ಕಠಿಣ ನಿಯಮ ಉಲ್ಲಂಘಿಸಿ ಧಾರವಾಡದಲ್ಲಿ ಬಟ್ಟೆ ಅಂಗಡಿ ಓಪನ್; 7 ಜನ ಪೊಲೀಸರ ವಶಕ್ಕೆ

ಕೊರೊನಾ ಕಠಿಣ ನಿಯಮವನ್ನು ಗಾಳಿಗೆ ತೂರಿ ಬಟ್ಟೆ ಅಂಗಡಿ ಮಾಲೀಕರಾದ ಉಮೇಶ್ ಎಂಬುವವರು ಅಂಗಡಿ ಬಾಗಿಲನ್ನು ತೆರೆದಿದ್ದರು. ಈ ವೇಳೆ ಎಸ್ ಕೆ ಕ್ರಿಯೇಷನ್ಸ್ ಅಂಗಡಿ ಮೇಲೆ ಎಸಿಪಿ ಅನುಷಾ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಬಟ್ಟಿ ಖರೀದಿಸಲು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಠಿಣ ನಿಯಮ ಉಲ್ಲಂಘಿಸಿ ಧಾರವಾಡದಲ್ಲಿ ಬಟ್ಟೆ ಅಂಗಡಿ ಓಪನ್; 7 ಜನ ಪೊಲೀಸರ ವಶಕ್ಕೆ
ಬಟ್ಟೆ ಅಂಗಡಿ ಮೇಲೆ ಪೊಲೀಸ್ ದಾಳಿ

Updated on: May 06, 2021 | 3:00 PM

ಧಾರವಾಡ: ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿ ಅಪ್ಪಳಿಸುತ್ತಿದೆ. ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಕಾಲ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ನೀಡಿದೆ. ಆದರೆ ಬೇರೆ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿದೆ. ಹೀಗಿದ್ದೂ, ಧಾರವಾಡದಲ್ಲಿ ಬಟ್ಟೆ ಅಂಗಡಿಯನ್ನು ತೆರೆದಿದ್ದಾರೆ. ಬಟ್ಟೆ ಅಂಗಡಿಯನ್ನು ತೆರೆದಿದ್ದ ಮಾಲೀಕ ಸೇರಿ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಕಠಿಣ ನಿಯಮವನ್ನು ಗಾಳಿಗೆ ತೂರಿ ಬಟ್ಟೆ ಅಂಗಡಿ ಮಾಲೀಕರಾದ ಉಮೇಶ್ ಎಂಬುವವರು ಅಂಗಡಿ ಬಾಗಿಲನ್ನು ತೆರೆದಿದ್ದರು. ಈ ವೇಳೆ ಎಸ್ ಕೆ ಕ್ರಿಯೇಷನ್ಸ್ ಅಂಗಡಿ ಮೇಲೆ ಎಸಿಪಿ ಅನುಷಾ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಬಟ್ಟಿ ಖರೀದಿಸಲು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊತ್ತಮರಿ ತರಲು ಹೋಗಿ ಲಾಕ್ ಆದ ವ್ಯಕ್ತಿ
ಕೊರೊನಾ ಕರ್ಫ್ಯೂ ವೇಳೆ ಕೊತ್ತಮರಿ ತರಲು ಬಂದಿದ್ದೆ ಎಂದು ಹೇಲಿದ್ದ ವ್ಯಕ್ತಿಯೊಬ್ಬರಿಗೆ ಪೊಲೀಸರು ದಂಡ ಹಾಕಿದ್ದಾರೆ. ವ್ಯಕ್ತಿಯೊಬ್ಬರು ಕಠಿಣ ನಿಯಮಗಳು ಜಾರಿಯಲ್ಲಿದ್ದರೂ ಗೆಳೆಯನ ಜೊತೆ ಓಡಾಡುತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಕುಮಾರಸ್ವಾಮಿ ಲೇಔಟ್​ನಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಪೊಲೀಸರು ವ್ಯಕ್ತಿಯನ್ನು ತಡೆದು ಪ್ರಶ್ನಿಸಿದ್ದಾರೆ. ಆಗ ಕೊತ್ತಮರಿ ಸೊಪ್ಪು ತರೊಕೆ ಹೊಗಿದ್ದಾಗಿ ಗಾಡಿ ಕಡೆ ಕೈತೋರಿಸಿದ್ದರು. ಆದರೆ ಚಳ್ಳಹಣ್ಣು ತಿನ್ನಿಸಲು ಹೊದ ಆ ವ್ಯಕ್ತಿಗೆ ಪೊಲೀಸರು ದಂಡ ಹಾಕಿದ್ದಾರೆ.

ಇದನ್ನೂ ಓದಿ

ಬಯೋ ಬಬಲ್ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.. ಆರ್ಸಿಬಿ ಆಟಗಾರರಿಗೆ ಧನಶ್ರೀ ವರ್ಮಾ ಭಾವನಾತ್ಮಕ ವಿದಾಯ

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಬೆಂಗಾವಲು ವಾಹನದ ಮೇಲೆ ದಾಳಿ, ಇದು ಟಿಎಂಸಿ ಕೃತ್ಯ: ಬಿಜೆಪಿ ಆರೋಪ

(Police arrested 7 people for violating strict rules and opening a clothing store in Dharwad)