AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ದೇವಸ್ಥಾನ ತೆರವುಗೊಳಿಸಿ, ಶಾಲೆ ನಿರ್ಮಾಣಕ್ಕೆ ಸಂಘಟನೆಗಳ ಪಟ್ಟು; ಕೋಮು ಗಲಭೆ ಆತಂಕ

ರಾಯಚೂರಿನಲ್ಲಿ ವಿವಾದಕ್ಕೆ ಕಾರಣವಾದ ದೇವಸ್ಥಾನ ತೆರವು ಪ್ರಕರಣ. ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಸಂತೋಷ ನಗರದಲ್ಲಿರುವ ಸಿಎ ಸೈಟ್ ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ ಆದೇಶಸಿತ್ತು. ಇದೇ ಸ್ಥಳದಲ್ಲಿ ಶಿವ ಲಿಂಗ ದೇವಸ್ಥಾನ ಇದೆ. ಸದ್ಯ ಈಗ ದೇವಸ್ಥಾನ ತೆರವುಗೊಳಿಸಿ ಶಾಲೆ ಕಟ್ಟುವ ವಿಚಾರಕ್ಕೆ ಸಂಘಟನೆಗಳ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದೆ.

ರಾಯಚೂರು: ದೇವಸ್ಥಾನ ತೆರವುಗೊಳಿಸಿ, ಶಾಲೆ ನಿರ್ಮಾಣಕ್ಕೆ ಸಂಘಟನೆಗಳ ಪಟ್ಟು; ಕೋಮು ಗಲಭೆ ಆತಂಕ
ದೇವಸ್ಥಾನ ತೆರವುಗೊಳಿಸಿ, ಶಾಲೆ ನಿರ್ಮಾಣಕ್ಕೆ ಸಂಘಟನೆಗಳ ಪಟ್ಟು
ಭೀಮೇಶ್​​ ಪೂಜಾರ್
| Edited By: |

Updated on: Feb 08, 2024 | 1:30 PM

Share

ರಾಯಚೂರು, ಫೆ.08; ಲೋಕಸಭಾ ಚುನಾವಣೆ (Lok Sabha Election)ಸಮಯದಲ್ಲೇ ಗಡಿ ಜಿಲ್ಲೆ ರಾಯಚೂರಿನಲ್ಲಿ (Raichur) ದೇವಸ್ಥಾನ ದಂಗಲ್ ಬುಗಿಲೇಳುವ ಲಕ್ಷಣಗಳು ಗೋಚರಿಸುತ್ತಿದೆ. ದೇವಸ್ಥಾನ ತೆರವು ವಿಚಾರಕ್ಕಾಗಿ ಒಂದು ಕೋಮಿನ ಜನ ದೇವಸ್ಥಾನ ತೆರವುಗೊಳಿಸೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದೇವಸ್ಥಾನ ತೆರವು ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ರಾಯಚೂರು ನಗರದ ಚಂದ್ರಬಂಡಾ ರಸ್ತೆಯ ಸಂತೋಷ ನಗರದಲ್ಲಿರುವ ಸಿಎ ಸೈಟ್ ನಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆ ಆದೇಶಸಿತ್ತು. ಇದೇ ಸ್ಥಳದಲ್ಲಿ ಶಿವ ಲಿಂಗ ದೇವಸ್ಥಾನ ಇದೆ. ಹೀಗಾಗಿ ಆ ದೇವಸ್ಥಾನ ತೆರುವುಗೊಳಿಸಬೇಕು ಅಂತ ಆದೇಶಿಸಲಾಗಿತ್ತು. ಇದೇ ವಿಚಾರದ ವಿರುದ್ಧ ಕಾಲೋನಿ ನಿವಾಸಿಗಳು ದೇವಸ್ಥಾನ ತೆರವುಗೊಳಿಸದಂತೆ ಒತ್ತಾಯಿಸುತ್ತಿದ್ದಾರೆ.

ದೇವಸ್ಥಾನ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತವಾದ ಬೆನ್ನಲೆ ವಿವಿಧ ಸಂಘಟನೆಗಳು ದೇವಸ್ಥಾನ ತೆರವುಗೊಳಿಸಲೇಬೇಕು ಅಂತ ಪಟ್ಟು ಹಿಡಿದಿವೆ.ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಸಚಿವರಿಗೂ ದೂರು ನೀಡಿದ್ದಾರೆ. ದೇವಸ್ಥಾನ ತೆರವುಗೊಳಿಸೋ ಬಗ್ಗೆ ಸ್ಥಳೀಯರ ವಾದ ಬೇರೆ ಇದೆ. ಈ ಹಿಂದೆ ದೇವಸ್ಥಾನ ಇರೋ ಸ್ಥಳದಲ್ಲಿ ಉರ್ದು ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಅಂತ ಶಾಲೆ ಕಟ್ಟಲು ವಿರೋಧಿಸಿದ್ದರು. ಆದರೆ ಅಧಿಕಾರಿಗಳು ಅಲ್ಲಿ ಉರ್ದು ಶಾಲೆಯಲ್ಲ, ಕನ್ನಡ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಅಂತ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳೀಯರು ಈಗ, ದೇವಸ್ಥಾನ ತೆರವುಗೊಳಿಸದೇ ದೇವಸ್ಥಾನದ ಪಕ್ಕ ಕನ್ನಡ ಶಾಲೆ ನಿರ್ಮಾಣ ಮಾಡಿ ಅಂತ ಹೇಳಿದ್ದಾರೆ. ಆದರೆ ಸ್ಥಳೀಯರ ನಿರ್ಧಾರಕ್ಕೆ ವಿವಿಧ ಸಂಘಟನೆಗಳು ಕೆರಳಿವೆ. ಯಾವುದೇ ಕಾರಣಕ್ಕೂ ದೇವಸ್ಥಾನ ತೆರವುಗೊಳಿಸದೇ ಕಟ್ಟಡ ನಿರ್ಮಾಣ ಮಾಡಬಾರ್ದು. ಕೂಡಲೇ ದೇವಸ್ಥಾನ ತೆರವುಗೊಳಿಸಿ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Raichur News Some Organization Demands For Clear Temple And Build School In That Place

ದೇವಸ್ಥಾನ ಜಾಗ

ಇದನ್ನೂ ಓದಿ: ತುಮಕೂರು ಬಿಜೆಪಿ ಟಿಕೆಟ್​ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?

ಈ ಮಧ್ಯೆ ದೇವಸ್ಥಾನದ ತೆರವು ವಿಚಾರ ಕೋಮು ಗಲಭೆಗೆ ಸಾಕ್ಷಿಯಾಗೋ ಲಕ್ಷಣಗಳಿವೆ. ಇದೆ ಅನುಮಾನದಿಂದ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಸೂಕ್ಷ್ಮವಾಗಿ ಈ ಪ್ರಕರಣವನ್ನು ಪರಿಗಣಿಸಿವೆ. ಇದೇ ಕಾರಣಕ್ಕೆ ರಾಯಚೂರು ನಗರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ದೇವಸ್ಥಾನ ತೆರವುಗೊಳಿಸದೇ ಇರೋದಕ್ಕೆ ಮುಂದಾಗಿದ್ದಾರೆ. ಧರ್ಮ ಸಂಘರ್ಷ ಶಂಕೆ ಬೆನ್ನಲ್ಲೇ ಶಾಲಾ ಕಟ್ಟಡ ಬೇರೆಡೆ ನಿರ್ಮಿಸಲು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮುಂದಾಗಿದ್ದು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ದೇವಸ್ಥಾನವಿರೊ ಸ್ಥಳದಲ್ಲಿ ನನ್ನ ಗಮನಕ್ಕೆ ಇಲ್ಲದೇ ಶಾಲೆ ಕಟ್ಟಡ ನಿರ್ಮಾಣಕ್ಕೆ ಆದೇಶ ಆಗಿದೆ. ಆ ಸ್ಥಳದಲ್ಲಿ ಸಮಸ್ಯೆ ಇದೆ. ಕೂಡಲೇ ಆ ಆದೇಶ ತಡೆಹಿಡಿಯಿರಿ ಅಂತ ಪತ್ರ ಬರೆದಿದ್ದಾರೆ. ಆದರೆ ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್