AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?

ನಿವೃತ್ತ ಎಎಸ್ ಐ ಬರ್ಬರ ಹತ್ಯೆ ಪ್ರಕರಣದ ತನಿಖೆಯ ವೇಳೆ ಹಂತಕನ ಕರಾಳ ಮುಖ ಬಯಲಾಗಿದೆ. ಸ್ವಂತ ಮಗನಿಂದಲೇ ನಿವೃತ್ತ ಎಎಸ್ ಐ ಹತ್ಯೆಯಾಗಿದೆ. ಮದುವೆ ಮಾಡಿಲ್ಲ ಅನ್ನೊ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಆರೋಪ ಮಗನ ಮೇಲೆ ಕೇಳಿ ಬಂದಿದೆ.

ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?
ಸ್ವಂತ ಮಗನಿಂದಲೇ ನಿವೃತ್ತ ಎಎಸ್ಐ ಹತ್ಯೆ, ಕಾರಣ ಏನು ಗೊತ್ತಾ?
TV9 Web
| Edited By: |

Updated on:Feb 11, 2022 | 9:57 AM

Share

ರಾಯಚೂರು: ನಿವೃತ್ತ ಎಎಸ್ ಐ ಬರ್ಬರ ಹತ್ಯೆ ಪ್ರಕರಣದ ತನಿಖೆಯ ವೇಳೆ ಹಂತಕನ ಕರಾಳ ಮುಖ ಬಯಲಾಗಿದೆ. ಸ್ವಂತ ಮಗನಿಂದಲೇ ನಿವೃತ್ತ ಎಎಸ್ ಐ ಹತ್ಯೆಯಾಗಿದೆ. ಮದುವೆ ಮಾಡಿಲ್ಲ ಅನ್ನೊ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದಿರುವ ಆರೋಪ ಮಗನ ಮೇಲೆ ಕೇಳಿ ಬಂದಿದೆ. ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸರು ಇದೀಗ ಆರೋಪಿ ಮಗನನ್ನು ಬಂಧಿಸಿದ್ದಾರೆ. ಜಗದೀಶ್ (38) ಬಂಧಿತ ಆರೋಪಿ.

ಇದೇ ಫೆಬ್ರವರಿ 9 ರ ರಾತ್ರಿ 9 ಗಂಟೆಗೆ ಕೊಲೆ ನಡೆದಿತ್ತು. ಬಸವರಾಜಪ್ಪ(75) ಹತ್ಯೆಯಾಗಿದ್ದ ನಿವೃತ್ತ ಪೊಲೀಸ್​ ಅಧಿಕಾರಿ. ರಾಯಚೂರು ನಗರದ ಗೋಶಾಲೆ ಹಿಂಭಾಗ ಪಾತಕ ಘಟನೆ ನಡೆದಿತ್ತು. ನಿವೃತ್ತ ಎಎಸ್ ಐ ಬಸವರಾಜಪ್ಪಗೆ ಐದು ಜನ ಮಕ್ಕಳು ಇದ್ದಾರೆ. ಮೂರು ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ್ದು, ಹಿರಿಯ ಮಗ ಶಿವರಾಜ್ (40) ಹಾಗೂ ಕಿರಿಯ ಮಗ ಜಗದೀಶ್ (37) ಇಬ್ಬರಿಗೂ ಮದುವೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಿರಿ ಮಗ ಜಗದೀಶ್ ಮಾನಸಿಕವಾಗಿ ಕುಂದಿದ್ದ. ಅದರಿಂದ ಮದ್ಯ ವ್ಯಸನಿಯೂ ಆಗಿಬಿಟ್ಟಿದ್ದ ಜಗದೀಶ್.

ಮದುವೆ ಮಾಡಿಸು ಅಂತಾ ಕಿರಿಯ ಪುತ್ರನ ಕಿರಿಕಿರಿ: ಕಿರಿಯ ಪುತ್ರ ಜಗದೀಶ ತನಗೆ ಮದುವೆ ಮಾಡಿಸುವಂತೆ ಅಪ್ಪನನ್ನು ಒತ್ತಾಯ ಮಾಡುತ್ತಿದ್ದ. ಇದೇ ಕಾರಣಕ್ಕೆ ಎಎಸ್ ಐ ಬಸವರಾಜಪ್ಪ ಹಾಗೂ ಕುಟುಂಬಸ್ಥರು ಊರು ಬಿಟ್ಟಿದ್ದರು. ಇದೇ ಫೆಬ್ರವರಿ 9ಕ್ಕೆ ಚಿಕಿತ್ಸೆಗೆಂದು ಬಸವರಾಜಪ್ಪ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆರೋಪಿ ಮಗ ಜಗದೀಶ್ ಫೋನ್ ಮಾಡಿ ಅಪ್ಪನನ್ನು ಕರೆಸಿಕೊಂಡಿದ್ದ.

ಆಗ ಮತ್ತೆ ಮದುವೆ ವರಾತ ತೆಗೆದು ತನಗೆ ಮದುವೆ ಮಾಡಿಸುವಂತೆ ತಾಕೀತು ಮಾಡಿದ್ದ. ಬಳಿಕ ಕುಡಿಯಲು ಹಣವನ್ನಾದರೂ ಕೊಡು ಅಂತಾನೂ ಗಲಾಟೆ ಮಾಡಿದ್ದಾನೆ. ಆ ವೇಳೆ ಅಪ್ಪ-ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕಿರಿಯ ಮಗ ಜಗದೀಶ್ ಸಿಮೆಂಟ್ ಇಟ್ಟಿಗೆಯಿಂದ ತಂದೆ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: Sidlaghatta: ಶಿಡ್ಲಘಟ್ಟದ ಇತಿಹಾಸದಲ್ಲಿಯೇ ದಂಪತಿಯ ಭೀಕರ ಕೊಲೆ, ಗವಾಕ್ಷಿಯಿಂದ ಇಳಿದು ಕುಕೃತ್ಯ, ನಗನಾಣ್ಯ ದರೋಡೆ

Also Read: ಬಿಆರ್​ಟಿಎಸ್ ಬಸ್​ನಲ್ಲಿ ಮರೆತು ಹೋಗಿದ್ದ 3ಲಕ್ಷದ ಚಿನ್ನಾಭರಣ ವಾಪಸ್ ಕೊಟ್ಟ ಸಿಬ್ಬಂದಿ, ಕಾರ್ಯವೈಖರಿಗೆ ಮೆಚ್ಚುಗೆ

Published On - 9:48 am, Fri, 11 February 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್