AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮನ್ಸ್​ ಜಾರಿಗೊಳಿಸುವ ಅಧಿಕಾರ ಅಂಚೆ ಅಥವಾ ಖಾಸಗಿಯವರಿಗೆ ನೀಡಲು ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಹಿರಿಯ ಅಧಿಕಾರಿಗಳು ಕೂಡ ರಾತ್ರಿ ಗಸ್ತು ಮಾಡಬೇಕು. ಬೆಳಗ್ಗೆ ಬೇಕಾದರೆ ಎರಡು ಗಂಟೆ ವಿಶ್ರಾಂತಿ ಪಡೆಯಿರಿ. ಇಲ್ಲವಾದರೆ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಮನ್ಸ್​ ಜಾರಿಗೊಳಿಸುವ ಅಧಿಕಾರ ಅಂಚೆ ಅಥವಾ ಖಾಸಗಿಯವರಿಗೆ ನೀಡಲು ಚಿಂತನೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
TV9 Web
| Updated By: guruganesh bhat|

Updated on: Sep 28, 2021 | 4:59 PM

Share

ಮೈಸೂರು: ಸಮನ್ಸ್ ಜಾರಿಯ ನಿಯಮವನ್ನು ಬದಲಾವಣೆಗೆ ಮಾಡಲು ಚಿಂತನೆ ನಡೆಸಲಾಗಿದ್ದು, ಖಾಸಗಿಯವರಿಗೆ ಅಥವಾ ಅಂಚೆ ಕಚೇರಿಗೆ ನೀಡಲು ಸಮನ್ಸ್ ನೀಡುವ ಅಧಿಕಾರ ನೀಡಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರಿನಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುರಕ್ಷತೆಯ ಕುರಿತು ಸಹ ಮಾತನಾಡಿದ ಅವರು, ಮೈಸೂರಿನಲ್ಲಿ ಹೆಚ್ಚಾಗಿ ಗಸ್ತು ತಿರುಗುವ ಕೆಲಸ ಆಗಬೇಕು. ಹಿರಿಯ ಅಧಿಕಾರಿಗಳು ಕೂಡ ರಾತ್ರಿ ಗಸ್ತು ಮಾಡಬೇಕು. ಬೆಳಗ್ಗೆ ಬೇಕಾದರೆ ಎರಡು ಗಂಟೆ ವಿಶ್ರಾಂತಿ ಪಡೆಯಿರಿ. ಇಲ್ಲವಾದರೆ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾದಕ ವಸ್ತುಗಳ ಜಾಲ ಮೈಸೂರು ನಗರದಲ್ಲಿಯೂ ಇದೆ. ಮೈಸೂರು ನಗರದಲ್ಲಿ 104 ಜನರನ್ನು ಬಂಧಿಸಲಾಗಿದೆ. ಮೂರು ವರ್ಷಗಳಲ್ಲಿ 61 ಪ್ರಕರಣಗಳು ದಾಖಲಾಗಿದೆ. ಮೈಸೂರು ನಗರದಲ್ಲಿ ಹುಕ್ಕಾ ಬಾರ್‌ಗಳು ಹೆಚ್ಚಾಗಿವೆ. FIR ಮಾಡಿ ಚಾರ್ಜ್‌ಶೀಟ್ ಹಾಕಿದರೆ ಆಗುವುದಿಲ್ಲ. ಶಿಕ್ಷೆಯ ಪ್ರಮಾಣ ಶೇಕಡಾವಾರು ಕಡಿಮೆಯಿದೆ. ಇದನ್ನು ಹೆಚ್ಚು ಮಾಡುವ ಕಡೆ ಗಮನ ಕೊಡಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: 

ಲ್ಯಾಂಡ್​ಸ್ಯಾಟ್​ 9 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಾಸಾ; ಏನಿದರ ವಿಶೇಷತೆ?

ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್​ ಬಿಡುಗಡೆ: ದೆಹಲಿಯನ್ನು ಅನುಭವಿಸಿ

(Home Minister Araga Jnanendra says will have a chance to give the power of police summons to postal or private)