AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾತನಾಡುತ್ತಾರೆ; ಶಾಸಕ ಹುಲಿಗೇರಿ ಎದುರು ಮಹಿಳಾ ಇಂಜಿನಿಯರ್ ಕಣ್ಣೀರು!

ಶಾಸಕ ಡಿ.ಎಸ್.ಹುಲಿಗೇರಿಗೆ ಇಂಜಿನಿಯರ್ ಅಸ್ಮ ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ದೂರು ನೀಡಿದ್ದು, ಪುರಸಭೆ ಅಧ್ಯಕ್ಷರಿಗೆ ಶಾಸಕ ಹುಲಿಗೇರಿ ತರಾಟೆಗೆ ತೆಗೆದುಕೊಂಡರು.

ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾತನಾಡುತ್ತಾರೆ; ಶಾಸಕ ಹುಲಿಗೇರಿ ಎದುರು ಮಹಿಳಾ ಇಂಜಿನಿಯರ್ ಕಣ್ಣೀರು!
ಕಣ್ಣೀರು ಹಾಕಿದ ಮಹಿಳಾ ಇಂಜಿನಿಯರ್
TV9 Web
| Edited By: |

Updated on: Aug 24, 2021 | 11:38 AM

Share

ರಾಯಚೂರು: ಶಾಸಕ ಡಿ.ಎಸ್.ಹುಲಿಗೇರಿ (MLA Hoolageri) ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯುತ್ತಿತ್ತು. ಈ ವೇಳೆ ಶಾಸಕ ಹುಲಿಗೇರಿ ಎದುರು ಮಹಿಳಾ ಇಂಜಿನಿಯರ್ ಕಣ್ಣೀರು ಹಾಕಿದ್ದಾರೆ. ಈ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪುರಸಭೆಯಲ್ಲಿ ನಡೆದಿದೆ. ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ಕಣ್ಣೀರಿಡುತ್ತಲೇ ಶಾಸಕರಿಗೆ ದೂರು ನೀಡಿದ ಮಹಿಳಾ ಇಂಜಿನಿಯರ್, ಅಧ್ಯಕ್ಷೆ ಗದ್ಯಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಮಾತನಾಡುತ್ತಾರೆ. ಅವರ ಮಗ ಪುರಸಭೆಗೆ ಬಂದು ಏಕವಚನದಲ್ಲಿ ಮಾತನಾಡುತ್ತಾನೆ ಅಂತ ಆರೋಪಿಸಿದ್ದಾರೆ.

ಶಾಸಕ ಡಿ.ಎಸ್.ಹುಲಿಗೇರಿಗೆ ಇಂಜಿನಿಯರ್ ಅಸ್ಮ ಲಿಂಗಸುಗೂರು ಪುರಸಭೆ ಅಧ್ಯಕ್ಷೆ ಮತ್ತು ಅವರ ಮಗನ ವಿರುದ್ಧ ದೂರು ನೀಡಿದ್ದು, ಪುರಸಭೆ ಅಧ್ಯಕ್ಷರಿಗೆ ಶಾಸಕ ಹುಲಿಗೇರಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ಜೊತೆ ಈ ರೀತಿಯ ವರ್ತನೆ ಮಾಡಿದರೆ ನಿನ್ನ ಮಗನಿಗೆ ಜೈಲಿಗೆ ಕಳಿಸುತ್ತೇನೆ ಅಂತ ಶಾಸಕ ಡಿ.ಎಸ್.ಹುಲಿಗೇರಿ ಪುರಸಭೆ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದರು. ಈ ಬಾರಿ ಒಂದು ಸಲ ಎಸ್ಕ್ಯೂಸ್ ಮಾಡಿ, ಇನ್ನೊಂದು ಸಲ ಹೀಗೆ ಆದರೆ ಕೇಸ್ ಮಾಡಿ ಅಂತ ಇಂಜಿನಿಯರ್ ಅಸ್ಮಗೆ ಶಾಸಕ ಹುಲಿಗೇರಿ ಹೇಳಿದರು.

ಮುಂದೆ ಇಟ್ಟರೆ ತಿನ್ನುತ್ತೀಯಾ ಎಂದು ಪುರಸಭೆ ಅಧ್ಯಕ್ಷೆ ಗದ್ಯಮ್ಮ ಇಂಜಿನಿಯರ್​ಗೆ ಅವಾಜ್ ಹಾಕಿದ್ದರು. ಈ ಬಗ್ಗೆ ಇಂಜಿನಿಯರ್ ಶಾಸಕರಿಗೆ ತಿಳಿಸಿ ಅವರ ಮುಂದೆ ಕಣ್ಣೀರಾಕಿದ್ದಾರೆ. ಹೀಗಾಗಿ ಪುರಸಭೆ ಅಧ್ಯಕ್ಷೆ ಗದ್ಯಮ್ಮಗೆ ಶಾಸಕ ಡಿ.ಎಸ್.ಹುಲಿಗೇರಿ ಈ ರೀತಿ ಮೊತ್ತೊಮ್ಮೆ ಆದರೆ ಜೈಲಿಗೆ ಕಳುಹಿಸುತ್ತೇನೆ ಅಂತ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ

ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ; ಬಿಎಂಟಿಸಿ ಸೇವೆಯಿಂದ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರು ವಜಾ

ಕಾರ್ಖಾನೆ ರಸ್ತೆಗಾಗಿ ಅಡಕೆ ಮರಗಳ ತೆರವು; ರೈತರಿಗೆ ನೋಟಿಸ್ ನೀಡದೆ ತಿಪಟೂರು ತಹಶಿಲ್ದಾರ್ ಏಕಾಏಕಿ ಕಾರ್ಯಾಚರಣೆ

(A woman engineer is weeping in front of MLA Hoolageri at raichur)

ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ