AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ

ಸೆ.2ರಂದು ಸಿದ್ದಾರ್ಥ್​ ಶುಕ್ಲಾ ನಿಧನರಾದರು. ಆ ದುರ್ಘಟನೆಯ ಬೆನ್ನಲ್ಲೇ ಸ್ಟೀವ್​ ಹಫ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿರುವ ಧ್ವನಿ ಸಿದ್ದಾರ್ಥ್​ ಶುಕ್ಲಾರ ಆತ್ಮದ್ದು ಎಂದು ಹೇಳುತ್ತಿದ್ದಾರೆ.

ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ
ಸ್ಟೀವ್​ ಹಫ್​, ಸಿದ್ದಾರ್ಥ್​ ಶುಕ್ಲಾ
TV9 Web
| Updated By: ಮದನ್​ ಕುಮಾರ್​|

Updated on:Sep 13, 2021 | 12:08 PM

Share

ನಟ ಸಿದ್ದಾರ್ಥ್​ ಶುಕ್ಲಾ ಅವರು ಹೃದಯಾಘಾತದಿಂದ ನಿಧನರಾದ ಬಳಿಕ ಅವರ ಅಭಿಮಾನಿಗಳ ವಲಯದಲ್ಲಿ ಶೋಕ ಆವರಿಸಿದೆ. ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಿದ್ದ ಅವರು ಹೃದಯಾಘಾತದಲ್ಲಿ ಮೃತರಾದರು ಎಂಬ ಸುದ್ದಿಯನ್ನು ಬಹುತೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ಮೂಡಿವೆ. ಈ ನಡುವೆ ಸಿದ್ದಾರ್ಥ್​ ಶುಕ್ಲಾ ಅವರ ಆತ್ಮ ಮಾತನಾಡುತ್ತಿದೆ ಎಂಬ ಕಥೆಗಳೆಲ್ಲ ಹುಟ್ಟಿಕೊಂಡಿವೆ. ಅದಕ್ಕೆ ಕಾರಣ ಆಗಿರುವುದು ಪ್ಯಾರಾ ನಾರ್ಮಲ್​ ತಜ್ಞ ಸ್ಟೀವ್​ ಹಫ್​ ಹಂಚಿಕೊಂಡಿರುವ ಒಂದು ವಿಡಿಯೋ.

ಸ್ಟೀವ್​ ಹಫ್​ ಹೆಸರು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದಾಗ ಕೂಡ ಸ್ಟೀವ್​ ಹಫ್​ ಹೀಗೆಯೇ ಹೇಳಿದ್ದರು. ತಾವು ಸುಶಾಂತ್​ ಆತ್ಮದ ಜೊತೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದ ಅವರು, ಅದಕ್ಕೆ ಸಂಬಂಧಿಸಿದ ಒಂದು ವಿಡಿಯೋವನ್ನು ರಿಲೀಸ್​ ಮಾಡಿದ್ದರು. ಅದನ್ನೇ ಈ ಬಾರಿಯೂ ಅವರು ಮುಂದುವರಿಸಿದ್ದಾರೆ. ಸೆ.2ರಂದು ಸಿದ್ದಾರ್ಥ್​ ಶುಕ್ಲಾ ನಿಧನರಾದರು. ಸೆ.4ರಂದು ಸ್ಟೀವ್​ ಹಫ್​ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿರುವ ಧ್ವನಿ ಸಿದ್ದಾರ್ಥ್​ ಶುಕ್ಲಾರ ಆತ್ಮದ್ದು ಎಂದು ಹೇಳುತ್ತಿದ್ದಾರೆ.

‘ದೇಹ ಬಿಡುವಾಗ ನೀವು ಏನನ್ನು ನೋಡಿದ್ರಿ’ ಎಂದು ಕೇಳಿದ್ದಕ್ಕೆ ‘ಒಬ್ಬ ಗಂಧರ್ವನನ್ನು ನೋಡಿದೆ’ ಎಂದು ಆ ಧ್ವನಿ ಉತ್ತರಿಸಿದೆ. ‘ಸಾಯುವಾಗ ನನಗೆ ತುಂಬ ನೋವಾಯಿತು. ನಾನು ನಗ್ನವಾಗಿದ್ದೆ. ನಾನೀಗ ಸ್ವರ್ಗದಲ್ಲಿ ಇದ್ದೇನೆ. ನಾನು ದೇವರ ಜೊತೆ ಇದ್ದೇನೆ. ನನ್ನ ಬಗ್ಗೆ ಯೋಚನೆ ಮಾಡಿ’ ಎಂಬಿತ್ಯಾದಿ ಮಾತುಗಳನ್ನು ಆ ಧ್ವನಿ ಹೇಳಿದೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಇದನ್ನು ಕೆಲವರು ನಂಬಿದ್ದಾರೆ. ಮತ್ತೆ ಕೆಲವರು ಇದೆಲ್ಲ ಸುಳ್ಳು ಎಂದು ಸ್ಟೀವ್​ ಹಫ್​ಗೆ ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ.

ಫೋಟೋಗ್ರಾಫರ್​ ಕೂಡ ಆಗಿರುವ ಸ್ಟೀವ್​ ಹಫ್​ ಅವರು ಪ್ಯಾರಾ ನಾರ್ಮಲ್​ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತುಂಬ ಫೇಮಸ್​ ಆಗಿದ್ದಾರೆ. ಅವರ ಯೂಟ್ಯೂಬ್​ ಚಾನೆಲ್​ಗೆ 19 ಲಕ್ಷ ಚಂದದಾರರು ಇದ್ದಾರೆ. ಸತ್ತವರ ಆತ್ಮಗಳ ಜೊತೆ ಮಾತನಾಡಲು ತಾವು ಕೆಲವೊಂದು ಉಪಕರಣಗಳನ್ನು ಕಂಡು ಹಿಡಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

‘ನೀನೂ ಸತ್ತು ಹೋಗು’: ಸಿದ್ದಾರ್ಥ್​ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್​; ಆಸ್ಪತ್ರೆಗೆ ದಾಖಲು

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

Published On - 12:07 pm, Mon, 13 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ