Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್​ ಬಿಡುಗಡೆ: ದೆಹಲಿಯನ್ನು ಅನುಭವಿಸಿ

ಈ ಆ್ಯಪ್​ನಲ್ಲಿ ದೆಹಲಿಯ ಎಲ್ಲ ಪ್ರವಾಸಿ ತಾಣಗಳ ಸಂಕ್ಷಿಪ್ತ ಇತಿಹಾಸ, ಜನಪ್ರಿಯ ಸ್ಥಳೀಯ ಭಕ್ಷ್ಯಗಳು, ಮಾರುಕಟ್ಟೆ ಸ್ಥಳಗಳು ಹಾಗೂ ಪಾರಂಪರಿಕ ನಡಿಗೆ ಬಗ್ಗೆ ಮಾಹಿತಿ ಇದೆ.

ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್​ ಬಿಡುಗಡೆ: ದೆಹಲಿಯನ್ನು ಅನುಭವಿಸಿ
ಅರವಿಂದ್ ಕೇಜ್ರಿವಾಲ್​
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 27, 2021 | 6:37 PM

ದೆಹಲಿ: ವಿಶ್ವ ಪ್ರವಾಸೋದ್ಯಮ ದಿನದ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಿಧ ಪ್ರವಾಸಿ ತಾಣಗಳ ಮಾಹಿತಿ ನೀಡುವ ‘ದೇಖೋ ಹಮಾರಿ ಡೆಲ್ಲಿ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು. ಪ್ರತಿ ತಾಣಗಳ ಬಗ್ಗೆ ಸಂಕ್ಷಿಪ್ತ ಇತಿಹಾಸ, ಜನಪ್ರಿಯ ಸ್ಥಳೀಯ ಭಕ್ಷ್ಯಗಳು, ಮಾರುಕಟ್ಟೆ ಸ್ಥಳಗಳು ಹಾಗೂ ಪಾರಂಪರಿಕ ನಡಿಗೆ ಬಗ್ಗೆ ಮಾಹಿತಿ ಹೊಂದಿರುತ್ತದೆ. ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಅತ್ಯುತ್ತಮ ಅನುಭವ ನೀಡುತ್ತದೆ ಎಂದು ಮುಖ್ಯಮಂತ್ರಿ ಸೋಮವಾರ ಹೇಳಿದರು.

ದೆಹಲಿ ಒಂದು ಐತಿಹಾಸಿಕ ಹಾಗೆಯೇ ಅತ್ಯಾಧುನಿಕ ನಗರ. ಅತ್ಯುತ್ತಮ ಆಹಾರ, ಮಾರುಕಟ್ಟೆಗಳಿಂದ ಹಿಡಿದು ಸ್ಮಾರಕಗಳವರೆಗೆ ಎಲ್ಲವೂ ಇಲ್ಲಿದೆ. ಒಂದೇ ವಿಚಾರದಲ್ಲಿ ದೆಹಲಿ ಹಿಂದುಳಿದಿತ್ತು. ಅದೆಂದರೆ ಮಾಹಿತಿ ಎಂದು ಕೇಜ್ರಿವಾಲ್ ನುಡಿದರು. ಈ ಕೊರತೆಯನ್ನು ಹೊಸ ಮೊಬೈಲ್ ಆ್ಯಪ್ ನಿವಾರಿಸಿದೆ. ನೀವು ಇರುವ ಸ್ಥಳದಿಂದ 5 ಕಿಮೀ ವ್ಯಾಪ್ತಿಯಲ್ಲಿರುವ ಮನರಂಜನಾ ಪಾರ್ಕ್​ಗಳು, ಸ್ಮಾರಕಗಳು, ಜನಪ್ರಿಯ ಮಾರುಕಟ್ಟೆಗಳು ಮತ್ತು ಸಾರ್ವಜನಿಕ ಸ್ಥಳಗಳ ಮಾಹಿತಿಯನ್ನು ಆ್ಯಪ್ ನೀಡಲಿದೆ.

ಕೇವಲ ಪ್ರವಾಸಿಗರು ಮಾತ್ರವೇ ಅಲ್ಲ, ಈ ಆ್ಯಪ್ ದೆಹಲಿ ನಿವಾಸಿಗಳಿಗೂ ಉಪಯುಕ್ತ. ವಿಶ್ವದ ಕೆಲವೇ ನಗರಗಳಲ್ಲಿ ಇಂಥ ಆ್ಯಪ್ ಲಭ್ಯವಿದೆ ಎಂದು ಕೇಜ್ರಿವಾಲ್ ದೆಹಲಿ ಸಚಿವಾಲಯದ ಸಭಾಂಗಣದಲ್ಲಿ ಹೇಳಿದರು. ದೆಹಲಿ ನಿವಾಸಿಗಳು ಸಹ ತಮಗೆ ಈವರೆಗೆ ತಿಳಿದಿರದ ಸ್ಥಳಗಳ ಬಗ್ಗೆ ಆ್ಯಪ್​ನಿಂದ ಮಾಹಿತಿ ಪಡೆದುಕೊಳ್ಳಬಹುದು. ಸ್ಮಾರಕಗಳು ಮತ್ತು ಹೊಟೆಲ್​ಗಳಿಗೆ ಭೇಟಿ ನೀಡಬಹುದು ಎಂದು ತಿಳಿಸಿದರು.

ದೆಹಲಿ ಪ್ರವಾಸೋದ್ಯಮ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಮಾತನಾಡಿ, ‘ದೆಹಲಿಗೆ ಬರಲು ಇದೊಂದು ಆಮಂತ್ರಣ ಪತ್ರಿಕೆಯಿದ್ದಂತೆ. ಇಲ್ಲಿಗೆ ಬಂದವರಿಗೆ ದೆಹಲಿಯನ್ನು ಅನುಭವಿಸಲು ಈ ಆ್ಯಪ್ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು. ನಮ್ಮ ಸರ್ಕಾರವು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ದೆಹಲಿಗೆ ಆಹ್ವಾನಿಸುತ್ತಿದೆ. ಇದೊಂದೇ ಆ್ಯಪ್ ಮೂಲಕ ಪ್ರವಾಸಿಗರು ದೆಹಲಿಯಲ್ಲಿ ಏನಿದೆ? ಏನಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದು ಎಂದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ 2019ರಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡಿದದ ವಿಶ್ವದ 4ನೇ ನಗರ ದೆಹಲಿ ಎನಿಸಿತ್ತು. ವಿಶ್ವ ಪ್ರವಾಸೋದ್ಯಮ ಉದ್ಯಮದಲ್ಲಿ ದೆಹಲಿಯನ್ನು ಗಟ್ಟಿಯಾಗಿ ಬ್ರಾಂಡ್ ಮಾಡಲೆಂದು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. You don’t just visit Delhi, You Experience It (ನೀವು ದೆಹಲಿಗೆ ಕೇವಲ ಭೇಟಿ ನೀಡುವುದಿಲ್ಲ, ಅದನ್ನು ಅನುಭವಿಸುತ್ತೀರಿ) ಎನ್ನುವುದು ಈ ಆ್ಯಪ್​ಗೆ ನೀಡಿರುವ ಘೋಷವಾಕ್ಯವಾಗಿದೆ.

(Delhi Chief Minister Arvind Kejriwal Launches new App That Provides Information About Delhi Tourist Spots)

ಇದನ್ನೂ ಓದಿ: ಗೋವಾದ ಪ್ರತಿ ಮನೆಯ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ; ಅರವಿಂದ್ ಕೇಜ್ರಿವಾಲ್ ಭರವಸೆ

ಇದನ್ನೂ ಓದಿ: ಉತ್ತರಾಖಂಡ್​​ ಜನರಿಗೆ ಭರ್ಜರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್​; 6 ತಿಂಗಳಲ್ಲಿ ಲಕ್ಷ ಉದ್ಯೋಗ ಸೃಷ್ಟಿ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!