AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಲೇ! ಗಲಭೆ ಮಧ್ಯೆಯೂ ಹನುಮನ ರಕ್ಷಿಸಲು ಮಾನವ ಸರಪಳಿ ನಿರ್ಮಿಸಿದರು!

ಬೆಂಗಳೂರು: ಇಡೀ ಡಿಜೆ ಹಳ್ಳಿ ನಿನ್ನೆ ರಾತ್ರಿ ನಡೆದ ಗಲಭೆಯ ಸುಳಿಯಲ್ಲಿದ್ದಾಗ ಅದೇ ಏರಿಯಾದಲ್ಲಿ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿಯೊಂದು ಬೆಳಕಿಗೆ ಬಂದಿದೆ. ದುಷ್ಕೃತ್ಯ ತಡೆದಿದ್ದು ಬರೋಬ್ಬರಿ 100 ಮುಸ್ಲಿಂ ಯುವಕರ ಮಾನವ ಸರಪಳಿ ಹೌದು, ಡಿಜೆ ಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಗಲಭೆಕೋರರು ಬಳಿಕ ಬಡಾವಣೆಯ ಶಾಂಪುರ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇವಸ್ಥಾನದತ್ತ ಹೆಜ್ಜೆಹಾಕಿದ್ದರು. ಕಿಡಿಗೇಡಿಗಳ ಮನಸ್ಸಲ್ಲಿ ಏನಿತ್ತು ಅನ್ನೋದು ಇಷ್ಟೊತ್ತಿಗೆ ನೀವೆಲ್ಲರೂ ಊಹಿಸಿರಬಹುದು. ಆದರೆ, ಪವಾಡ ಸದೃಶವೆಂಬಂತೆ ದುಷ್ಕರ್ಮಿಗಳು ತಮ್ಮ ಯೋಜನೆಯಲ್ಲಿ ಸಫಲವಾಗಲಿಲ್ಲ. […]

ಭಲೇ! ಗಲಭೆ ಮಧ್ಯೆಯೂ ಹನುಮನ ರಕ್ಷಿಸಲು ಮಾನವ ಸರಪಳಿ ನಿರ್ಮಿಸಿದರು!
KUSHAL V
| Updated By: ಸಾಧು ಶ್ರೀನಾಥ್​|

Updated on:Aug 12, 2020 | 6:50 PM

Share

ಬೆಂಗಳೂರು: ಇಡೀ ಡಿಜೆ ಹಳ್ಳಿ ನಿನ್ನೆ ರಾತ್ರಿ ನಡೆದ ಗಲಭೆಯ ಸುಳಿಯಲ್ಲಿದ್ದಾಗ ಅದೇ ಏರಿಯಾದಲ್ಲಿ ಒಂದು ಮೆಚ್ಚುಗೆಗೆ ಪಾತ್ರವಾಗುವ ಸಂಗತಿಯೊಂದು ಬೆಳಕಿಗೆ ಬಂದಿದೆ.

ದುಷ್ಕೃತ್ಯ ತಡೆದಿದ್ದು ಬರೋಬ್ಬರಿ 100 ಮುಸ್ಲಿಂ ಯುವಕರ ಮಾನವ ಸರಪಳಿ ಹೌದು, ಡಿಜೆ ಹಳ್ಳಿ ಠಾಣೆಯ ಮೇಲೆ ದಾಳಿ ನಡೆಸಿದ ಗಲಭೆಕೋರರು ಬಳಿಕ ಬಡಾವಣೆಯ ಶಾಂಪುರ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇವಸ್ಥಾನದತ್ತ ಹೆಜ್ಜೆಹಾಕಿದ್ದರು. ಕಿಡಿಗೇಡಿಗಳ ಮನಸ್ಸಲ್ಲಿ ಏನಿತ್ತು ಅನ್ನೋದು ಇಷ್ಟೊತ್ತಿಗೆ ನೀವೆಲ್ಲರೂ ಊಹಿಸಿರಬಹುದು. ಆದರೆ, ಪವಾಡ ಸದೃಶವೆಂಬಂತೆ ದುಷ್ಕರ್ಮಿಗಳು ತಮ್ಮ ಯೋಜನೆಯಲ್ಲಿ ಸಫಲವಾಗಲಿಲ್ಲ. ಅವರ ದುಷ್ಕೃತ್ಯಕ್ಕೆ ಅಡ್ಡವಾಗಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 100 ಮುಸ್ಲಿಂ ಯುವಕರು.

ಇಡೀ ರಾತ್ರಿ.. ಹನುಮನ ರಕ್ಷಣೆಗೆ ಅಕ್ಷರಶಃ ನಿಂತುಬಿಟ್ಟರು ಗಲಭೆಕೋರರ ಉದ್ದೇಶವನ್ನ ಅರಿತ ಈ ಯುವಕರು ಕೂಡಲೇ ದೇವಸ್ಥಾನದತ್ತ ತೆರಳಿ ಪುಂಡರನ್ನು ಅಲ್ಲಿಂದ ಓಡಿಸಿದ್ದಾರೆ. ಅಷ್ಟೇ ಅಲ್ಲದೆ, ಇಡೀ ರಾತ್ರಿ ದೇಗುಲದ ಮುಂದೆ ಮಾನವ ಸರಪಳಿ ರಚಿಸಿ ಹನುಮನ ರಕ್ಷಣೆಗೆ ನಿಂತರು. ಆಂಜನೇಯನ ರಕ್ಷಣೆಗೆ ನಿಂತ ಯುವಕರ ಕಾರ್ಯದ ವಿಡಿಯೋ ಇದೀಗ ಬೆಳಕಿಗೆ ಬಂದು ಸಖತ್ ವೈರಲ್​ ಆಗಿದೆ. ಒಟ್ನಲ್ಲಿ, ಪ್ರಸಿದ್ಧ ಕವಿ ಮಹಮ್ಮದ್​ ಇಕ್ಬಾಲ್​ರ ಸಾರೆ ಜಹಾಂಸೆ ಅಚ್ಛಾ ಕವನದ ಸಾಲಿನಂತೆ ‘‘ಬೋಧಿಸುವುದಿಲ್ಲ ಧರ್ಮ ಮಾನವರ ನಡುವೆ ದ್ವೇಷ. ಭಾರತೀಯ ಸುತರು ನಾವು, ಭಾರತವು ನಮ್ಮ ದೇಶ’’ ಎಂದು ಈ ಯುವಕರು ತಮ್ಮ ನಡೆ-ನುಡಿಯ ಮುಖಾಂತರ ತೋರಿಸಿಕೊಟ್ಟಿದ್ದಾರೆ.

Published On - 6:34 pm, Wed, 12 August 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ