Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara 2021: ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ

ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ.

Mysuru Dasara 2021: ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ
ಜಂಬೂಸವಾರಿ ಮುಗಿಸಿ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ
Follow us
TV9 Web
| Updated By: ಆಯೇಷಾ ಬಾನು

Updated on: Oct 17, 2021 | 1:53 PM

ಮೈಸೂರು: ಕೊರೊನಾ ಭೀತಿ ನಡುವೆಯೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಯಶಸ್ವಿಯಾಗಿ ನಡೆದಿದೆ. ಚಾಮುಂಡಿ ದೇವಿಯ ಮೆರವಣಿಗೆ ಮಾಡಿ, ಫುಲ್ ರಿಲ್ಯಾಕ್ಸ್ ಮಾಡಿರುವ ಗಜಪಡೆಯನ್ನ ಮೈಸೂರು ಅರಮನೆಯಿಂದ ಬೀಳ್ಕೊಡುಗೆ ನೀಡುವ ಸಮಯ ಸನಿಹಕ್ಕೆ ಬಂದಿದ್ದು ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಗಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆ.13ರಂದು ಮೈಸೂರಿಗೆ 8 ಆನೆಗಳು ಆಗಮಿಸಿದ್ದವು. ಸದ್ಯ ದಸರಾ ಮುಗಿದಿದ್ದು ತಮ್ಮ ತಮ್ಮ ಮನೆಗಳಿಗೆ ಆನೆಗಳು ಹಿಂತಿರುಗುತ್ತಿವೆ. ಅಭಿಮನ್ಯು, ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ ಹೋದ್ರೆ ಅಶ್ವತ್ಥಾಮ ಆನೆ ದೊಡ್ಡ ಹರವೆ ಆನೆ ಶಿಬಿರಕ್ಕೆ ರವಾನಿಸಲಾಗುತ್ತಿದೆ. ಹಾಗೂ ವಿಕ್ರಮ, ಧನಂಜಯ, ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ, ಲಕ್ಷ್ಮೀ ಬಂಡೀಪುರದ ರಾಮಪುರ ಕ್ಯಾಂಪ್‌ಗೆ ಲಾರಿಗಳ ಮೂಲಕ ರವಾನಿಸಲಾಗುತ್ತಿದೆ. ಅರಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಆನೆಗಳಿಗೆ ವಿದಾಯ ಹೇಳಲಾಗಿದೆ.

ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ. ಆನೆಗಳಿಗೆ ನೀಡುವ ಪ್ರಮಾಣ ಸಹಾ ನಿಗದಿಯಾಗಿರುತ್ತದೆ. ಇಲ್ಲಿಯಂತೆ ವಿಶೇಷ ಆಹಾರ ಸಿಗುವುದಿಲ್ಲ. ಆದರೆ ಆನೆಗಳಿಗೆ ಪ್ರಕೃತಿದತ್ತವಾದ ಆಹಾರಗಳು ಯಥೇಚ್ಛವಾಗಿ ಸಿಗುತ್ತದೆ. ಇನ್ನು ಈ ಕಾಡು ಆನೆಗಳು ಕಾಡಿನಲ್ಲಿ ಪ್ರಮುಖ ಸೇನಾನಿಗಳಾಗಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವ ಮಹತ್ವದ ಕೆಲಸಕ್ಕೆ ಈ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಕಾಡಿನಲ್ಲಿ ಸೆರೆ ಸಿಗುವ ಕಾಡಾನೆಗಳನ್ನು ಪಳಗಿಸಲು ಈ ಆನೆಗಳದ್ದೆ ಮಹತ್ವದ ಪಾತ್ರವಾಗಿರುತ್ತದೆ.

Dasara Elephants

ದಸರಾ ಆನೆ

Dasara Elephants

ಲಾರಿಗಳ ಮೂಲಕ ದಸರಾ ಆನೆಗಳನ್ನು ರವಾನಿಸಲಾಗುತ್ತಿದೆ.

ಇದನ್ನೂ ಓದಿ: ದಸರಾ ಹಬ್ಬ ಎಲ್ಲ ಭಾರತೀಯರಿಗೆ ಒಂದೇಯಾದರೂ ಆಚರಣೆಗಳಲ್ಲಿ ಮಾತ್ರ ನಾನಾ ವಿಧ!

ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ