AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?

ಅವನು ದುಡ್ ಮಾಡ್ಬೇಕು ಅಂತಾ ಸಿಲಿಕಾನ್ಸಿಟಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸಕ್ಕೂ ಸೇರಿದ್ದ. ಪ್ರತಿದಿನವೂ ಕಾಸು ನೋಡುತ್ತಿದ್ದ. ಕೆಲಸ ಮುಗೀತಿದ್ದಂತೆ ಫುಲ್ ಟೈಟ್ ಆಗ್ತಿದ್ದ. ಹೀಗಿದ್ದವನು ಲಾಲ್ಡೌನ್ ಅಂತಾ ಊರಿಗೆ ಬಂದು ಓಡಾಡಿಕೊಂಡಿದ್ದವನು ಈಗ ಮಸಣ ಸೇರಿದ್ದಾನೆ.

ಲಾಕ್​ಡೌನ್ ಅಂತ ಮನೆಗೆ ಬಂದಿದ್ದ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಅಣ್ಣ ಎಸ್ಕೇಪ್.. ಆಗಿದ್ದೇನು?
ಚಂದನ್ ಕೊಲೆಯಾದ ಯುವಕ
TV9 Web
| Edited By: |

Updated on: Jun 17, 2021 | 7:27 AM

Share

ಮಂಡ್ಯ: ಹಣ ಮಾಡಬೇಕು ಅಂತ ಬೆಂಗಳೂರಿಗೆ ಬಂದವ ವಾಪಸ್ ಮನೆಗೆ ಹೋಗುತ್ತಿದ್ದಂತೆ ಕೊಲೆಯಾಗಿದ್ದಾರೆ. ಚಂದನ್(22) ಕೊಲೆಯಾದ ಯುವಕ. ಈತ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದ ನಿವಾಸಿ. ದುಡ್ ಮಾಡ್ಬೇಕು ಅಂತಾ ಗಂಟು ಮೂಟೆ ಕಟ್ಕೊಂಡು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದ. ಬಾರ್ವೊಂದ್ರಲ್ಲಿ ಕೆಲಸ ಮಾಡ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದ. ಪ್ರತಿದಿನ ದೇಹಕ್ಕೆ ಮತ್ತೇರಿಸಿಕೊಂಡು ಮಜಾ ಮಾಡ್ತಿದ್ದ. ಮೂರು ತಿಂಗಳಿಗೊಮ್ಮೆನೋ ಅಥವಾ ಆರು ತಿಂಗಳಿಗೊಮ್ಮೆನೋ ಊರಿಗೆ ಹೋಗುತ್ತಿದ್ದ. ಒಂದೆರಡು ದಿನ ಊರಲ್ಲಿದ್ದು ವಾಪಸ್ ಬೆಂಗಳೂರಿಗೆ ಬರ್ತಿದ್ದ. ಆದ್ರೆ, 2ನೇ ಅಲೆಯ ಹೊಡೆತದಿಂದ ಬೆಂಗಳೂರು ಲಾಕ್ಡೌನ್ ಆಗಿದ್ದೇ ತಡ, ಈ ಚಂದನ್ ಊರಿಗೆ ಹೋಗಿದ್ದ. ತಂದೆ, ತಾಯಿ ಮತ್ತು ಅಣ್ಣನ ಜೊತೆ ವಾಸವಿದ್ದ. ಆದರೆ ಸಿಲ್ಲಿ ವಿಚಾರಕ್ಕೆ ಅಣ್ಣನಾದ ಅಭಿಷೇಕ್, ಚಂದನ್ನ್ನ ಕೊಲೆ ಮಾಡಿದ್ದಾನೆ. ಅದು ಕೂಡ ಕಲ್ಲಿನಿಂದ ಜಜ್ಜಿ ಪರಾರಿ ಆಗಿದ್ದಾನೆ.

ಎಣ್ಣೆ ಪಾರ್ಟಿಗಳ ನಡುವೆ ಕಿರಿಕ್.. ತಮ್ಮ ಕೊಲೆ ಈ ಚಂದನ್, ಅಭಿಷೇಕ್ ಇಬ್ರೂ ಎಣ್ಣೆ ಪಾರ್ಟಿಗಳೇ. ಹೀಗಾಗಿ ಅಣ್ಣ, ತಮ್ಮಂದಿರ ನಡುವೆ ಹೊಂದಾಣಿಕೆ ಇರಲಿಲ್ವಂತೆ. ಕುಡಿದ ಮತ್ತಲ್ಲಿ ಇಬ್ಬರು ಜಗಳ ಮಾಡಿಕೊಳ್ತಿದ್ರಂತೆ. ಮನೆಯಲ್ಲಿ ಇಬ್ಬರನ್ನ ಸಮಾಧಾನ ಮಾಡೋದೇ ಪೋಷಕರಿಗೆ ದೊಡ್ಡ ಕೆಲಸವಾಗಿತ್ತಂತೆ. ಹೀಗೆ ಮೊನ್ನೆಯೂ ಸಹೋದರರು ಕುಡಿದ ಮತ್ತಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮೃಗದಂತೆ ಆದ ಅಭಿಷೇಕ್, ಕಲ್ಲಿನಿಂದ ಹೊಡೆದು ತಮ್ಮನನ್ನ ಕೊಂದು ತಲೆ ಮರೆಸಿಕೊಂಡಿದ್ದಾನೆ.

ಸದ್ಯ, ಒಬ್ಬ ಮಗನನ್ನ ಕಳೆದುಕೊಂಡಿರೋ ಪೋಷಕರು, ಇನ್ನೊಬ್ಬನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇತ್ತ, ಕೆರಗೋಡು ಪೊಲೀಸರು ಪರಾರಿ ಆಗಿರೋ ಆರೋಪಿಗೆ ಬಲೆ ಬೀಸಿದ್ದು, ಕೊಲೆಗೆ ಬೇರೆ ರೀಸನ್ ಏನಾದ್ರು ಇದ್ಯಾ ಅಂತಾ ತನಿಖೆ ಮಾಡ್ತಿದ್ದಾರೆ.

ಇದನ್ನೂ ಓದಿ: ಈ 4 ರಾಶಿಯ ಜನ ತುಂಬಾ ಕಾಸ್ಟ್ಲಿ ಲೈಫ್​ಸ್ಟೈಲ್ ಇಷ್ಟಪಡುತ್ತಾರೆ; ಇವರು ಹಣವನ್ನು ನೀರಿನಂತೆ ಬಳಸುತ್ತಾರೆ

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್