ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು -ಪ್ರಮೋದ್ ಮುತಾಲಿಕ್ ‘ಬಾಂಬ್​’!

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಬಾರದೆಂದು ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊಡಿಸಿದ್ದಾರೆ. ಆದರೆ ಸಿಎಂ ನಿರ್ಧಾರಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಟಾಕಿ ಬ್ಯಾನ್ ಮಾಡಬೇಕು ಅನ್ನೋದು ಸರಿಯಲ್ಲ. ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು ಎಂದು ಹುಕ್ಕೇರಿ ಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ವಾದ ಮಾಡಿದ್ದಾರೆ. ವಾಹನದಿಂದ ಎಷ್ಟು ಮಾಲಿನ್ಯ ಆಗುತ್ತಿದೆ ಅದನ್ನ ತಡೆಯಲಿ. ಕಾನೂನು ಮಾಡುವವರು ಅರಣ್ಯ ಪ್ರದೇಶಕ್ಕೆ ಹೋಗಿ […]

ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು -ಪ್ರಮೋದ್ ಮುತಾಲಿಕ್ ‘ಬಾಂಬ್​’!
ಆಯೇಷಾ ಬಾನು Edited By:

Updated on: Nov 06, 2020 | 4:03 PM

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗಬಾರದೆಂದು ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊಡಿಸಿದ್ದಾರೆ. ಆದರೆ ಸಿಎಂ ನಿರ್ಧಾರಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ.

ಪಟಾಕಿ ಬ್ಯಾನ್ ಮಾಡಬೇಕು ಅನ್ನೋದು ಸರಿಯಲ್ಲ. ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು ಎಂದು ಹುಕ್ಕೇರಿ ಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ವಾದ ಮಾಡಿದ್ದಾರೆ. ವಾಹನದಿಂದ ಎಷ್ಟು ಮಾಲಿನ್ಯ ಆಗುತ್ತಿದೆ ಅದನ್ನ ತಡೆಯಲಿ.

ಕಾನೂನು ಮಾಡುವವರು ಅರಣ್ಯ ಪ್ರದೇಶಕ್ಕೆ ಹೋಗಿ ನೋಡಿದ್ರೆ ಪರಿಸರ ಎಷ್ಟು ಹಾಳು ಮಾಡಿದ್ದೀರಿ ಅಂತಾ ಗೊತ್ತಾಗುತ್ತೆ. ದೀಪಾವಳಿ ವೇಳೆ ಪಟಾಕಿ ಹಚ್ಚಿದರೆ ತೊಂದರೆಯಿಲ್ಲ. ಧಾರ್ಮಿಕ ವಿಧಿ ವಿಧಾನದಿಂದ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿಯನ್ನ ಬ್ಯಾನ್ ಮಾಡಬಾರದು ಎಂದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

Loading...
Unable to load recommendations.
Follow Us