AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೂಸ್​ನಲ್ಲಿ ಮತ್ತು ಬೆರೆಸಿ ವಿವಾಹಿತೆ ಅತ್ಯಾಚಾರ, ನಂಬಿ ಮೋಸ ಮಾಡಿದ ಪೋಲಿ ಪೊಲೀಸಪ್ಪ

ಚಿತ್ರದುರ್ಗ: ಪೊಲೀಸರೆಂದ್ರೆ ನೊಂದವರ ನೆರವಿಗೆ ನಿಲ್ತಾರೆ, ಅನ್ಯಾಯ ವಿರುದ್ಧ ಹೋರಾಡ್ತಾರೆ.. ವಂಚಕರನ್ನ ಹೆಡೆಮುರಿ ಕಟ್ತಾರೆ.. ಸಮಾಜಮುಖಿ ಕೆಲಸದ ಪರ ಇರ್ತಾರೆ ಅಂತಾ ನಾವೆಲ್ಲಾ ಅನ್ಕೊಂಡಿದ್ದೀವಿ. ಆದ್ರೆ ಆಲ್ಲೊಬ್ಬ ಪೊಲೀಸ್ ಒಳ್ಳೆ ಕೆಲಸ ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ಆದ್ರೆ ಒಬ್ಳು ಮಹಿಳೆಯನ್ನ ಪೀಡಿಸಿ ಪೋಲಿ ಪೊಲೀಸಪ್ಪನಾಗಿದ್ದಾನೆ. ವಂಚಿಸಿದ ಪೊಲೀಸಪ್ಪನ ವಿರುದ್ಧ ಆರೋಪದ ಹೊಳೆ: ಚಿತ್ರದುರ್ಗ ನಗರದ ಡಿಎಆರ್ ಪೇದೆಯೊಬ್ಬನ ವಿರುದ್ಧ ನೊಂದ ಮಹಿಳೆ ಗುಡುಗಿದ್ದಾಳೆ. ಅತ್ಯಾಚಾರ ಎಸಗಿ, ಕೊಟ್ಟ ಹಣ ಕೊಡದೆ ವಂಚಿಸಿದ್ದಾನೆ ಅಂತಾ ಆರೋಪಿಸಿದ್ದಾಳೆ. ಆರೋಪಿ ಪೇದೆ […]

ಜ್ಯೂಸ್​ನಲ್ಲಿ ಮತ್ತು ಬೆರೆಸಿ ವಿವಾಹಿತೆ ಅತ್ಯಾಚಾರ, ನಂಬಿ ಮೋಸ ಮಾಡಿದ ಪೋಲಿ ಪೊಲೀಸಪ್ಪ
ಸಾಧು ಶ್ರೀನಾಥ್​
|

Updated on:Nov 20, 2019 | 12:02 PM

Share

ಚಿತ್ರದುರ್ಗ: ಪೊಲೀಸರೆಂದ್ರೆ ನೊಂದವರ ನೆರವಿಗೆ ನಿಲ್ತಾರೆ, ಅನ್ಯಾಯ ವಿರುದ್ಧ ಹೋರಾಡ್ತಾರೆ.. ವಂಚಕರನ್ನ ಹೆಡೆಮುರಿ ಕಟ್ತಾರೆ.. ಸಮಾಜಮುಖಿ ಕೆಲಸದ ಪರ ಇರ್ತಾರೆ ಅಂತಾ ನಾವೆಲ್ಲಾ ಅನ್ಕೊಂಡಿದ್ದೀವಿ. ಆದ್ರೆ ಆಲ್ಲೊಬ್ಬ ಪೊಲೀಸ್ ಒಳ್ಳೆ ಕೆಲಸ ಮಾಡಿದ್ದಾನೋ ಇಲ್ವೋ ಗೊತ್ತಿಲ್ಲ. ಆದ್ರೆ ಒಬ್ಳು ಮಹಿಳೆಯನ್ನ ಪೀಡಿಸಿ ಪೋಲಿ ಪೊಲೀಸಪ್ಪನಾಗಿದ್ದಾನೆ.

ವಂಚಿಸಿದ ಪೊಲೀಸಪ್ಪನ ವಿರುದ್ಧ ಆರೋಪದ ಹೊಳೆ: ಚಿತ್ರದುರ್ಗ ನಗರದ ಡಿಎಆರ್ ಪೇದೆಯೊಬ್ಬನ ವಿರುದ್ಧ ನೊಂದ ಮಹಿಳೆ ಗುಡುಗಿದ್ದಾಳೆ. ಅತ್ಯಾಚಾರ ಎಸಗಿ, ಕೊಟ್ಟ ಹಣ ಕೊಡದೆ ವಂಚಿಸಿದ್ದಾನೆ ಅಂತಾ ಆರೋಪಿಸಿದ್ದಾಳೆ. ಆರೋಪಿ ಪೇದೆ ರೇಣುಕಪ್ಪ ಮತ್ತು ನೊಂದ ಮಹಿಳೆ ಪತಿ ಚಿತ್ರದುರ್ಗ ಜಿಲ್ಲಾ ಸಶಸ್ತ್ರ್ತ ಪಡೆಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ರು. ಪೊಲೀಸ್ ಕ್ವಾಟ್ರರ್ಸ್​ನಲ್ಲಿ ವಾಸವಿದ್ದಾಗ ರೇಣುಕಪ್ಪ ಮಹಿಳೆಗೆ ಪರಿಚಿತನಾಗಿದ್ದಾನೆ.

ಬಳಿಕ ನಂಬಿಸಿ 8ಲಕ್ಷ ರೂ ಹಣ ಪಡೆದಿದ್ದಾನೆ ಅಂತಾ ಮಹಿಳೆ ಹೇಳಿದ್ದಾರೆ. ನಂತರ ಹಣ ಕೊಡ್ತೀನಿ ಅಂತಾ ಮನೆಗೆ ಕರೆಸಿಕೊಂಡು ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿ ಹಾಕಿ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದಾನಂತೆ. ಸದ್ಯ ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದು, ಇದ್ರಿಂದ ನನ್ನ ಪತಿ ದೂರವಾಗಿದ್ದಾರೆ. ನನಗೆ ನ್ಯಾಯ ಬೇಕು. ಇಲ್ಲಾಂದ್ರೆ ನನ್ನ ಆತ್ಮಹತ್ಯೆಗೆ ಪೊಲೀಸ್ ಇಲಾಖೆ ಕಾರಣವಾಗುತ್ತೆ ಅಂತಾ ಮಹಿಳೆ ಅಲವತ್ತುಕೊಂಡಿದ್ದಾರೆ.

2019ಜೂನ್ 3 ರಂದು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಆದ್ರೆ, ಮತ್ತೊಬ್ಬ ಪೇದೆ ತಿಪ್ಪೇಸ್ವಾಮಿ ಎಂಬಾತ ಲಂಚ ಪಡೆದು ಆರೋಪಿ ರೇಣುಕಪ್ಪನನ್ನು ರಕ್ಷಿಸ್ತಿದ್ದಾರೆ. ನನ್ನಿಂದ ಸಮರ್ಪಕ ಹೇಳಿಕೆ ಪಡೆದಿಲ್ಲ ಅಂತಾ ಮಹಿಳೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಕೇಸ್​ನ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಹಿಳೆ ಮರು ಹೇಳಿಕೆಯನ್ನ ಕೋರ್ಟ್​ನಲ್ಲೇ ಹೇಳಲು ಅವಕಾಶವಿದೆ. ಇನ್ನು ಜಿಲ್ಲಾ ಎಸ್​ಪಿ ಪರಿಶೀಲಿಸಿ ಕ್ರಮ ಕೈಗೊಳ್ತೀವಿ ಅಂದಿದ್ದಾರೆ.

ಪೋಲಿ ಪೊಲೀಸ್ ರೇಣುಕಪ್ಪನ ವಿರುದ್ಧ ಮತ್ತೋರ್ವ ಪೇದೆ ಪತ್ನಿ ವಂಚನೆ ಮತ್ತು ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಆದ್ರೆ, ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ.

Published On - 8:04 am, Wed, 20 November 19

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು