AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ದಾವಣಗೆರೆ ಕುಸ್ತಿ ಪಂದ್ಯಾವಳಿಯ ರೋಚಕ ಕ್ಷಣಗಳು ಇಲ್ಲಿದೆ

ಕಳೆದ ಒಂದು ವರ್ಷದಿಂದ ಈ ನಗರದಲ್ಲಿ ಯಾವುದೇ ಕ್ರೀಡೆಯನ್ನು ಆಯೋಜನೆ ಮಾಡಿಲ್ಲ, ಅದಕ್ಕೆ ಕಾರಣ ಕೋವಿಡ್ 19 . ದಾವಣಗೆರೆ ಎಂದರೆ ಬರೀ ಬೆಣ್ಣೆ ದೋಸೆ ಎಂದು ಮಾತ್ರ ಗೊತ್ತು. ಇದಕ್ಕೂ ಪ್ರಸಿದ್ಧವಾದ ಸಾಹಸ ಕಲೆಯೊಂದು ಇಲ್ಲಿ ಜೀವಂತವಾಗಿದೆ. ಅದೇ ಕುಸ್ತಿ. ದಾವಣಗೆರೆ ಪೈಲ್ವಾನರು ಎಂದರೆ ಮೈಸೂರು ದಸರಾದಲ್ಲಿ ಪ್ರಸಿದ್ಧರು ಗಲ್ಲಿಗೊಂದು ಗರಡಿ ಮನೆ ಸಹ ಈ ನಗರದಲ್ಲಿವೆ.

preethi shettigar
| Edited By: |

Updated on: Mar 31, 2021 | 4:42 PM

Share
 ದಿವಂಗತ ಕೆ ಮಲ್ಲಪ್ಪನವರ  ಸವಿನೆನೆಪುಗಾಗಿ ಅಂತರ್ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಗರದ ಬೀರಲಿಂಗೇಶ್ವರ  ಮೈದಾನದಲ್ಲಿ ಪೈಲ್ವಾನ್ ವೀರೇಶ್ ಅಭಿಮಾನಿ ಬಳಗದ ವತಿಯಿಂದ ಆಯೋಜನೆ ಮಾಡಲಾಗಿತ್ತು

photo gallery Wrestling tournament in Davanagere

1 / 9
24 ಜೋಡಿ ಜಂಗಿ ಕುಸ್ತಿ, ಬಯಲು ಕುಸ್ತಿ ಪಂದ್ಯಾವಳಿಯನ್ನು ನಡೆಸಿದ್ದರು. ತೂಕದ ಮೇಲೆ ಜೊತೆ ಮಾಡಿ ಕುಸ್ತಿಯನ್ನು ಆಡಿಸಲಾಗುತ್ತದೆ. ಹೀಗೆ ನಿರಂತರವಾಗಿ  ಕಸರತ್ತು ಮಾಡುತ್ತಿರುವ ಯುವಕರಿಗೆ ಪ್ರಶಸ್ತಿ ಇರುತ್ತದೆ.

photo gallery Wrestling tournament in Davanagere

2 / 9
ಈ ಪಂದ್ಯವಾಳಿಯಲ್ಲಿ ಮಹಾರಾಷ್ಟ್ರದಿಂದ ಕುಸ್ತಿಪಟುಗಳು ಭಾಗವಹಿಸಿದ್ದಾರೆ. ಬಾಗಲಕೋಟೆ. ಶಿವಮೊಗ್ಗ. ಹಾವೇರಿ, ಬೆಳಗಾವಿ, ಗದಗ, ಬಳ್ಳಾರಿ ಇನ್ನೂ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

photo gallery Wrestling tournament in Davanagere

3 / 9
ದಾವಣಗೆರೆ ಪೈಲ್ವಾನರು ಎಂದರೆ  ಮೈಸೂರು ದಸರಾದಲ್ಲಿ ಪ್ರಸಿದ್ಧಿ ಪಡೆದವರು. ಜೊತೆಗೆ ಗಲ್ಲಿಗೊಂದು ಗರಡಿ ಮನೆ ಈ ನಗರದಲ್ಲಿವೆ. ಇಂತಹ ನಗರದ  ಕುಸ್ತಿ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

photo gallery Wrestling tournament in Davanagere

4 / 9
ದಾವಣಗೆರೆ ನಗರದಲ್ಲಿ ಕುಸ್ತಿ ಕಲಿತವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಉದಾಹರಣೆಗಳಿವೆ. ಹೀಗಾಗಿ ದಾವಣಗೆರೆ ಕುಸ್ತಿ ಇತಿಹಾಸ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸುತ್ತಿದೆ.

photo gallery Wrestling tournament in Davanagere

5 / 9
ಹಳ್ಳಿಗಳಿಂದ ಬರುವ ಹುಡುಗರನ್ನು ಮಮತೆಯಿಂದ ಕುಸ್ತಿ ಪಟುವಾಗಿ ಬೆಳೆಸುತ್ತಿದ್ದಾರೆ. ಈ ಹಾಸ್ಟೇಲ್​ನ ರಫೀಕ್  ಕೋಳಿ ಎಂಬ ಕುಸ್ತಿ ಪಟು ಕೂಡ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕುಸ್ತಿ ತರಬೇತುದಾರರಾದ  ಶಿವಾನಂದ ಹೇಳಿದ್ದಾರೆ.

photo gallery Wrestling tournament in Davanagere

6 / 9
ದಾವಣಗೆರೆಯಲ್ಲಿ ಚಾರ್ಲಿ ಪೈಲ್ವಾನ್ ಸೇರಿದ  ದೊಡ್ಡ  ಇತಿಹಾಸವೇ ಇರುವ ಕುಸ್ತಿ ಪೈಲ್ವಾನ್​ಗಳಿದ್ದಾರೆ. ಇವರಿಗಾಗಿಯೇ ಕುಸ್ತಿ ಜೀರ್ಣೋದ್ಧಾರ ಸಮಿತಿ ಸಹ ಇಲ್ಲಿದೆ.

photo gallery Wrestling tournament in Davanagere

7 / 9
ಕಳೆದ ದಸರಾದಲ್ಲಿ ಇಲ್ಲಿನ ಕ್ರೀಡಾಪಟು ದಸರಾ ಕೆಸರಿ ಪ್ರಶಸ್ತಿ ಗೆದ್ದುಕೊಂಡಿದ್ದರು.

photo gallery Wrestling tournament in Davanagere

8 / 9
ದಿವಂಗತ ಕೆ ಮಲ್ಲಪ್ಪನವರು ಸಹ ಕುಸ್ತಿಪಟ್ಟುವಾಗಿದ್ದರು, ಅಲ್ಲದೇ ನೂರಾರು ಕುಸ್ತಿ ಪಟುಗಳಿಗೆ ಕುಸ್ತಿ ಕಲಿಸಿ ಕುಸ್ತಿ ಆಡಿಸಿದ್ದರು. ದಿವಂಗತ ಕೆ ಮಲ್ಲಪ್ಪನವರ ಸವಿನೆನೆಪಿಗಾಗಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದಾರೆ.

photo gallery Wrestling tournament in Davanagere

9 / 9
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ