AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತು ತಿಂಗಳ ಕೂಸನ್ನು ಡಾಬಾದಲ್ಲಿ ಬಿಟ್ಟು ಹೋದ ತಾಯಿ, ಆದರೂ ಮರಳಿ ಅಮ್ಮನ ಮಡಿಲು ಸೇರಿದ ಕಂದ.. ಆಗಿದ್ದೇನು?

ತಾಯಿಯೊಬ್ಬಳು, ತಾನು ಸತ್ತರೂ ಪರವಾಗಿಲ್ಲ. 10 ತಿಂಗಳ ಮಗು ಸಾಯಬಾರದೆಂದು ಡಾಬಾ ಒಂದರಲ್ಲಿ ಮಗುವನ್ನು ಬಿಟ್ಟು ಸಾಯುವ ನಿರ್ಧಾರ ಮಾಡಿರುತ್ತಾಳೆ. ತಾಯಿ ಬಿಟ್ಟರೂ ಮಗು ತಾಯಿಯನ್ನು ಬಿಡದೇ ಮರಳಿ ಮತ್ತೆ ಮಡಲಿಗೆ ಮಗು ಸೇರಿದೆ. ಇಂತಹದ್ದೊಂದು ಮನ ಕೆರಳಿಸುವ ಕಥೆ ಇಲ್ಲಿದೆ..

ಹತ್ತು ತಿಂಗಳ ಕೂಸನ್ನು ಡಾಬಾದಲ್ಲಿ ಬಿಟ್ಟು ಹೋದ ತಾಯಿ, ಆದರೂ ಮರಳಿ ಅಮ್ಮನ ಮಡಿಲು ಸೇರಿದ ಕಂದ.. ಆಗಿದ್ದೇನು?
10 ತಿಂಗಳ ಮಗವನ್ನು ತಾಯಿ ಡಾಬಾದಲ್ಲಿ ಬಿಟ್ಟು ಹೋಗಿದ್ದರೂ, ಮಗು ಮತ್ತೆ ಮಡಿಲಿಗೆ ಸೇರಿದ ದೃಶ್ಯ
shruti hegde
| Edited By: |

Updated on:Jan 15, 2021 | 12:15 PM

Share

ಹಾವೇರಿ : ಮಕ್ಕಳು ಅಂದ್ರೆ ಹೆತ್ತ ತಾಯಿಗೆ ಪಂಚಪ್ರಾಣ. ಅದರಲ್ಲೂ ಹತ್ತು ತಿಂಗಳ ಹಸುಗೂಸು ಅಂದರಂತೂ ಎಲ್ಲಿಲ್ಲದ ಪ್ರೀತಿ. ಆದರೆ ಹೆತ್ತ ತಾಯಿಯೊಬ್ಬಳು (ರೇಖಾ) ಏನೂ ಅರಿಯದ ಹತ್ತು ತಿಂಗಳ ಹಸುಗೂಸನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದ ಘಟನೆ ಎರಡು ದಿನಗಳ ಹಿಂದೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್​ನಲ್ಲಿ ನಡೆದಿದೆ. ಸ್ಥಳೀಯರು ಮಗುವನ್ನು ಹತ್ತಿರದ ಪೊಲೀಸ್ ಠಾಣೆಗೆ ತಲುಪಿಸಿದ್ದು, ಹೆತ್ತವಳನ್ನು ಹುಡುಕಿ ಮಗುವನ್ನು ಮಡಿಲು ಸೇರಿಸಿದ್ದಾರೆ.

ಪತಿಯಿಂದ ಪತ್ನಿಗೆ(ರೇಖಾ) ಕಿರುಕುಳ:

ರೇಖಾಳ ಗಂಡ ಕುಡಿತದ ಮತ್ತಿನಲ್ಲಿ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ರೇಖಾ ತಾನು ಸಾಯಬೇಕು ಎಂದು ವಿಚಾರ ಮಾಡಿ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಬಂದಿದ್ದಳು. ಆದರೆ ತಾನು ಸತ್ತರೂ ಪರವಾಗಿಲ್ಲ, ಮುಗ್ಧ ಮಗು ಬದುಕ ಬೇಕು. ಮಗುವಿಗೆ ಉತ್ತಮ ಭವಿಷ್ಯ ಸಿಗಬೇಕು ಎಂದು ಮಗುವನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದಾಳೆ.

ದತ್ತು ಕೇಂದ್ರ ಸೇರಿದ್ದ ಮಗು :

ಹೆತ್ತವರು ಅಥವಾ ಪೋಷಕರು ಹತ್ತು ತಿಂಗಳ ಗಂಡು ಮಗುವನ್ನು ಡಾಬಾದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಾನಗಲ್ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಎಸ್ಐ ಶ್ರೀಶೈಲ್ ಪಟ್ಟಣ ಶೆಟ್ಟಿ ಹಾಗೂ ಸಿಡಿಪಿಓ ಸಂತೋಷ ಹಾಗೂ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ತಂಡ ಹೆತ್ತವರ ಮಾಹಿತಿ ಕಲೆ‌ ಹಾಕುವ ಪ್ರಯತ್ನ ಮಾಡಿದ್ದಾರೆ.

ಸುಮಾರು ಗಂಟೆಗಳಿಂದ ಮಗು ಡಾಬಾದಲ್ಲಿಯೇ ಇದ್ದರೂ ಮಗುವಿನ ಹೆತ್ತವರು ಅಥವಾ ಪೋಷಕರು ಮಗುವನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಹೀಗಾಗಿ ಮಗುವನ್ನು ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದತ್ತು ಕೇಂದ್ರಕ್ಕೆ‌ ಕರೆದುಕೊಂಡು ಹೋಗಿ ಇಡಲಾಗಿತ್ತು.

ಮಗುವನ್ನು ಹುಡುಕಿಕೊಂಡು ಬಂದ ತಾಯಿ :

ಪತಿಯ ಕಿರುಕುಳಕ್ಕೆ ಬೇಸತ್ತು ಸಾಯುವ ನಿರ್ಧಾರದಿಂದ ಮನೆ ಬಿಟ್ಟು ಬಂದಿದ್ದ ತಾಯಿ ಹೆತ್ತ ಮಗುವನ್ನು ಡಾಬಾದಲ್ಲಿ ಬಿಟ್ಟು ಹೊರಟು ಹೋಗಿದ್ದಾಳೆ. ನಂತರ ಡಾಬಾಗೆ ಸ್ವಲ್ಪ ದೂರದ ಅಂಗಡಿಯ ಬಳಿ ನಿಂತುಕೊಂಡು ಮಗು ಎಲ್ಲಿ ಹೋಗುತ್ತದೆ ಎಂಬುದನ್ನು ಗಮನಿಸಿದ್ದಾಳೆ. ನಂತರ ರಾತ್ರಿಯಿಡಿ ಹೆತ್ತ ಮಗುವನ್ನು ನೆನೆದು ಪಡಬಾರದ ಯಾತನೆ ಅನುಭಿಸಿದ್ದಾಳೆ.

ಬೆಳಗಾಗುತ್ತಲೇ ತಾಯಿ ರೇಖಾ ಮಗುವನ್ನು ಹುಡುಕಿಕೊಂಡು ಹಾನಗಲ್ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಪೊಲೀಸರು ಮಗುವನ್ನು ಬಿಟ್ಟು ಹೋಗಿದ್ದು ಯಾಕೆ ಎಂಬುದರ ಬಗ್ಗೆ ವಿಚಾರಣೆ ಮಾಡಿದಾಗ ವಿಷಯ ತಿಳಿದು ಬಂದಿದೆ.

ಮರಳಿ ಹೆತ್ತಮ್ಮಳ ಮಡಿಲು ಸೇರಿದ ಮಗು :

ಈ ವಿಷಯವನ್ನು, ಹಾನಗಲ್ ಠಾಣೆಯ ಪೊಲೀಸರು ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಸಂತೋಷ ಹಾಗೂ ಸಿಬ್ಬಂದಿ ತಂಡ ಮಕ್ಕಳ‌ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಗಮನಕ್ಕೆ ತಂದು ಇಲಾಖೆಯ ನಿಯಮಗಳಂತೆ ತಾಯಿಯನ್ನು ವಿಚಾರಣೆ ಮಾಡಿ ಮಗುವನ್ನು ಹೆತ್ತವಳಿಗೆ ಹಸ್ತಾಂತರ ಮಾಡಿದ್ದಾರೆ.

ಮಗುವನ್ನು ಬಿಟ್ಟು ಹೋದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯ ಮೇಲಧಿಕಾರಿಗಳ‌ ಗಮನಕ್ಕೆ ತಂದು ಮಗುವನ್ನು ದತ್ತು ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಪೊಲೀಸರು ಹೆತ್ತವರನ್ನು ಹುಡುಕಾಡುತ್ತಿದ್ದಾಗಲೆ ತಾಯಿ ಮಗುವನ್ನು ಹುಡುಕಿಕೊಂಡು ಬಂದಿದ್ದಳು.

ನಂತರ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಇಲಾಖೆಯ ನಿಯಮಗಳ ಪ್ರಕಾರ ಮಗುವನ್ನು ಹೆತ್ತವಳಿಗೆ ಮರಳಿಸಲಾಗಿದೆ. ಜೊತೆಗೆ ಮಗುವನ್ನು ಮರಳಿ ಕರೆದುಕೊಂಡು ಹೋದ ಮೇಲೆ ಮಗುವನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇಡಲಾಗಿದೆ ಎಂದು ಸಂತೋಷ ಹಾನಗಲ್ ಸಿಡಿಪಿಓ ತಿಳಿಸಿದ್ದಾರೆ.

ಯಾದಗಿರಿ: ನದಿಯಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ 15 ದಿನದ ಹಸುಗೂಸು ರಕ್ಷಣೆ

Published On - 12:15 pm, Fri, 15 January 21

Follow Us
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ತಮ್ಮ ವಿವಾಹದ ಬಳಿಕ ಮತ್ತೊದು ಮದುವೆಗೆ ಹಾಜರಿ ಹಾಕಿದ ವಿಜಯ್-ರಶ್ಮಿಕಾ
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಬೆಂಗಳೂರು ಏರ್​ಪೋರ್ಟ್​ಗೂ ತಟ್ಟಿದ ಯುದ್ಧದ ಬಿಸಿ: 15 ವಿಮಾನಗಳ ಹಾರಾಟ ರದ್ದು
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ