ಸಿಎಂ ಬೊಮ್ಮಾಯಿಯವರೇ ಈ ವಿಚಾರಕ್ಕೆ ಸ್ಪಂದಿಸಿದ್ದಾರೆ. ನನಗೆ ಉಳಿದವರ ಸಹಕಾರ ಬೇಡ. ನಮ್ಮ ಭಾವನೆಗಳಿಗೆ ಸ್ಪಂದಿಸುವಂತ ಮುಖ್ಯಮಂತ್ರಿ ಇದ್ದಾರೆ. ನಾನು ರಾಜಕಾರಣ ಮಾಡಲು ಬಿಜೆಪಿಗೆ ಬಂದಿಲ್ಲ. ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವನು. ಎಂಪಿ ಯಾದವನಿಗೆ ಇಡೀ ದೇಶವೆ ಕಾರ್ಯಕ್ಷೇತ್ರ. ಒಂದು ಕ್ಷೇತ್ರಕ್ಕೆ ಸೀಮಿತ ಎಂಬುದು ಬೇಡ ಎಂದು ಶಾಸಕ ಹರ್ಷವರ್ಧನ್ಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಪ್ರತ್ಯೇಕ ಬೋರ್ಡ್ ಬೇಕೆಂದು ಒತ್ತಾಯ
ವಕ್ಫ್ ಬೋರ್ಡ್ ರೀತಿ ನಮಗೂ ಪ್ರತ್ಯೇಕ ಬೋರ್ಡ್ ಬೇಕು ಎಂದು ಒತ್ತಾಯಿಸಿದ ಪ್ರತಾಪ್ ಸಿಂಹ, ಪ್ರತ್ಯೇಕ ಬೋರ್ಡ್ ಸ್ಥಾಪಿಸಿದರೆ ಈ ರೀತಿ ಸಮಸ್ಯೆ ಇರಲ್ಲ. ಸುಪ್ರಿಂಕೋರ್ಟ್ ಆದೇಶ ಎಂದು ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಮಾತಾಡುತ್ತಿದೆಯಾ ಸಿದ್ದಾರ್ಥ್ ಶುಕ್ಲಾ ಆತ್ಮ? ವೈರಲ್ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ
ಗೌರಿಬಿದನೂರು: ಕೃಷಿ ಹೊಂಡದಲ್ಲಿ ಗಣೇಶ ವಿಸರ್ಜನೆಗೆ ನೀರು ನೋಡಲು ಹೋಗಿ ವಿದ್ಯಾರ್ಥಿಗಳಿಬ್ಬರು ಜಲ ಸಮಾಧಿ
(Prathap Simha discussed with CM Bommayi on clearance of temples at mysuru)