AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?

ಅವನು ದುಡ್ ಮಾಡ್ಬೇಕು ಅಂತಾ ಸಿಲಿಕಾನ್ಸಿಟಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸಕ್ಕೂ ಸೇರಿದ್ದ. ಪ್ರತಿದಿನವೂ ಕಾಸು ನೋಡುತ್ತಿದ್ದ. ಕೆಲಸ ಮುಗೀತಿದ್ದಂತೆ ಫುಲ್ ಟೈಟ್ ಆಗ್ತಿದ್ದ. ಹೀಗಿದ್ದವನು ಲಾಲ್ಡೌನ್ ಅಂತಾ ಊರಿಗೆ ಬಂದು ಓಡಾಡಿಕೊಂಡಿದ್ದವನು ಈಗ ಮಸಣ ಸೇರಿದ್ದಾನೆ.

ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?
ಚಂದನ್ ಕೊಲೆಯಾದ ಯುವಕ
TV9 Web
| Edited By: |

Updated on: Jun 17, 2021 | 7:27 AM

Share

ಮಂಡ್ಯ: ಹಣ ಮಾಡಬೇಕು ಅಂತ ಬೆಂಗಳೂರಿಗೆ ಬಂದವ ವಾಪಸ್ ಮನೆಗೆ ಹೋಗುತ್ತಿದ್ದಂತೆ ಕೊಲೆಯಾಗಿದ್ದಾರೆ. ಚಂದನ್(22) ಕೊಲೆಯಾದ ಯುವಕ. ಈತ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದ ನಿವಾಸಿ. ದುಡ್ ಮಾಡ್ಬೇಕು ಅಂತಾ ಗಂಟು ಮೂಟೆ ಕಟ್ಕೊಂಡು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸ ಮಾಡ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದ. ಪ್ರತಿದಿನ ದೇಹಕ್ಕೆ ಮತ್ತೇರಿಸಿಕೊಂಡು ಮಜಾ ಮಾಡ್ತಿದ್ದ. ಮೂರು ತಿಂಗಳಿಗೊಮ್ಮೆನೋ ಅಥವಾ ಆರು ತಿಂಗಳಿಗೊಮ್ಮೆನೋ ಊರಿಗೆ ಹೋಗುತ್ತಿದ್ದ. ಒಂದೆರಡು ದಿನ ಊರಲ್ಲಿದ್ದು ವಾಪಸ್ ಬೆಂಗಳೂರಿಗೆ ಬರ್ತಿದ್ದ. ಆದ್ರೆ, 2ನೇ ಅಲೆಯ ಹೊಡೆತದಿಂದ ಬೆಂಗಳೂರು ಲಾಕ್ಡೌನ್ ಆಗಿದ್ದೇ ತಡ, ಈ ಚಂದನ್ ಊರಿಗೆ ಹೋಗಿದ್ದ. ತಂದೆ, ತಾಯಿ ಮತ್ತು ಅಣ್ಣನ ಜೊತೆ ವಾಸವಿದ್ದ. ಆದರೆ ಸಿಲ್ಲಿ ವಿಚಾರಕ್ಕೆ ಅಣ್ಣನಾದ ಅಭಿಷೇಕ್, ಚಂದನ್ನ್ನ ಕೊಲೆ ಮಾಡಿದ್ದಾನೆ. ಅದು ಕೂಡ ಕಲ್ಲಿನಿಂದ ಜಜ್ಜಿ ಪರಾರಿ ಆಗಿದ್ದಾನೆ.

ಎಣ್ಣೆ ಪಾರ್ಟಿಗಳ ನಡುವೆ ಕಿರಿಕ್.. ತಮ್ಮ ಕೊಲೆ ಈ ಚಂದನ್, ಅಭಿಷೇಕ್ ಇಬ್ರೂ ಎಣ್ಣೆ ಪಾರ್ಟಿಗಳೇ. ಹೀಗಾಗಿ ಅಣ್ಣ, ತಮ್ಮಂದಿರ ನಡುವೆ ಹೊಂದಾಣಿಕೆ ಇರಲಿಲ್ವಂತೆ. ಕುಡಿದ ಮತ್ತಲ್ಲಿ ಇಬ್ಬರು ಜಗಳ ಮಾಡಿಕೊಳ್ತಿದ್ರಂತೆ. ಮನೆಯಲ್ಲಿ ಇಬ್ಬರನ್ನ ಸಮಾಧಾನ ಮಾಡೋದೇ ಪೋಷಕರಿಗೆ ದೊಡ್ಡ ಕೆಲಸವಾಗಿತ್ತಂತೆ. ಹೀಗೆ ಮೊನ್ನೆಯೂ ಸಹೋದರರು ಕುಡಿದ ಮತ್ತಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೃಗದಂತೆ ಆದ ಅಭಿಷೇಕ್, ಕಲ್ಲಿನಿಂದ ಹೊಡೆದು ತಮ್ಮನನ್ನ ಕೊಂದು ತಲೆ ಮರೆಸಿಕೊಂಡಿದ್ದಾನೆ.

ಸದ್ಯ, ಒಬ್ಬ ಮಗನನ್ನ ಕಳೆದುಕೊಂಡಿರೋ ಪೋಷಕರು, ಇನ್ನೊಬ್ಬನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇತ್ತ, ಕೆರಗೋಡು ಪೊಲೀಸರು ಪರಾರಿ ಆಗಿರೋ ಆರೋಪಿಗೆ ಬಲೆ ಬೀಸಿದ್ದು, ಕೊಲೆಗೆ ಬೇರೆ ರೀಸನ್ ಏನಾದ್ರು ಇದ್ಯಾ ಅಂತಾ ತನಿಖೆ ಮಾಡ್ತಿದ್ದಾರೆ.

ಇದನ್ನೂ ಓದಿ: ಈ 4 ರಾಶಿಯ ಜನ ತುಂಬಾ ಕಾಸ್ಟ್ಲಿ ಲೈಫ್​ಸ್ಟೈಲ್ ಇಷ್ಟಪಡುತ್ತಾರೆ; ಇವರು ಹಣವನ್ನು ನೀರಿನಂತೆ ಬಳಸುತ್ತಾರೆ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ