AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ವಿನೋದ್‌ರಾಜ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಅಣ್ಣ ವಿನೋದ್‌ರಾಜ್ನ ಸಾವಿನ ವೇಳೆ ಅಣ್ಣನ ಪತ್ನಿ ಮಾಹಿತಿ ತಿಳಿಸಿರಲಿಲ್ಲ. ಅನಾರೋಗ್ಯದಿಂದ ವಿನೋದ್ ಮೃತಪಟ್ಟಿದ್ದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು.

ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ
ಮೈಸೂರು: ಮಗನ ಸಾವಿನ ಹಿಂದೆ ಸೊಸೆ ಕೈವಾಡವಿರುವ ಶಂಕೆ, ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ
TV9 Web
| Edited By: |

Updated on:Mar 13, 2022 | 2:24 PM

Share

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸಿನಿಮೀಯ ಘಟನೆಗೆ ಸಾಕ್ಷಿಯಾಗಿದೆ. 20 ದಿನದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದ‌ ಶಿಕ್ಷಕನ ಸಾವಿನ ಸುತ್ತ ಅನುಮಾನಗಳ ಹುತ್ತ ಮೂಡಿದೆ. ಈಗಾಗಿ ಹೂತಿದ್ದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಏನಿದು ಘಟನೆ? ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಯಡತೊರೆ ಗ್ರಾಮದಲ್ಲಿ. ಗ್ರಾಮದ ವಿನೋದ್ ರಾಜ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಕೇವಲ 32 ವರ್ಷದ ವಿನೋದ್ ಸಾವನ್ನಪ್ಪಿದ್ದು ಕುಟುಂಬದವರಿಗೆ ಸಾಕಷ್ಟು ದುಖಃ ತಂದಿತ್ತು. ವಿನೋದ್ ರಾಜ್ ಟಿ ನರಸೀಪುರ ತಾಲ್ಲೂಕಿನ ಆದಿಬೆಟ್ಟಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾವಾಯ್ತು ತಮ್ಮ ಪಾಡಾಯ್ತು ಅಂತಿದ್ದ ವಿನೋದ್ ಸಾಕಷ್ಟು ಲವಲವಿಕೆಯಿಂದಲೇ ಇದ್ದರು. ವಿನೋದ್‌ಗೆ ಮದುವೆಯಾಗಿದ್ದು ಒಂದು ಮಗು ಸಹಾ ಇತ್ತು. ಜೀವನ ಸಹಾ ಸುಗಮವಾಗಿಯೇ ಇತ್ತು. ಈ ಮಧ್ಯೆ ವಿನೋದ್ ಅಕಾಲಿಕ ಮರಣ ಹೊಂದಿದ್ದರು. ವಿನೋದ್ ರಾಜ್ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ಫೆಬ್ರವರಿ 21ರಂದು ಮೂಗೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ರಾಜ್ ಸಾವನ್ನಪ್ಪಿದ್ದರು. ಪತ್ನಿ ಮಹೇಶ್ವರಿ ಅವರೇ ಖುದ್ದಾಗಿ 108 ಆ್ಯಂಬುಲೆನ್ಸ್‌ ಮೂಲಕ ಮೃತದೇಹ ತಂದು ಅಂತ್ಯಕ್ರಿಯೆ ಸಹಾ ನೆರವೇರಿಸಿದ್ದರು. ಚೆನ್ನಾಗಿಯೇ ಇದ್ದ ವಿನೋದ್ ರಾಜ್ ಸಾವು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಸಹಜ ಸಾವಲ್ಲ -ಕೊಲೆ 20 ದಿನಗಳ‌ ನಂತರ ವಿನೋದ್ ರಾಜ್ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿನೋದ್ ರಾಜ್ ಸಾವು ಸ್ವಾಭವಿಕ ಸಾವಲ್ಲ. ಇದೊಂದು ಕೊಲೆ ಎಂದು ವಿನೋದ್ ರಾಜ್ ಕುಟುಂಬದವರು ಅನುಮಾನ ವ್ತಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಟಿ ನರಸೀಪುರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಶೇಷ ಅಂದರೆ ವಿನೋದ್ ರಾಜ್ ಅವರನ್ನು ಆತನ ಪತ್ನಿ ಮಹೇಶ್ವರಿ ಕೊಲೆ ಮಾಡಿದ್ದಾರೆ ಅನ್ನೋದು ವಿನೋದ್ ರಾಜ್ ಕುಟುಂಬಸ್ಥರ ಆರೋಪ. ಪ್ರಕರಣ ದಾಖಲಿಸಿಕೊಂಡ ಟಿ ನರಸೀಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟಿ ನರಸೀಪುರ ತಹಶೀಲ್ದಾರ್ ಗಿರಿಜಾ ಅವರ ಸಮ್ಮುಖದಲ್ಲಿ ಹೂತಿದ್ದ ವಿನೋದ್ ರಾಜ್ ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸರು ಮುಂದಿನ ತನಿಖೆ ನಡೆಸಲಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಸ್ವಾಭಾವಿಕ ಸಾವ ಅಥವಾ ಕೊಲೆಯೋ ಅನ್ನೋದು ಗೊತ್ತಾಗಲಿದೆ ಅನ್ನೋದು ಪೊಲೀಸರ ವಿಶ್ವಾಸ‌.

ಮರಣೋತ್ತರ ಪರೀಕ್ಷೆಗೆ ದೇಹ ಹೊರ ತೆಗೆದ ಪೊಲೀಸರು – ತಾಯಿಯ ಗೋಳಾಟ ಇನ್ನು ವಿನೋದ್ ರಾಜ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆದ ವೇಳೆ ವಿನೋದ್ ಅವರ ತಾಯಿ ರಾಜಮ್ಮ ಅವರ ದುಖಃ ಉಮ್ಮಳಿಸಿ ಬಂದಿತ್ತು. ಮಗನ ಮೃತದೇಹ ಮೇಲೆ ಬಿದ್ದು ಗೋಳಾಡಿದರು. ಅಮ್ಮನ ದುಖಃ ಕಂಡು ನೆರೆದಿದ್ದವು ಕಣ್ಣುಗಳಲ್ಲಿ ನೀರು ತುಂಬಿತು. ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಅಂತಾ ರಾಜಮ್ಮ ಅಲವತ್ತುಕೊಂಡರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.

ಅಣ್ಣನ ಸಾವಿನ ಬಗ್ಗೆ ನಮಗೆ ದುಖಃ ಅನುಮಾನ ಎರಡು ಇದೆ. ನಮ್ಮ ಅತ್ತಿಗೆ ನಮಗೆ ಅಣ್ಣನ ಸಾವಿನ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ವಿನೋದ್ ರಾಜ್ ಅನಾರೋಗ್ಯದ ಬಗ್ಗೆಯೂ ನಮಗೆ ಏನು ಗೊತ್ತಿಲ್ಲ. ಆತ ಚೆನ್ನಾಗಿಯೇ ಇದ್ದ. ಇನ್ನು ನಮ್ಮ ಅಣ್ಣನ ಮಗ ಸಹಾ ಅಪ್ಪನ ಸಾವಿನ ನಂತರ ವಿಚಿತ್ರವಾಗಿ ಮಾತನಾಡುತ್ತಿದ್ದಾನೆ. ಇದೆಲ್ಲಾ ನೋಡಿದರೆ ನಮಗೆ ನಮ್ಮ ಅತ್ತಿಗೆ ಹಾಗೂ ಅವರ ಮನೆಯವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಮೃತ ವಿನೋದ್ ಸಹೋದರ ರಘು ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಟಿ ನರಸೀಪುರ ಇನ್ಸಪೆಕ್ಟರ್ ಕೃಷ್ಣಪ್ಪ ನೇತೃತ್ವದಲ್ಲಿ ವಿನೋದ್ ರಾಜ್ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲರೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವೇ ಇದು ಸಹಜ ಸಾವೋ ಅಥವಾ ಕೊಲೆಯೋ ಅನ್ನೋದು ಗೊತ್ತಾಗಲಿದೆ.

ವರದಿ: ರಾಮ್ ಟಿವಿ9 ಮೈಸೂರು

ಇದನ್ನೂ ಓದಿ: ಕೇಸರಿ ಟೋಪಿ, ಸಾಬ್ರ ಟೋಪಿ ಎರಡೂ ಹಾಕಿಕೊಳ್ಳಿ; ಈ ರೀತಿ ಹೇಳೋದೇ ಹಿಂದುತ್ವ: ಸಿಟಿ ರವಿ ಹೇಳಿಕೆ

ಒಂದು ಲಿಂಕ್​ ತೆಗೆದರೆ, 10 ಲಿಂಕ್​ ಅಪ್​ಲೋಡ್​ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್​ ಲವ್​ ಯಾ’ ಟೀಂ ಮಾತು

Published On - 2:48 pm, Fri, 11 March 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ