AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನ ಆ ಸುಂದರಿ ಮೊದಲು ಸ್ಪಾ ಪಾರ್ಲರ್​ ತೆಗೆದಳು, ಅದರಿಂದ ಏನೂ ಗಿಟ್ಟಲ್ಲ ಅಂತಾ ವೇಶ್ಯಾವಾಟಿಕೆ ನಡೆಸಿದಳು!

ಸವಿತ ಸಾಮಾಜಿಕ ಜಾಲತಾಣದ ಮೂಲಕ ಶ್ರೀಮಂತರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ನಂಬರ್ ಪಡೆದು ಚಾಟ್ ಆರಂಭಿಸುತ್ತಿದ್ದಳು. ಸ್ನೇಹ ಸಲುಗೆ ನಂತರ ಆಕೆ ತನ್ನ ಅಸಲಿ ಕರಾಮತ್ತು ಆರಂಭಿಸುತ್ತಿದ್ದಳು.

ಮೈಸೂರಿನ ಆ ಸುಂದರಿ ಮೊದಲು ಸ್ಪಾ ಪಾರ್ಲರ್​ ತೆಗೆದಳು, ಅದರಿಂದ ಏನೂ ಗಿಟ್ಟಲ್ಲ ಅಂತಾ ವೇಶ್ಯಾವಾಟಿಕೆ ನಡೆಸಿದಳು!
ಮೈಸೂರಿನ ಈ ಸುಂದರಿ ಮೊದಲು ಸ್ಪಾ ಪಾರ್ಲರ್​ ತೆಗೆದಳು, ಅದರಿಂದ ಏನೂ ಗಿಟ್ಟಲ್ಲ ಅಂತಾ ವೇಶ್ಯಾವಾಟಿಕೆ ನಡೆಸಿದಳು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 19, 2022 | 12:38 PM

ಉದರ ನಿಮಿತ್ತಂ ಬಹುಕೃತ ವೇಷಂ ಅನ್ನೋ ಮಾತನ್ನು ನೀವೆಲ್ಲಾ‌ ಕೇಳಿರ್ತೀರಾ! ಆದ್ರೆ ಮೈಸೂರಿನ (Mysore) ಮಹಿಳೆಯೊಬ್ಬಳು (woman) ಬ್ಲಾಕ್ ಮೇಲ್‌ಗಾಗಿ ಬಹುಕೃತ ವೇಷ ಹಾಕುತ್ತಿದ್ದಳು. ಇವಳು ತನ್ನ ವೇಷಕ್ಕೆ ಮರುಳಾದವರಿಂದ ಲಕ್ಷ ಲಕ್ಷ ಕೀಳುತ್ತಿದ್ದಳು. ಇದೀಗ ಖಾಕಿ ಬಲೆಗೆ ಬಿದ್ದಿದ್ದಾಳೆ. ಈಕೆಯ ಅಂದ ಚೆಂದ ಬೆಡಗು ಬಿನ್ನಾಣ ನೋಡಿದವರು.. ಅರರೆ ಎಂಥಾ ಸುಂದರಿ! ಅಂತಾ ಅಂದುಕೊಂಡು ಈಕೆಯ ಸಹವಾಸಕ್ಕೆ ಬಿದ್ದರೆ ನಿಮ್ಮ ಕಥೆ ಮುಗಿದಂಗೆ. ನಿಮ್ಮ ಬೆನ್ನು ಬಿದ್ದು ಲಕ್ಷ ಲಕ್ಷ ಹಣ ಕಕ್ಕಿಸೋದು ಖಂಡಿತಾ. ಅಂದ್ಹಾಗೆ ಈಕೆ ಸವಿತಾ ಅಲಿಯಾಸ್ ಮಂಜುಳಾ ಯಾದವ್. ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ನಿವಾಸಿ. ಮೈಸೂರಿನಲ್ಲಿ ವಿಜಯನಗರದಲ್ಲಿ ಸ್ಪಾ ನಡೆಸುತ್ತಿದ್ದಳು. ಬರೀ ಸ್ಪಾ ನಡೆಸುತ್ತಿದ್ದರೆ ಏನೂ ಗಿಟ್ಟಲ್ಲ ಎಂದು ಸ್ಪಾ (spa) ಹೆಸರಲ್ಲಿ ಆಕೆ ಮಾಡುತ್ತಿದ್ದಳು ಪಕ್ಕಾ ಬ್ಲ್ಯಾಕ್ ಮೇಲ್ (blackmail)!

ಹೌದು ಸವಿತ ಸಾಮಾಜಿಕ ಜಾಲತಾಣದ ಮೂಲಕ ಶ್ರೀಮಂತರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ನಂಬರ್ ಪಡೆದು ಚಾಟ್ ಆರಂಭಿಸುತ್ತಿದ್ದಳು. ಸ್ನೇಹ ಸಲುಗೆ ನಂತರ ಆಕೆ ತನ್ನ ಅಸಲಿ ಕರಾಮತ್ತು ಆರಂಭಿಸುತ್ತಿದ್ದಳು. ಮೊಬೈಲ್‌ನಲ್ಲಿ ತನ್ನ ಅರೆ ನಗ್ನ ಪೋಟೋ ಕಳುಹಿಸೋದು, ವಿಡಿಯೊ ಕಾಲ್ ಮಾಡಿ ಬೆತ್ತಲಾಗೋದು ಮಾಡುತ್ತಿದ್ದಳು. ಇದಾದ ನಂತರ ತನ್ನ ಕಷ್ಟ ಹೇಳಿಕೊಂಡು ವಾಪಸ್ಸು‌ ಕೊಡುತ್ತೀನಿ ಅಂತಾ ಅವರಿಂದ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಳು. ಹಣ ಪಡೆದ ನಂತರ ಮುಗಿಯಿತು ಹಣ ಕೊಡುವ ಗೋಜಿಗೆ ಹೋಗುತ್ತಿರಲಿಲ್ಲ.

Also Read: ವೇಶ್ಯಾವಾಟಿಕೆಯೂ ಒಂದು ವೃತ್ತಿ, ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

ಹಣ ಕೇಳಿದರೆ ಪೋಟೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಈ ಸಂಬಂಧ ಈಕೆಯಿಂದ ಮೋಸ ಹೋದ ಮೈಸೂರಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ರು. ಈಕೆಯ ಬೆನ್ನು ಹತ್ತಿದ ಪೊಲೀಸರಿಗೆ ಈಕೆಯ ಮತ್ತಷ್ಟು ಕರಾಳಮುಖಗಳು ಬಯಲಾಗಿದೆ. ಈಕೆ ತನ್ನ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ.

ತಕ್ಷಣ ಪೊಲೀಸರು ಸವಿತಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೆಲ್ಲಾ ಏನೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಬಗ್ಗೆ ಎಚ್ಚರವಾಗಿರೋದು ಕ್ಷೇಮಕರ. ಸುಂದರಿ, ಮೈ ಮಾಟ ಅಂತಾ ಹಿಂದೆ ಹೋದ್ರೆ ಪಂಗನಾಮ ಖಂಡಿತಾ.

ವರದಿ: ರಾಮ್, ಟಿವಿ 9, ಮೈಸೂರು

Also Read: ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಯಿಂದ ಭೂ ಒತ್ತುವರಿ? ಕೋರ್ಟ್ ಆದೇಶದಂತೆ ಸರ್ವೆ, ಆರೋಪ ನಿಜ ಎಂದ ತಹಶೀಲ್ದಾರ್

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್