AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು

ಸದ್ಯ ಮಾರುಕಟ್ಟೆಗಿಂದ ಸರ್ಕಾರದ ತೊಗರಿ ಖರೀದಿ ಕೇಂದ್ರಗಳಲ್ಲೇ ಹೆಚ್ಚಿನ ದರವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್​ಗೆ 4 ಸಾವಿರದಿಂದ 5 ಸಾವಿರದವರೆಗೆ ಬೆಲೆ ಇದ್ದರೆ, ಸರ್ಕಾರದ ಖರೀದಿ ಕೇಂದ್ರದಲ್ಲಿ 6500 ರೂ. ಇದೆ. ಅದರಲ್ಲೂ ಖರೀದಿ ಕೇಂದ್ರಗಳಲ್ಲಿ ತೊಗರಿಯ ಗುಣಮಟ್ಟವನ್ನು ಪರೀಕ್ಷೆ ಮಾಡುವ ಮೂಲಕ ದರದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ ಎಂದು ತೊಗರಿ ಬೆಳೆದ ರೈತ ಚಂದ್ರಶೇಖರ್ ಆರೋಪಿಸುತ್ತಿದ್ದಾರೆ.

ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು
ತೊಗರಿ
TV9 Web
| Edited By: |

Updated on:Feb 06, 2022 | 9:00 AM

Share

ರಾಯಚೂರು: ಅಕಾಲಿಕ ಮಳೆಯಿಂದ ತತ್ತರಿಸಿದ್ದ ರೈತರಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ರಾಯಚೂರು ಜಿಲ್ಲೆಯ ರೈತರು ತೊಗರಿ ಬೆಳೆಯನ್ನು(Toor dal) ನಂಬಿಕೊಂಡು ಮಾಡಿದ ಸಾಲ ತೀರತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಭರ್ಜರಿ ಫಸಲಿನ ಮಧ್ಯೆ, ಸೂಕ್ತ ಬೆಲೆ ಸಿಗದೇ ರೈತರು(Farmers) ಈಗ ಮತ್ತೆ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ತೊಗರಿ ಬೆಳೆದ ರೈತರಿಗೆ ದರ ಕುಸಿತದ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗಿದೆ. ತೊಗರಿ ಕಟಾವಿನ ಬೆನ್ನಲ್ಲೆ ಈಗ ಸರ್ಕಾರದಿಂದ(State Government) ಜಿಲ್ಲೆಯಾದ್ಯಂತ ಒಟ್ಟು 61 ತೊಗರಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು 11,424 ರೈತರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಆದರೆ ಇಲ್ಲಿವರೆಗೆ ಕೇವಲ 31 ಜನ ರೈತರಿಂದ ಮಾತ್ರ ತೊಗರಿ ಖರೀದಿಸಲಾಗಿದೆ. ಹೀಗೆ ತೊಗರಿ ಖರೀದಿ ಪ್ರಮಾಣ ಕುಂಠಿತವಾಗುವುದಕ್ಕೆ ಕಾರಣ ತೊಗರಿ ದರ ಕುಸಿದಿರುವುದು. ಇದು ಸಹಜವಾಗಿಯೇ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಸದ್ಯ ಮಾರುಕಟ್ಟೆಗಿಂದ ಸರ್ಕಾರದ ತೊಗರಿ ಖರೀದಿ ಕೇಂದ್ರಗಳಲ್ಲೇ ಹೆಚ್ಚಿನ ದರವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್​ಗೆ 4 ಸಾವಿರದಿಂದ 5 ಸಾವಿರದವರೆಗೆ ಬೆಲೆ ಇದ್ದರೆ, ಸರ್ಕಾರದ ಖರೀದಿ ಕೇಂದ್ರದಲ್ಲಿ 6500 ರೂ. ಇದೆ. ಅದರಲ್ಲೂ ಖರೀದಿ ಕೇಂದ್ರಗಳಲ್ಲಿ ತೊಗರಿಯ ಗುಣಮಟ್ಟವನ್ನು ಪರೀಕ್ಷೆ ಮಾಡುವ ಮೂಲಕ ದರದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ ಎಂದು ತೊಗರಿ ಬೆಳೆದ ರೈತ ಚಂದ್ರಶೇಖರ್ ಆರೋಪಿಸುತ್ತಿದ್ದಾರೆ.

ಸರ್ಕಾರ ಕೂಡ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಖರೀದಿ ಕೇಂದ್ರದಲ್ಲಿ ಹೆಚ್ಚಿನ ದರವಿದ್ದರೂ ಅದರಿಂದ ಯಾವ ಲಾಭಾನೂ ಇಲ್ಲ. ಬೀಜ, ಗೊಬ್ಬರ, ಆಳು-ಕಾಳು ಅಂತೆಲ್ಲಾ ಸೇರಿ ಎಕರೆಗೆ ಸುಮಾರು 20-30 ಸಾವಿರ ರೂಪಾಯಿ ಹಣ ಖರ್ಚಾಗುತ್ತದೆ. ಸರ್ಕಾರ ಕೊಡುವ 6500 ರೂಪಾಯಿ ಬರೀ ಗಾಡಿ ಬಾಡಿಗೆಗೆ ಸಾಕಾಗಲ್ಲ. ವಿಷ ಕುಡಿಯುವುದೊಂದೆ ಈಗ ಬಾಕಿ ನಮಗೆ ಎಂದು ರೈತ ನರಸಿಂಹ ಕಣ್ಣೀರಿಟ್ಟಿದ್ದಾರೆ.

ತೊಗರಿ ದರವನ್ನು ಕ್ವಿಂಟಲ್​ಗೆ ಕನಿಷ್ಠ 7 ಸಾವಿರದಿಂದ 8 ಸಾವಿರಕ್ಕೆ ಏರಿಸಬೇಕು. ಆಗ ಮಾತ್ರ ಮಾಡಿದ ಸಾಲ ತೀರತ್ತದೆ. ಇನ್ನೂ ಕೆಲ ತೊಗರಿಯ ಗುಣಮಟ್ಟ ವ್ಯತ್ಯಾಸವಾಗುವ ಕಾರಣ, ಅಕಾಲಿಕ ಮಳೆಯಿಂದಲೂ ಇದರಿಂದ ಬೆಳೆಗೆ ಹಾನಿಯಾಗಿ ಸಮಸ್ಯೆ ಎದುರಾಗಿದೆ. ಆ ಬಗ್ಗೆಯೂ ಗಮನ ಹರಿಸಿ ಸೂಕ್ತ ದರ ನಿಗದಿ ಪಡಿಸಿ ಎಂದು ತೊಗರಿ ಬೆಳೆದ ರೈತರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ವರದಿ: ಭೀಮೇಶ್ ಪೂಜಾರ್

ಇದನ್ನೂ ಓದಿ:

ಸರ್ಕಾರಿ ಬೆಂಬಲ ಬೆಲೆಯಡಿ ಇಂದಿನಿಂದ ತೊಗರಿ ಖರೀದಿ ಆರಂಭ

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ

Published On - 8:59 am, Sun, 6 February 22

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ