AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಹಳ್ಳಿಗಳಲ್ಲಿ ನೈಟ್ ಕ್ರಿಕೆಟ್ ಹವಾ: ಮುಗಿಬಿದ್ದ ಜನರು

ಆಟ ನಡೆಯುವ ಕಡೆ ಸುತ್ತಲು ಫೋಕಸ್ ಲೈಟ್ ಹಾಕಿದ್ದು, ಮೈದಾನ ಹೊರಗೆ ಬ್ಯಾರಿಕೇಡ್ ಹಾಕಿ ಪೆವಿಲಿಯನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪಂದ್ಯಾವಳಿಗಳನ್ನ ಆಡಿಸುತ್ತಾರೊ ಅದೇ ಮಾದರಿಯಲ್ಲಿ ಮತ್ತು ಅದೇ ನಿಯಮಗಳನ್ನು ಅನುಸರಿಸಿ ಆಟ ಆಡವಾಡುತ್ತಿದ್ದಾರೆ

ಬೆಳಗಾವಿ ಹಳ್ಳಿಗಳಲ್ಲಿ ನೈಟ್ ಕ್ರಿಕೆಟ್ ಹವಾ: ಮುಗಿಬಿದ್ದ ಜನರು
ಕಳೆದ ಒಂದು ತಿಂಗಳಿಂದ ಕ್ರಿಕೆಟ್ ಆರಂಭವಾಗಿದೆ
sandhya thejappa
| Edited By: |

Updated on: Mar 14, 2021 | 12:44 PM

Share

ಬೆಳಗಾವಿ: ಮುಂದಿನ ತಿಂಗಳು ಮತ್ತೆ ಐಪಿಎಲ್ ಕ್ರಿಕೆಟ್ ಆರಂಭವಾಗುತ್ತಿದ್ದು, ಈ ಬಾರಿ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೂ ಮುನ್ನ ಹಳ್ಳಿಗಳಲ್ಲಿ ರಾತ್ರಿ ಕ್ರಿಕೆಟ್ ಹವಾ ಜೋರಾಗಿದೆ. ಕಳೆದ ಒಂದು ತಿಂಗಳಿಂದ ಇಪ್ಪತ್ತು ಕಡೆಗಳಲ್ಲಿ ರಾತ್ರಿ ಕ್ರಿಕಟ್ ಆರಂಭವಾಗಿದ್ದು, ಯುವಕರಿಗೆ ಎಲ್ಲಿಲ್ಲದ ಸಂತಸ ಉಂಟುಮಾಡಿದೆ.

ಯುವಕರ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಇಪ್ಪತ್ತು ಗ್ರಾಮಗಳಲ್ಲಿ ಜೊಲ್ಲೆ ಪ್ರೀಮಿಯರ್ ಲೀಗ್ ಎಂದು ಮಾಡಲಾಗಿದ್ದು, ಕಳೆದ ಒಂದು ತಿಂಗಳಿಂದ ಈ ಪಂದ್ಯಾವಳಿ ಆರಂಭವಾಗಿದೆ. ಪ್ರತಿಯೊಂದು ಗ್ರಾಮದಿಂದ ಎರಡರಿಂದ ಮೂರು ಟೀಮ್​ಗಳು ಬಂದಿದ್ದು, ಎಲ್ಲರಿಗೂ ಇಲ್ಲಿ ಆಡಲು ಅವಕಾಶ ನೀಡಲಾಗುತ್ತಿದೆ. ಸುಮಾರು 57 ಗ್ರಾಮದ ಇಪ್ಪತ್ತು ಕಡೆಗಳಲ್ಲಿ ಈ ಪಂದ್ಯವನ್ನ ನಡೆಸಲಾಗುತ್ತಿದ್ದು, ವಾರಕ್ಕೆ ಒಂದೊಂದು ಕಡೆ ಆಟ ನಡೆಯುತ್ತದೆ. ಐಪಿಎಲ್ ಮಾದರಿಯಲ್ಲಿ ಮೈದಾನ ಸಿದ್ಧಪಡಿಸಿ ಅದಕ್ಕೆ ಬೇಕಾದ ಸಿಸ್ಟಮ್ಸ್ ಹಾಗೂ ಲೈಟಿಂಗ್ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿದೆ.

ಆಟ ನಡೆಯುವ ಕಡೆ ಸುತ್ತಲು ಫೋಕಸ್ ಲೈಟ್ ಹಾಕಿದ್ದು, ಮೈದಾನ ಹೊರಗೆ ಬ್ಯಾರಿಕೇಡ್ ಹಾಕಿ ಪೆವಿಲಿಯನ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪಂದ್ಯಾವಳಿಗಳನ್ನ ಆಡಿಸುತ್ತಾರೊ ಅದೇ ಮಾದರಿಯಲ್ಲಿ ಮತ್ತು ಅದೇ ನಿಯಮಗಳನ್ನು ಅನುಸರಿಸಿ ಆಟ ಆಡವಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಯುವಕರಿಗೆ ಹೊಸದೊಂದು ಉತ್ಸಾಹ ಬಂದಂತಾಗಿದೆ.

ಕ್ರಿಕೆಟ್ ನೋಡಲು ಮುಗಿಬಿದ್ದ ಜನರು

ಗೆದ್ದ ತಂಡಕ್ಕೆ ಬಹುಮಾನ ವಿತರಣೆ

ಮೂರು ವರ್ಷದಿಂದ ನಡೆಯುತ್ತಿರುವ ಪಂದ್ಯಾವಳಿ ಕೊರೊನಾ ಲಾಕ್​ಡೌನ್​  ಹಿನ್ನೆಲೆ ಯಾವುದೇ ಚಟುವಟಿಕೆ ಮಾಡಲು ಆಗದೇ ಯುವಕರು ಕೂಡ ಮನೆಯಲ್ಲೇ ಕುಳಿತು ಕಾಲ ಕಳೆದಿದ್ದರು. ಆದರೆ ಇದೀಗ ಕೊರೊನಾ ನಿಯಮಗಳಲ್ಲಿ ಸಡಿಲಿಕೆಯಾಗಿದ್ದು, ಮನರಂಜನೆ ನೀಡುವ ಉದ್ದೇಶವಿಟ್ಟುಕೊಂಡು ಈ ಜೊಲ್ಲೆ ಪ್ರೀಮಿಯರ್ ಲೀಗ್ ಆಯೋಜನೆ ಮಾಡಲಾಗಿದೆ. ಪೈನಲ್​ನಲ್ಲಿ ಗೆದ್ದ ಟೀಮ್​ಗೆ 25 ಸಾವಿರ ಬಹುಮಾನ ಕೂಡ ನೀಡಿ ಗೌರವಿಸುವ ಕೆಲಸ ಕೂಡ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಈ ರೀತಿ ಕ್ರಿಕೆಟ್ ಪಂದ್ಯಾವಳಿಯನ್ನ ಮಾಡಿಕೊಂಡು ಬರಲಾಗುತ್ತಿದ್ದು, ಕೊರೊನಾ ಹಿನ್ನೆಲೆ ಕಳೆದ ವರ್ಷ ಮಾತ್ರ ಪಂದ್ಯಾವಳಿ ನಡೆದಿರಲಿಲ್ಲ. ಈ ಎಲ್ಲಾ ಪಂದ್ಯಾವಳಿಯನ್ನ ಸಚಿವೆ ಶಶಿಕಲಾ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ, ಪುತ್ರ ಬಸವಪ್ರಸಾದ್ ಜೊಲ್ಲೆ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಪಂದ್ಯಾವಳಿಯನ್ನ ನಡೆಸಿ ಯುವಕರಿಗೆ ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಬಸವಪ್ರದಾಸ್ ಜೊಲ್ಲೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಮಾದರಿಯಲ್ಲಿ ಕ್ರಿಕೆಟ್​ ಆಡುತ್ತಿದ್ದಾರೆ

ರಾತ್ರಿಯಾದರೆ ಸಾಕು ಯಾವುದೇ ಸದ್ದಿಲ್ಲದೇ ನಿಶಬ್ಧವಾಗಿ ಮಾರ್ಪಾಡಾಗುತ್ತಿದ್ದ ಹಳ್ಳಿಗಳಲ್ಲಿ ಇದೀಗ ಕ್ರಿಕೆಟ್ ಜ್ವರ ಶುರುವಾದಾಗಿನಿಂದ ಮಧ್ಯರಾತ್ರಿವರೆಗೂ ಆಟ ಆಡುವುದರಲ್ಲಿ ಯುವಕರು ಬಿಜಿಯಾಗಿದ್ದಾರೆ. ರಾತ್ರಿ ಕ್ರಿಕೆಟ್ ನೋಡುವುದೇ ಒಂದು ಖುಷಿ ಅಂತಾ ಜನರು ಮುಗಿ ಬೀಳುತ್ತಿದ್ದಾರೆ.

ಇದನ್ನೂ ಓದಿ

India vs England: ರೋಹಿತ್​ ಇಲ್ಲದ ಕ್ರಿಕೆಟ್​ ಪಂದ್ಯವನ್ನು ವೀಕ್ಷಿಸುವುದಕ್ಕಿಂತ ಟಿವಿ ಆಫ್​ ಮಾಡುವುದೇ ಒಳಿತು: ವಿರೇಂದ್ರ ಸೆಹ್ವಾಗ್

ತಾನು ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡೂಲ್ಕರ್ ಎನ್ನುವುದನ್ನು ಸಾಬೀತು ಮಾಡಿದ ಮಿಥಾಲಿ ರಾಜ್!

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ