AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ: ಬಿರು ಬಿಸಿಲಿಗೆ 400‌ ಕೋಟಿ ರೂ ಮೌಲ್ಯದ ಮಾವು ಬೆಳೆ ನಾಶ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಿರು ಬಿಸಿಲಿಗೆ ಮಾವು ಒಣಗಿ ಕೈಕೊಟ್ಟಿದೆ. 400‌ ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿ ಆಗಿದ್ದು, ಸಾಲ ಮಾಡಿ ಮಾವು ಬೆಳೆದ ರೈತರ ಬಾಳು ದುಃಸ್ಥಿತಿಗೆ ತಲುಪಿದೆ. ರಾಮನಗರ ಮಾವು ರೈತರ ಸ್ಥಿತಿ ಅರಿಯಲು ಎನ್​ಡಿಆರ್​ಎಫ್​ ತಂಡದಿಂದ ಇಡೀ ಜಿಲ್ಲೆ‌ ಸುತ್ತಾಡಿ ಜಿಲ್ಲಾಡಳಿತ ವರದಿ ಸಿದ್ಧಪಡಿಸಲಾಗಿದೆ.

Ramanagara: ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ: ಬಿರು ಬಿಸಿಲಿಗೆ 400‌ ಕೋಟಿ ರೂ ಮೌಲ್ಯದ ಮಾವು ಬೆಳೆ ನಾಶ
ಮಾವು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Edited By: |

Updated on:May 02, 2024 | 1:38 PM

Share

ರಾಮನಗರ, ಮೇ 2: ನದಿಗಳು ಬತ್ತುತ್ತಿವೆ. ಕೆರೆಗಳು ಖಾಲಿ ಆಗಿವೆ. ಕುಡಿಯುವ ನೀರಿಗೂ ಪರಡುವಂತಹ ಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಬೆಳೆ ಒಣಗಿ ಹೋಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಬಿರು ಬಿಸಿಲಿಗೆ ಮಾವು (Mango) ಒಣಗಿ ಕೈಕೊಟ್ಟಿದೆ. 400‌ ಕೋಟಿ ರೂ. ಅಧಿಕ ಮೌಲ್ಯದ ಬೆಳೆ ಹಾನಿ ಆಗಿದ್ದು, ಸಾಲ ಮಾಡಿ ಮಾವು ಬೆಳೆದ ರೈತರ ಬಾಳು ದುಃಸ್ಥಿತಿಗೆ ತಲುಪಿದೆ. ರಾಮನಗರ (Ramanagara) ಮಾವು ರೈತರ ಸ್ಥಿತಿ ಅರಿಯಲು ಎನ್​ಡಿಆರ್​ಎಫ್​ ತಂಡದಿಂದ ವರದಿ ತಯಾರಿ ಮಾಡಿದ್ದು, ಇಡೀ ಜಿಲ್ಲೆ‌ ಸುತ್ತಾಡಿ ಜಿಲ್ಲಾಡಳಿತ ವರದಿ ಸಿದ್ಧ ಪಡಿಸಿದೆ.

ಬೆಳೆನಾಶಕ್ಕೆ ಹಮಮಾನ ವೈಪರಿತ್ಯವೇ ಕಾರಣ

ಒಟ್ಟು 400‌ ಕೋಟಿಗೂ ಅಧಿಕ ಮೌಲ್ಯದ ಬೆಳೆ ನಾಶವಾಗಿದ್ದು, ಬೆಳೆನಾಶಕ್ಕೆ ಹವಾಮಾನ ವೈಪರಿತ್ಯವೇ ಕಾರಣ ಎಂದು ವರದಿ ನೀಡಲಾಗಿದೆ. ಸದ್ಯ ಬೆಳೆ‌ನಾಶದ ಒಟ್ಟು ವರದಿ ಜಿಲ್ಲಾಧಿಕಾರಿ ಕಚೇರಿ ಸೇರಿದೆ. ಬಳಿಕ ರಾಜ್ಯ‌ ಸರಕಾರಕ್ಕೆ ವರದಿ ಒಪ್ಪಿಸಲಾಗುವುದು.

ಇದನ್ನೂ ಓದಿ: Viral Video: ಸರಳತೆಯ ಸಾಹುಕಾರ, ವಿದ್ಯಾರ್ಥಿನಿಗೆ ತನ್ನ ಆಸನ ಬಿಟ್ಟುಕೊಟ್ಟ ಬಾಗಲಕೋಟೆ ಜಿ.ಪಂ ಸಿಇಒ

ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್​ ಕೂಡಲೇ‌ ನೆರವಿಗೆ ಬರುವಂತೆ ವಿಮೆ ಕಂಪನಿಗಳಿಗೂ ಜಿಲ್ಲಾಡಳಿತ ಪತ್ರ ಬರೆದಿದ್ದು, ವಿಮೆ ಹಣ ನೀಡಿ ರೈತರಿಗೆ ಆತ್ಮ ಸ್ಥೈರ್ಯ ತುಂಬಲು ಜಿಲ್ಲಾಡಳಿತ ಪ್ರಯತ್ನ ನಡೆಸಿದೆ.

ಮಾವು ಬೆಳೆದ ಶೇಕಡಾ ನೂರರ ಪೈಕಿ ಕೇವಲ 10 ರಿಂದ 15% ಮಾತ್ರ ಇಳುವರಿ ಸಿಗುತ್ತಿದೆ. ಒಟ್ಟು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇಳುವರಿಗೆ ಬಂದ ಮಾವಿಗೂ ಬೇಡಿಕೆ ಕುಸಿದಿದೆ. ಬಿಸಿಲಿನ ಪರಿಣಾಮ, ಫಂಗಸ್​ನಿಂದ ಮಾವಿನಕಾಯಿ ಕೂಡಿವೆ. ರಾಮನಗರ ರೈತರು ಅತ್ಯಂತ ರುಚಿ ಮತ್ತು ವಿವಿಧ ಪ್ರಕಾರ ಮಾವು ಬೆಳೆಯುತ್ತಿದ್ದರು. ರಾಜ್ಯ ಮಾತ್ರವಲ್ಲದೆ ವಿದೇಶಕ್ಕೂ ರಫ್ತಾಗುತ್ತಿತ್ತು.

ಇದನ್ನೂ ಓದಿ: Karnataka Weather: ಮುಂದಿನ 3 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ಹೆಚ್ಚಲಿದೆ ಗರಿಷ್ಠ ತಾಪಮಾನ, ರೆಡ್​ ಅಲರ್ಟ್​

ಮುಂಬೈ ವ್ಯಾಪಾರಸ್ಥರು ಲಕ್ಷಾಂತರ ಟನ್ ಆಮದು ಮಾಡಿಕೊಳ್ಳುತ್ತಿದ್ದರು. ಅನೇಕ ಮಲ್ಟಿ ನ್ಯಾಶನಲ್​ ಕಂಪನಿಗಳಿಗೆ ರಾಮನಗರ ಮಾವು ರಫ್ತಾಗುತ್ತಿತ್ತು. ಮಳೆ ಕೈಕೊಟ್ಟ ಹಿನ್ನೆಲೆ ಕಂಡು ಕೇಳರಿಯದ ಬರಗಾಲ ಆವರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:35 pm, Thu, 2 May 24

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್