Tomato crop: ಅಯ್ಯೋ! ಇವರೆಂಥಾ ಜನ? ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್ ಸುರಿದು ಬೆಳೆ ನಾಶ ಮಾಡಿದ್ದಾರೆ!

Jealousy at its peak! ಅತ್ತ ರೈತ ಟೊಮೇಟೊ ಮಾರಾಟ ಮಾಡಲು ತಮಿಳುನಾಡಿಗೆ ಹೋದ ಸಂದರ್ಭದಲ್ಲಿ ಇತ್ತ ಕಿಡಿಗೇಡಿಗಳು ಆತನ ತೋಟದಲ್ಲಿ ನಳನಳಿಸುತ್ತಿದ್ದ ಸುಮಾರು ಮುನ್ನೂರು ಗಿಡಗಳಿಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿದ್ದಾರೆ!

Tomato crop: ಅಯ್ಯೋ! ಇವರೆಂಥಾ ಜನ? ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್  ಸುರಿದು ಬೆಳೆ ನಾಶ ಮಾಡಿದ್ದಾರೆ!
ಹೊಟ್ಟೆಯುರಿಗೆ ಸಮೃದ್ಧವಾಗಿ ಬೆಳೆದಿದ್ದ ಟೊಮೇಟೊ ಗಿಡಗಳಿಗೆ ಆ್ಯಸಿಡ್ ಸಿಂಪಡಣೆ
Follow us
| Updated By: ಸಾಧು ಶ್ರೀನಾಥ್​

Updated on:Aug 01, 2023 | 10:50 AM

ಮಂಡ್ಯ, ಜುಲೈ 31: ಆ ರೈತ ಲಕ್ಷಾಂತರ ರೂ ಸಾಲ ಮಾಡಿ ಟಮೋಟಾ ಬೆಳೆಯನ್ನ ಬೆಳೆದಿದ್ದ. ಆತನ ಶ್ರಮ ಮತ್ತು ನೀರಿಕ್ಷೆಗೆ ತಕ್ಕಂತೆ ಉತ್ತಮ ಬೆಳೆ ಕೂಡ ಬಂದಿತ್ತು. ಅಷ್ಟೇ ಅಲ್ಲ, ಆತನ ನಿರೀಕ್ಷೆಗೂ ಮೀರಿದ ಬೆಲೆ ಕೂಡ ಈ ಬಾರಿ ಸಿಗುವುದಿತ್ತು. ಆದರೆ ಇದು ಕೆಲ ಕಿಡಿಗೇಡಿಗಳ (Miscreants) ಕಣ್ಣನ್ನ ಕೆಂಪು ಮಾಡಿಸಿತು (Jealous). ಹೀಗಾಗಿ ಟೊಮೇಟೊ ಗಿಡಗಳಿಗೆ ( tomato crop) ಆ್ಯಸಿಡ್ ಮಿಶ್ರಿತ (Acid) ನೀರನ್ನ ಸಿಂಪಡಣೆ ಮಾಡಿ ಬೆಳೆಯನ್ನೇ ನಾಶಮಾಡಿಬಿಟ್ಟಿದ್ದಾರೆ. ಹೌದು ಕೆಂಪುಸುಂದರಿ ಟೊಮೇಟೊಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆಯಿದೆ. ಮಾರುಕಟ್ಟೆಯಲ್ಲಿ 22 ಕೆಜಿ ಕ್ರೇಟ್ ಗೆ ಸರಾಸರಿ 2500 ರಿಂದ 2800 ರೂ ಬೆಲೆ ಇದೆ. ಯಾವ ವರ್ಷ, ಯಾವ ಸಮಯದಲ್ಲೂ ಇಲ್ಲದ ಬೆಲೆ ಟೊಮೇಟೊಗೆ ಬಂದಿದೆ. ರೈತ ನೀರಿಕ್ಷೆ ಮಾಡಿರದಷ್ಟು ಬೆಲೆ ಈ ಬಾರಿ ಬಂದಿದೆ. ಹೀಗಾಗಿ ರೈತನ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ. ಆದರೆ ಇಲ್ಲೊಬ್ಬ ರೈತ ಮಾತ್ರ ಟೊಮೇಟೊ ಬೆಳೆ ಬೆಳೆದು ಕಂಗಾಲು ಪಡುತ್ತಿದ್ದಾನೆ. ಆತ ಬೆಳೆದಿರೋ ಟೊಮೇಟೊ ಬೆಳೆಯ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ರೈತ ಬೆಳೆದ ಟಮೋಟಾ ಬೆಳೆಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿ ಬೆಳೆಯನ್ನೇ ನಾಶಪಡಿಸಿದ್ದಾರೆ. ಅಂದಹಾಗೆ ಇಂತಹ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ (Malavalli, Mandya) ಹಂಗ್ರಾಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು ಹಂಗ್ರಾಹಳ್ಳಿ ಗ್ರಾಮದ ರೈತ ಮಹದೇವಸ್ವಾಮಿ ಎಂಬಾತ ತನ್ನ ಅರ್ಧ ಎಕರೆ ಜಮೀನನಲ್ಲಿ ಸುಮಾರು ಒಂದು ಲಕ್ಷ ಖರ್ಚು ಮಾಡಿ ಸುಮಾರು 2500 ಟೊಮೇಟೊ ಗಿಡಗಳನ್ನ ಬೆಳೆದಿದ್ದ. ಒಳ್ಳೆಯ ಬೆಲೆಯೂ ಕೂಡ ಸಿಕ್ಕಿತ್ತು. ಅದರಂತೆ ಎರಡು ಬಾರಿ ತಮಿಳುನಾಡಿಗೆ ಮಾರಾಟ ಕೂಡ ಮಾಡಿ ಬಂದಿದ್ದ.

ಆದರೆ ಮಾರಾಟ ಮಾಡಲು ತಮಿಳುನಾಡಿಗೆ ಹೋದಂತಹ ಸಂದರ್ಭದಲ್ಲಿ ಇತ್ತ ಕಿಡಿಗೇಡಿಗಳು ಆತನ ತೋಟದಲ್ಲಿ ನಳನಳಿಸುತ್ತಿದ್ದ ಸುಮಾರು 250 ರಿಂದ 300 ಗಿಡಗಳಿಗೆ ಆ್ಯಸಿಡ್ ಮಿಶ್ರಿತ ನೀರನ್ನ ಸಿಂಪಡಣೆ ಮಾಡಿದ್ದಾರೆ. ಹೀಗಾಗಿ ಗಿಡಗಳು ಸಂಪೂರ್ಣವಾಗಿ ಬುಡದಿಂದ ಒಣಗಿ ಹೋಗಿವೆ. ತಮಿಳನಾಡಿನಿಂದ ವಾಪಸಾದ ರೈತ ಮಹದೇವಸ್ವಾಮಿ ಅದನ್ನ ಕಂಡು ಕಂಗಾಲಾಗಿದ್ದಾನೆ.

Also Read: ಇಂದಿನಿಂದ ದುಬಾರಿ ದುನಿಯಾ; ಟೊಮೆಟೊ ದರ ಬರೆಯ ಮೇಲೆ ಮತ್ತೊಂದು ಬರೆ, ಹಾಲು-ಹೋಟೆಲ್ ದರ ಹೆಚ್ಚಳ

ಅಂದಹಾಗೆ ಅರ್ಧ ಎಕರೆ ಜಮೀನಿನಲ್ಲಿ ಅಲ್ಲಲ್ಲಿ ಕಿಡಿಗೇಡಿಗಳು ಆ್ಯಸಿಡ್ ಮಿಶ್ರಿತ ನೀರನ್ನ ಹಾಕಿದ್ದಾರೆ. ಉಳಿದ ಗಿಡಗಳು ಹಚ್ಚಹಸಿರಿನಿಂದ ಚೆನ್ನಾಗಿಯೇ ಇವೆ. ಹೀಗಾಗಿ ರೈತ ಘಟನೆ ನಡೆದ ನಂತರ ಉಳಿದ ಬೆಳೆಯನ್ನಾದರೂ ಉಳಿಸಿಕೊಳ್ಳಲು ದಿನಾ ರಾತ್ರಿ ವೇಳೆ ಸ್ವತಃ ತಾನೇ ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಆ್ಯಸಿಡ್ ದಾಳಿಯಿಂದ ನಾಶವಾಗಿರೋ ಗಿಡಗಳು ಹಾಗೂ ಮಣ್ಣನ್ನ ಪರೀಕ್ಷೆ ಮಾಡಿಸಲು ಸಹ ಮುಂದಾಗಿದ್ದಾನೆ. ಇನ್ನು ಈ ರೀತಿಯ ಘಟನೆಗಳು ಗ್ರಾಮದ ಇತರೇ ರೈತರನ್ನು ಆತಂಕಕ್ಕೆ ತಳ್ಳಿದೆ.

ಮಂಡ್ಯ ಜಿಲ್ಲೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:38 am, Tue, 1 August 23