AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ಮೀರಿ ಆಸ್ತಿ ಗಳಿಕೆ, ಕೋಟ್ಯಂತರ ರೂ. ಬೆಲೆಬಾಳುವ ಭವ್ಯ ಬಂಗಲೆ: ಇನ್ಸ್​ಪೆಕ್ಟರ್ ವಿಕ್ಟರ್ ಸೈಮನ್ ಲೆಕ್ಕದ ಪುಸ್ತಕ ಎಸಿಬಿಗೆ ಲಭ್ಯ

ವಿದೇಶದಿಂದ ಲೈಟ್ಸ್, ಫರ್ನಿಚರ್ಸ್, ದುಬಾರಿ ಒಳಾಂಗಣ ವಿನ್ಯಾಸ ಪರಿಕರಗಳನ್ನ ತರಿಸಿ ಅಳವಡಿಕೆ ಮಾಡಿರುವುದು ಕೂಡಾ ತಿಳಿದುಬಂದಿದ್ದು, ಮೈಸೂರಿನಲ್ಲಿ 60x80 ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಐಶಾರಾಮಿ ಭವ್ಯ ಬಂಗಲೆ‌ ನಿರ್ಮಾಣ ಮಾಡುತ್ತಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ, ಕೋಟ್ಯಂತರ ರೂ. ಬೆಲೆಬಾಳುವ ಭವ್ಯ ಬಂಗಲೆ: ಇನ್ಸ್​ಪೆಕ್ಟರ್ ವಿಕ್ಟರ್ ಸೈಮನ್ ಲೆಕ್ಕದ ಪುಸ್ತಕ ಎಸಿಬಿಗೆ ಲಭ್ಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Aug 14, 2021 | 10:19 AM

ಬೆಂಗಳೂರು: ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ಎಸಿಬಿ ತನಿಖೆ ವೇಳೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭವ್ಯ ಬಂಗೆಲೆಯ ಪಕ್ಕಾ ಲೆಕ್ಕ ಬಯಲಾಗಿದೆ. ಇನ್ಸ್​ಪೆಕ್ಟರ್ ವಿಕ್ಟರ್ ಸೈಮನ್ ಎಂಬುವವರು ಬರೋಬ್ಬರಿ 5 ಕೋಟಿ ರೂಪಾಯಿಗೂ ಅಧಿಕ ಹಣದಲ್ಲಿ ನಿರ್ಮಿಸಿದ ಬಂಗಲೆ ಲೆಕ್ಕದ ಪುಸ್ತಕ ಎಸಿಬಿಗೆ ಲಭ್ಯವಾಗಿದೆ. ಮೈಸೂರಿನಲ್ಲಿ ಸೋದರ‌ಮಾವನ ಉಸ್ತುವಾರಿಯಲ್ಲಿ ನಿರ್ಮಿಸುತ್ತಿದ್ದ ಐಶಾರಾಮಿ ಬಂಗಲೆಯ ಫೋಟೋ ಕೂಡಾ ಹೊರಬಿದ್ದಿದ್ದು, ಪೊಲೀಸ್​ ಅಧಿಕಾರಿಯೊಬ್ಬರು ಆದಾಯ ಮೀರಿ ಈ ಪರಿ ಆಸ್ತಿ ಗಳಿಸಿರುವುದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ.

ಇನ್ಸ್​ಪೆಕ್ಟರ್ ವಿಕ್ಟರ್ ಸೈಮನ್ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಬಲವಾಗಿ ಕೇಳಿಬಂದಿದ್ದು, ಟಿವಿ9ಗೆ ಭವ್ಯ ಅರಮನೆ ನಿರ್ಮಾಣದ ಲೆಕ್ಕದ ರಹಸ್ಯ ಸಿಕ್ಕಿದೆ. ವಿದೇಶದಿಂದ ಲೈಟ್ಸ್, ಫರ್ನಿಚರ್ಸ್, ದುಬಾರಿ ಒಳಾಂಗಣ ವಿನ್ಯಾಸ ಪರಿಕರಗಳನ್ನ ತರಿಸಿ ಅಳವಡಿಕೆ ಮಾಡಿರುವುದು ಕೂಡಾ ತಿಳಿದುಬಂದಿದ್ದು, ಮೈಸೂರಿನಲ್ಲಿ 60×80 ಅಳತೆಯ ನಿವೇಶನದಲ್ಲಿ ಮೂರು ಅಂತಸ್ತಿನ ಐಶಾರಾಮಿ ಭವ್ಯ ಬಂಗಲೆ‌ ನಿರ್ಮಾಣ ಮಾಡುತ್ತಿದ್ದಾರೆ. ವಿಕ್ಟರ್ ಸೈಮನ್ ಬೆಳ್ಳಂದೂರು ಇನ್ಸ್​ಪೆಕ್ಟರ್ ಆಗಿದ್ದ ವೇಳೆ ಖಾಸಗಿ ಕಂಪೆನಿ ಫೈನಾನ್ಸ್ ವಿಚಾರದಲ್ಲಿ ತಲೆ ಹಾಕಿದ್ದರು ಎನ್ನಲಾಗಿದ್ದು, ಆ ವೇಳೆ 1.25 ಕೋಟಿ ರೂಪಾಯಿ ಲಂಚ ಪಡೆದು ಪಕ್ಷಪಾತದಿಂದ ಅನುಕೂಲ ಮಾಡಿಕೊಟ್ಟ ಆರೋಪ ಕೇಳಿಬಂದಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಅವರ ಭವ್ಯ ಬಂಗಲೆ ಕಣ್ಣಿಗೆ ಬಿದ್ದಿದೆ.

ಮೈಸೂರಿನ ಎಚ್‌.ಡಿ‌ ಕೋಟೆಯಲ್ಲಿ ವಿಕ್ಟರ್ ಸೈಮನ್ ಗೆ ಸೇರಿದ 3 ಎಕರೆ ಜಮೀನು ಕೂಡಾ ಇದ್ದು, ಇದೀಗ ನಿರ್ಮಿಸುತ್ತಿರುವ ಮನೆ ಅರಮನೆಯಂತಿದೆ. ದುಬಾರಿ ಬೆಲೆಯ ವಿದೇಶಿ ಆಮದು ಪರಿಕರಗಳಿಂದ ಬಂಗಲೆ ಒಳ ವಿನ್ಯಾಸ ಮಾಡಲಾಗಿದ್ದು ಅದರ ಜಗಮಗಿಸುವ ವಿದೇಶಿ ಲೈಟಿಂಗ್ಸ್, ಸ್ವಿಮ್ಮಿಂಗ್ ಪೂಲ್, ಡೈನಿಂಗ್ ಹಾಲ್, ಡ್ರಾಯಿಂಗ್ ರೂಮ್, ಲಿವಿಂಗ್ ಹಾಲ್ ಪೋಟೊಗಳು ಲಭ್ಯವಾಗಿದೆ.

2003 ರಲ್ಲಿ ಪಿಎಸ್ ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದ ವಿಕ್ಟರ್ ಸೈಮನ್, ಕಳೆದ 18 ವರ್ಷಗಳ ಸೇವಾವಧಿಯಲ್ಲಿ ಕೋಟಿ ಕೋಟಿ ಆದಾಯ ಗಳಿಸಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಸದ್ಯ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಎಸಿಬಿ ಸುಮೋಟೊ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ. ಎಸಿಬಿ ಬಂಧನ ವೇಳೆ ಬಿಎಂಟಿಎಫ್ ಇನ್ಸ್​ಪೆಕ್ಟರ್ ಆಗಿದ್ದ ವಿಕ್ಟರ್ ಸೈಮನ್, ಇನ್ಸ್ ಪೆಕ್ಟರ್ ಆಗಿ ಪ್ರಮೋಷನ್ ಪಡೆದು ಬೆಂಗಳೂರಿನ ವಿವಿಧ ಠಾಣೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಎಸಿಬಿ ದಾಳಿ ವೇಳೆ ಒಂದಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಮೈಸೂರಿನ ಐಶಾರಾಮಿ ಬಂಗಲೆ ಲೆಕ್ಕದ ಪುಸ್ತಕವೇ ವಿಕ್ಟರ್ ಸೈಮನ್​ಗೆ ಕುತ್ತಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

(ACB investigation on Police Inspector Victor Simon Bungalow in Mysuru)

ಇದನ್ನೂ ಓದಿ: ಲಂಚ ಪಡೆದ ಸರ್ಕಾರಿ ವೈದ್ಯೆ, ನರ್ಸ್​ಗೆ ಜೈಲು ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ; ಹಸು ಮಾರಿ ಹಣ ನೀಡಿದ ಮಹಿಳೆಗೆ ನ್ಯಾಯ 

IT Raid: ಶಾಸಕ ಜಮೀರ್ ಅಹಮ್ಮದ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ

ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್