ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿ ಕಾಲಿಗೆ ವಾಲಿಬಾಲ್ ಟಚ್ ಆದ ಕಾರಣ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ರಾಹುಲ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಮಾಡಿದ್ದಾನೆ.

ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
Follow us
| Updated By: ಆಯೇಷಾ ಬಾನು

Updated on: Sep 19, 2023 | 9:41 AM

ರಾಮನಗರ, ಸೆ. 19: ಹತ್ತನೇ ತರಗತಿ ವಿದ್ಯಾರ್ಥಿ(Students) 9ನೇ ತರಗತಿ ವಿದ್ಯಾರ್ಥಿಗೆ ರಾಡ್​ನಿಂದ‌ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ರಾಹುಲ್ (14) ಹಲ್ಲೆಗೊಳಗಾದ ವಿದ್ಯಾರ್ಥಿ. ಪುನೀತ್ ಗೌಡ ಎಂಬ ವಿದ್ಯಾರ್ಥಿ ಮೇಲೆ ದೂರು ದಾಖಲಾಗಿದೆ. ಸೆ.12ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 10ನೇ ತರಗತಿ ಓದುತ್ತಿರುವ ಪುನೀತ್, ಶಾಲೆಯ ಚುನಾವಣೆಯಲ್ಲಿ ಪ್ರಧಾನಿ ಪಟ್ಟ ಗಿಟ್ಟಿಸಿಕೊಂಡಿದ್ದ. ಅಲ್ಲಿಂದ ಶಾಲೆಯಲ್ಲಿ ತನ್ನ ಹಿಡಿತ ಸಾಧಿಸಲು ಶುರು ಮಾಡಿದ್ದ. ಸದ್ಯ ಇಬ್ಬರು ವಿದ್ಯಾರ್ಥಿಗಳ ನಡುವೆ ಚಿಕ್ಕ ಗಲಾಟೆಯಾಗಿದ್ದು ಹಲ್ಲೆ ನಡೆದಿದೆ.

ಪುನೀತ್ ಶಾಲೆಯ ಪ್ರಧಾನಿ ಎಂಬ ಸೊಕ್ಕಿನಲ್ಲಿ ತಾನು ಏನೇ ಮಾಡಿದ್ರು ಯಾರೂ ತನ್ನ ವಿರುದ್ಧ ಮಾತಾಡಬಾರದು ಅಂತ ವಾರ್ನಿಂಗ್ ಕೊಟ್ಟಿದ್ದನಂತೆ. ಸೆ.12ರ ರಾತ್ರಿ ಊಟದ ಬಳಿಕ ರಾಹುಲ್ ವಾಲಿಬಾಲ್ ಆಡಲು ತೆರಳಿದ್ದ. ರಾಹುಲ್ ತೆರಳುವ ದಾರಿಯಲ್ಲಿ ಪುನೀತ್ ಕೂತಿದ್ದ. ಈ ವೇಳೆ ನನ್ನ ಕಾಲಿಗೆ ಏನಾದ್ರು ವಾಲಿಬಾಲ್ ಟಚ್ ಆದರೆ ಪರಿಣಾಮ ನೆಟ್ಟಗಿರಲ್ಲ ಎಂದು ರಾಹುಲ್​ಗೆ ಬವಾರ್ನಿಂಗ್ ಕೊಟ್ಟಿದ್ದಾನೆ. ಆಟ ಆಡುವ ವೇಳೆ ಅಜಾನಕ್ ಆಗಿ ಪುನೀತ್ ಕಾಲಿಗೆ ವಾಲಿಬಾಲ್ ಟಚ್ ಆಗಿದೆ. ಇದರಿಂದ ಕೋಪಗೊಂಡ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಕೊಟ್ಟಿದ್ದಾನೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನ ಮೇಲೆ ಹಲ್ಲೆ,‌ ರೌಡಿಶೀಟರ್ ಮನೆಗೆ ದಾಳಿ

ಇನ್ನು ಹಲ್ಲೆ ನಂತರವೂ ರಾಹುಲ್ ಮೇಲೆ ಪುನೀತ್ ದಬ್ಬಾಳಿಕೆ ಮುಂದುವರೆದಿದ್ದು ಮಾನಸಿಕವಾಗಿ ಕುಗ್ಗಿದ್ದ ರಾಹುಲ್ ಕೊನೆಗೂ ತನ್ನ ತಂದೆ ಬಳಿ ತನ್ನ ಮೇಲಿನ ಹಲ್ಲೆ ಬಗ್ಗೆ ತಿಳಿಸಿದ್ದಾನೆ. ಅಲ್ಲದೆ ಹಲ್ಲೆ ಬಳಿಕ ತಾನೇ ಬಿದ್ದೆ ಅಂತ ಹೇಳು ಎಂದು ಪುನೀತ್, ರಾಹುಲ್​ಗೆ ಐಡಿಯಾ ಕೊಟ್ಟಿದ್ದ ಜೊತೆಗೆ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರು ಕೂಡ ಹಲ್ಲೆಯ ವಿಚಾರ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಟ್ ಮೇಲಿಂದ‌‌ ಬಿದ್ದೆ ಅಂತ ಹೇಳು, ಇಲ್ದಿದ್ರೆ ಚೆನ್ನಾಗಿರಲ್ಲ ಅಂತ ಪ್ರಾಂಶುಪಾಲರು ಬೆದರಿಕೆ ಹಾಕಿದ್ದರಂತೆ. ಹಲ್ಲೆ ವಿಚಾರ ಮನೆಯಲ್ಲಿ ತಿಳಿಸದ ಕಾರಣ ಪುನೀತ್ ಮತ್ತೆ ರ‍್ಯಾಗಿಂಗ್‌ ಶುರುಮಾಡಿದ್ದನಂತೆ. ಸದ್ಯ ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೂರು ದಾಖಲಿಸಿಕೊಂಡು ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!