ ದೊಡ್ಡಬಾಣಸವಾಡಿ ಗ್ರಾಮದಲ್ಲಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಕಳೆದ 58 ವರ್ಷದಿಂದ ನಡೆದಿರಲಿಲ್ಲ. ಸದ್ಯ ಬಸಪ್ಪ 3 ದೇಗುಲಕ್ಕೆ ಮೂವರು ಪೂಜಾರಿಗಳನ್ನು ನೇಮಿಸುವ ಮೂಲಕ ಅಚ್ಚರಿ ಮೂಡಿಸಿದೆ.

58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ; ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ
ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ
Follow us on

ಮಂಡ್ಯ: ಬಸಪ್ಪನ ಮತ್ತೊಂದು ಪವಾಡಕ್ಕೆ ಸಕ್ಕರೆನಾಡು ಮಂಡ್ಯ ಸಾಕ್ಷಿಯಾಗಿದೆ. 58 ವರ್ಷದಿಂದ ಇದ್ದ ದೇಗುಲದ ಗುಡ್ಡಪ್ಪ ನೇಮಕ ವಿವಾದಕ್ಕೆ ತೆರೆ ಬಿದ್ದಿದೆ. ದೇವಾಲಯದ ಮುಂಭಾಗದ ಕೊಳಕ್ಕೆ ತಳ್ಳಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಬಸಪ್ಪನ ಪವಾಡಕ್ಕೆ ಮಂಡ್ಯ ಜನ ಅಚ್ಚರಿ ಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ದೊಡ್ಡಬಾಣಸವಾಡಿ ಗ್ರಾಮದಲ್ಲಿ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಕಳೆದ 58 ವರ್ಷದಿಂದ ನಡೆದಿರಲಿಲ್ಲ. ಸದ್ಯ ಬಸಪ್ಪ 3 ದೇಗುಲಕ್ಕೆ ಮೂವರು ಪೂಜಾರಿಗಳನ್ನು ನೇಮಿಸುವ ಮೂಲಕ ಅಚ್ಚರಿ ಮೂಡಿಸಿದೆ. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಗುರುತಿಸಿದ ಬಸಪ್ಪ, ಅವರನ್ನು ದೇವಾಲಯದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದೆ. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ದೇಗುಲಕ್ಕೆ ಅರ್ಚಕರಾಗಿ ಶಿವಣ್ಣ ಆಯ್ಕೆ ಆಗಿದ್ದಾರೆ. 58 ವರ್ಷದಿಂದ ನಿಂತಿದ್ದ ಹಬ್ಬಕ್ಕೆ ಬಸಪ್ಪ ಮುನ್ನುಡಿ ಬರೆದಿದ್ದಾರೆ.

58 ವರ್ಷದ ಹಿಂದೆ ದೇವಾಲಯದ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ರು. ಆದ್ರೆ ಅರ್ಚಕರ ಮೈಮೇಲೆ ದೇವರು ಬಂದಿಲ್ಲ ಎಂದು ಹಬ್ಬವನ್ನು ನಿಲ್ಲಿಸಲಾಗಿತ್ತು. ಸದ್ಯ ಪೂಜಾರಿಗಳ ಆಯ್ಕೆ ವಿವಾದದಿಂದ ನಿಂತಿದ್ದ ಹಬ್ಬ ಆಚರಣೆ ಈಗ ಮತ್ತೆ ಶುರುವಾಗಲಿದೆ.

ದೇವಾಲಯದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆ ಮಾಡಿದ ಬಸಪ್ಪ

ಇದನ್ನೂ ಓದಿ: Coconut Water: ಹೆಚ್ಚು ಎಳನೀರು ಕುಡಿಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ!

ನಾಳೆಯಿಂದ ಪಿಯು ಪ್ರಾಯೋಗಿಕ ಪರೀಕ್ಷೆ ಆರಂಭ; ಹಿಜಾಬ್ ವಿವಾದದಿಂದ ಗೈರಾದರೆ ಮತ್ತೆ ಅವಕಾಶ ಇಲ್ಲ