AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಮೂರನೇ ಅಲೆ ಮಧ್ಯೆ ಕೆಮ್ಮು,‌ ನೆಗಡಿ, ಕಫ, ಜ್ವರಕ್ಕೆ ಕಂಗಾಲಾದ ರಾಯಚೂರು ಜಿಲ್ಲೆ ಮಕ್ಕಳು, ಪರಿಸ್ಥಿತಿ ಏನು?

ಆತಂಕಕಾರಿ ಕೊರೊನಾ ಮೂರನೆಯ ಅಲೆಯ ಮಧ್ಯೆ ಕೆಮ್ಮು,‌ ನೆಗಡಿ, ಕಫ ಮತ್ತು ಜ್ವರಕ್ಕೆ ರಾಯಚೂರು ಜಿಲ್ಲೆಯ ಮಕ್ಕಳು ಬಸವಳಿದಿದ್ದಾರೆ. ಕೋವಿಡ್ ಮೂರನೇ ಅಲೆ ಮತ್ತು ಓಮಿಕ್ರಾನ್ ಭೀತಿಯ ಮಧ್ಯೆ ನ್ಯುಮೋನಿಯಾ ಕಾಟವೂ ಕಾಡುತ್ತಿದೆ. ಕೊರೊನಾ ಲಕ್ಷಣಗಳು ಹಾಗೂ ನ್ಯುಮೋನಿಯಾ ರೋಗ ಲಕ್ಷಣಗಳು ಒಂದೇ ಆಗಿದ್ದು ರಾಯಚೂರು ಜಿಲ್ಲೆಯ ಶೇಕಡಾ 20 ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣ ಪತ್ತೆಯಾಗಿದೆ.

ಕೊರೊನಾ ಮೂರನೇ ಅಲೆ ಮಧ್ಯೆ ಕೆಮ್ಮು,‌ ನೆಗಡಿ, ಕಫ, ಜ್ವರಕ್ಕೆ ಕಂಗಾಲಾದ ರಾಯಚೂರು ಜಿಲ್ಲೆ ಮಕ್ಕಳು, ಪರಿಸ್ಥಿತಿ ಏನು?
ಕೊರೊನಾ ಮೂರನೇ ಅಲೆ ಮಧ್ಯೆ ಕೆಮ್ಮು,‌ ನೆಗಡಿ, ಕಫ, ಜ್ವರಕ್ಕೆ ಕಂಗಾಲಾದ ರಾಯಚೂರು ಜಿಲ್ಲೆ ಮಕ್ಕಳು, ಪರಿಸ್ಥಿತಿ ಏನು?
TV9 Web
| Updated By: ಸಾಧು ಶ್ರೀನಾಥ್​|

Updated on:Dec 23, 2021 | 9:48 AM

Share

ರಾಯಚೂರು: ಆತಂಕಕಾರಿ ಕೊರೊನಾ ಮೂರನೆಯ ಅಲೆಯ ಮಧ್ಯೆ ಕೆಮ್ಮು,‌ ನೆಗಡಿ, ಕಫ ಮತ್ತು ಜ್ವರಕ್ಕೆ ರಾಯಚೂರು ಜಿಲ್ಲೆಯ ಮಕ್ಕಳು ಬಸವಳಿದಿದ್ದಾರೆ. ಕೋವಿಡ್ ಮೂರನೇ ಅಲೆ ಮತ್ತು ಓಮಿಕ್ರಾನ್ ಭೀತಿಯ ಮಧ್ಯೆ ನ್ಯುಮೋನಿಯಾ ಕಾಟವೂ ಕಾಡುತ್ತಿದೆ. ಕೊರೊನಾ ಲಕ್ಷಣಗಳು ಹಾಗೂ ನ್ಯುಮೋನಿಯಾ ರೋಗ ಲಕ್ಷಣಗಳು ಒಂದೇ ಆಗಿದ್ದು ರಾಯಚೂರು ಜಿಲ್ಲೆಯ ಶೇಕಡಾ 20 ಮಕ್ಕಳಲ್ಲಿ ನ್ಯುಮೋನಿಯಾ ಲಕ್ಷಣ ಪತ್ತೆಯಾಗಿದೆ.

ಇದು ಮೂರನೇ ಅಲೆಯ ಎಚ್ಚರಿಕೆ ಗಂಟೆ ಇದ್ದಿರಬಹುದು ಎಂದೂ ತಜ್ಞರು ಎಚ್ಚರಿಸಿದ್ದಾರೆ. ಇದೇ 2021 ರ ಎಪ್ರಿಲ್ ನಿಂದ ನವೆಂಬರ್ ವರೆಗಿನ ನ್ಯುಮೋನಿಯಾ ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ಒಟ್ಟು 935 ದಾಖಲಾಗಿವೆ.

ಸಿಂಧನೂರು-446 ರಾಯಚೂರು-318 ದೇವದುರ್ಗ-150 ಮಾನ್ವಿ-15 ಲಿಂಗಸುಗೂರು-6 ಕೇಸ್ ದಾಖಲಾಗಿದೆ.

ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳಿಗೆ ನ್ಯುಮೋನಿಯಾ ಕಂಟಕವಾಗಿದ್ದು, ಬಹುತೇಕ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಫುಲ್ ಆಗಿವೆ. ಈ ಬಗ್ಗೆ ಟಿವಿ9 ಗೆ ಪ್ರತಿಕ್ರಿಯಿಸಿದ ರಿಮ್ಸ್ ಆಸ್ಪತ್ರೆಯ ಮಕ್ಕಳ‌ ತಜ್ಞರು ಕೆಮ್ಮು, ನೆಗಡಿ, ಜ್ವರದಂತಹ ಕೋವಿಡ್ ಲಕ್ಷಣಗಳನ್ನೇ ಈ ನ್ಯುಮೋನಿಯಾ ಸಹ ಹೊಂದಿದೆ. ಜ್ವರ, ಕೆಮ್ಮು, ನೆಗಡಿ ಇದ್ದರೆ ನಿರ್ಲಕ್ಷ್ಯ ಬೇಡ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ಸಲಹೆ ಮಾಡಿದ್ದಾರೆ. ನ್ಯುಮೋನಿಯಾ ಬದಲು ಕೊರೊನಾ ಇದ್ದರೂ ಇರಬಹುದು ಎಂದು ಮಕ್ಕಳ ತಜ್ಞರು ಕಳವಳ ವ್ತಕ್ತಪಡಿಸಿದ್ದಾರೆ.

ಇದನ್ನೂ ಓದಿ

ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್​ ಆನಂದ್​ ಪುತ್ರಿಯ ಮಸ್ತ್​ ಮಾತುಕತೆ

India vs South Africa: ಕ್ಲೀನ್ ಬೌಲ್ಡ್: ಸ್ಟ್ಯಾಂಡ್ ಬೈ ಬೌಲರ್​ನ ಬೌಲಿಂಗ್​ಗೂ ಬ್ಯಾಟಿಂಗ್ ಮಾಡಲು ಪರದಾಡಿದ ಅಜಿಂಕ್ಯಾ ರಹಾನೆ

Published On - 9:37 am, Thu, 23 December 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!