AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿ ಕಾಲಿಗೆ ವಾಲಿಬಾಲ್ ಟಚ್ ಆದ ಕಾರಣ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ರಾಹುಲ್ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಮಾಡಿದ್ದಾನೆ.

ವಾಲಿಬಾಲ್ ಟಚ್ ಆಯ್ತು ಎಂದು ಜಗಳ; ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
ರಾಡ್​ನಿಂದ ವಿದ್ಯಾರ್ಥಿಯಿಂದ ಮತ್ತೊಂದು ವಿದ್ಯಾರ್ಥಿ ಮೇಲೆ ಹಲ್ಲೆ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಆಯೇಷಾ ಬಾನು

Updated on: Sep 19, 2023 | 9:41 AM

ರಾಮನಗರ, ಸೆ. 19: ಹತ್ತನೇ ತರಗತಿ ವಿದ್ಯಾರ್ಥಿ(Students) 9ನೇ ತರಗತಿ ವಿದ್ಯಾರ್ಥಿಗೆ ರಾಡ್​ನಿಂದ‌ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ರಾಹುಲ್ (14) ಹಲ್ಲೆಗೊಳಗಾದ ವಿದ್ಯಾರ್ಥಿ. ಪುನೀತ್ ಗೌಡ ಎಂಬ ವಿದ್ಯಾರ್ಥಿ ಮೇಲೆ ದೂರು ದಾಖಲಾಗಿದೆ. ಸೆ.12ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 10ನೇ ತರಗತಿ ಓದುತ್ತಿರುವ ಪುನೀತ್, ಶಾಲೆಯ ಚುನಾವಣೆಯಲ್ಲಿ ಪ್ರಧಾನಿ ಪಟ್ಟ ಗಿಟ್ಟಿಸಿಕೊಂಡಿದ್ದ. ಅಲ್ಲಿಂದ ಶಾಲೆಯಲ್ಲಿ ತನ್ನ ಹಿಡಿತ ಸಾಧಿಸಲು ಶುರು ಮಾಡಿದ್ದ. ಸದ್ಯ ಇಬ್ಬರು ವಿದ್ಯಾರ್ಥಿಗಳ ನಡುವೆ ಚಿಕ್ಕ ಗಲಾಟೆಯಾಗಿದ್ದು ಹಲ್ಲೆ ನಡೆದಿದೆ.

ಪುನೀತ್ ಶಾಲೆಯ ಪ್ರಧಾನಿ ಎಂಬ ಸೊಕ್ಕಿನಲ್ಲಿ ತಾನು ಏನೇ ಮಾಡಿದ್ರು ಯಾರೂ ತನ್ನ ವಿರುದ್ಧ ಮಾತಾಡಬಾರದು ಅಂತ ವಾರ್ನಿಂಗ್ ಕೊಟ್ಟಿದ್ದನಂತೆ. ಸೆ.12ರ ರಾತ್ರಿ ಊಟದ ಬಳಿಕ ರಾಹುಲ್ ವಾಲಿಬಾಲ್ ಆಡಲು ತೆರಳಿದ್ದ. ರಾಹುಲ್ ತೆರಳುವ ದಾರಿಯಲ್ಲಿ ಪುನೀತ್ ಕೂತಿದ್ದ. ಈ ವೇಳೆ ನನ್ನ ಕಾಲಿಗೆ ಏನಾದ್ರು ವಾಲಿಬಾಲ್ ಟಚ್ ಆದರೆ ಪರಿಣಾಮ ನೆಟ್ಟಗಿರಲ್ಲ ಎಂದು ರಾಹುಲ್​ಗೆ ಬವಾರ್ನಿಂಗ್ ಕೊಟ್ಟಿದ್ದಾನೆ. ಆಟ ಆಡುವ ವೇಳೆ ಅಜಾನಕ್ ಆಗಿ ಪುನೀತ್ ಕಾಲಿಗೆ ವಾಲಿಬಾಲ್ ಟಚ್ ಆಗಿದೆ. ಇದರಿಂದ ಕೋಪಗೊಂಡ ಪುನೀತ್, ಸೊಳ್ಳೆ ಪರದೆ ಹಾಕಲು ಅಳವಡಿಸಲಾಗಿದ್ದ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಹೊಡೆದಿರೋ ವಿಚಾರ ಪೋಷಕರಿಗೆ ತಿಳಿಸಿದ್ರೇ ಅಷ್ಟೇ. ಗೊತ್ತಲ್ಲ‌ ಇಲ್ಲಿ ನಾನೇ ಪ್ರಧಾನ ಮಂತ್ರಿ, ಇಲ್ಲಿ ನಂದೇ ರೂಲ್ಸ್ ಅಂತ ವಾರ್ನಿಂಗ್ ಕೊಟ್ಟಿದ್ದಾನೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ನಂಬರ್ ಕೇಳಿದ ಸ್ನೇಹಿತನ ಮೇಲೆ ಹಲ್ಲೆ,‌ ರೌಡಿಶೀಟರ್ ಮನೆಗೆ ದಾಳಿ

ಇನ್ನು ಹಲ್ಲೆ ನಂತರವೂ ರಾಹುಲ್ ಮೇಲೆ ಪುನೀತ್ ದಬ್ಬಾಳಿಕೆ ಮುಂದುವರೆದಿದ್ದು ಮಾನಸಿಕವಾಗಿ ಕುಗ್ಗಿದ್ದ ರಾಹುಲ್ ಕೊನೆಗೂ ತನ್ನ ತಂದೆ ಬಳಿ ತನ್ನ ಮೇಲಿನ ಹಲ್ಲೆ ಬಗ್ಗೆ ತಿಳಿಸಿದ್ದಾನೆ. ಅಲ್ಲದೆ ಹಲ್ಲೆ ಬಳಿಕ ತಾನೇ ಬಿದ್ದೆ ಅಂತ ಹೇಳು ಎಂದು ಪುನೀತ್, ರಾಹುಲ್​ಗೆ ಐಡಿಯಾ ಕೊಟ್ಟಿದ್ದ ಜೊತೆಗೆ ಮೊರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲರು ಕೂಡ ಹಲ್ಲೆಯ ವಿಚಾರ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಟ್ ಮೇಲಿಂದ‌‌ ಬಿದ್ದೆ ಅಂತ ಹೇಳು, ಇಲ್ದಿದ್ರೆ ಚೆನ್ನಾಗಿರಲ್ಲ ಅಂತ ಪ್ರಾಂಶುಪಾಲರು ಬೆದರಿಕೆ ಹಾಕಿದ್ದರಂತೆ. ಹಲ್ಲೆ ವಿಚಾರ ಮನೆಯಲ್ಲಿ ತಿಳಿಸದ ಕಾರಣ ಪುನೀತ್ ಮತ್ತೆ ರ‍್ಯಾಗಿಂಗ್‌ ಶುರುಮಾಡಿದ್ದನಂತೆ. ಸದ್ಯ ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೂರು ದಾಖಲಿಸಿಕೊಂಡು ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ರಾಮನಗರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ