ರಾಮನಗರ: ಮಳೆ ಬಂದ್ರೆ ಶಾಲೆ ಸೋರುತ್ತೆ, ನಮ್ಮ ಶಾಲೆಯನ್ನು ಸರಿಪಡಿಸಿ ಕೊಡಿ ಎಂದು ಸಿಎಂಗೆ ಮಕ್ಕಳ ಮನವಿ

ಕಂಗೆಟ್ಟ ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಪೇಂಟಿಂಗ್ ಮಾಡ್ಸಿ, ಮಳೆ ಬಂದರೆ ಸೋರುತ್ತದೆ. ಇದರಿಂದ ಹುಳ-ಹುಪ್ಪಟೆಗಳು ತರಗತಿ ಒಳಗಡೆ ಬರುತ್ತದೆ. ಇಷ್ಟೇ ಅಲ್ಲದೆ, ಸುಣ್ಣ ಬಣ್ಣವಿಲ್ಲದೇ ಗೋಡೆಗಳು ಪಾಳು ಬಿದ್ದಂತಾಗಿದ್ದು, ಬ್ಲಾಕ್ ಬೋರ್ಡ್​ನಿಂದ ಸಿಮೆಂಟ್ ಕಿತ್ತಿ ಬಂದಿದೆ. ಮಧ್ಯದಿಂದ ಛಾವಣಿ ಸೀಳಿ ಹೋಗಿದೆ. ದಯವಿಟ್ಟು ಸರಿ ಮಾಡಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ರಾಮನಗರ: ಮಳೆ ಬಂದ್ರೆ ಶಾಲೆ ಸೋರುತ್ತೆ, ನಮ್ಮ ಶಾಲೆಯನ್ನು ಸರಿಪಡಿಸಿ ಕೊಡಿ ಎಂದು ಸಿಎಂಗೆ ಮಕ್ಕಳ ಮನವಿ
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 14, 2023 | 4:43 PM

ರಾಮನಗರ, ಸೆ.14: ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ಶಾಲೆ (Government School) ಗಳು ಮುಚ್ಚಿ ಹೋಗುತ್ತಿದ್ದು, ಬಡ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಂತೆ ರಾಮನಗರ (Ramanagara) ತಾಲೂಕಿನ ಬಿಡದಿ ಹೋಬಳಿಯ ಬಾನಾಂದೂರು ಗ್ರಾಮದ ಶಾಲೆಯಲ್ಲಿ, ಮಳೆ ಬಂದರೆ ಸಾಕು ಮೇಲ್ಛಾವಣಿ ಸೋರುತ್ತಿದ್ದು, ಗೋಡೆಗಳು ಬಣ್ಣ ಕಾಣದೆ ಪಾಳು ಬಿದ್ದಂತಾಗಿದೆ. ಇದರಿಂದ ಹಾವು, ಹುಳಗಳು ಕ್ಲಾಸ್​ ರೂಂ ಒಳಗಡೆ ಬರುತ್ತಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಅಳಲನ್ನು ತೋಡಿಕೊಂಡಿದ್ದಾರೆ.

ದುರಸ್ಥಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಇನ್ನು ಇದರಿಂದ ಕಂಗೆಟ್ಟ ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಪೇಂಟಿಂಗ್ ಮಾಡ್ಸಿ, ಮಳೆ ಬಂದರೆ ಸೋರುತ್ತದೆ. ಇದರಿಂದ ಹುಳ-ಹುಪ್ಪಟೆಗಳು ತರಗತಿ ಒಳಗಡೆ ಬರುತ್ತದೆ. ಇಷ್ಟೇ ಅಲ್ಲದೆ, ಸುಣ್ಣ ಬಣ್ಣವಿಲ್ಲದೇ ಗೋಡೆಗಳು ಪಾಳು ಬಿದ್ದಂತಾಗಿದ್ದು, ಬ್ಲಾಕ್ ಬೋರ್ಡ್​ನಿಂದ ಸಿಮೆಂಟ್ ಕಿತ್ತಿ ಬಂದಿದೆ. ಮಧ್ಯದಿಂದ ಛಾವಣಿ ಸೀಳಿ ಹೋಗಿದೆ. ದಯವಿಟ್ಟು ನಮ್ಮ ಶಾಲೆಯನ್ನು ದುರಸ್ತಿ ಮಾಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮಕ್ಕಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಶಿಸ್ತು, ಶಿಕ್ಷಣಕ್ಕೆ ಹೆಸರುವಾಸಿಯಾದ ಬಾಗಲಕೋಟೆ ಸರ್ಕಾರಿ ಶಾಲೆ: ನಿಜಕ್ಕೂ ಬಡ ಮಕ್ಕಳಿಗೆ ಇದು ಅಕ್ಷರದಾಸೋಹ

ಇನ್ನು ಇಂತಹ ಘಟನೆಗಳು ಹೊಸದಲ್ಲ. ಜುಲೈ 19 ರಂದು ರಾಜ್ಯದಲ್ಲಿ ತಡವಾಗಿಯಾದರೂ ಮಳೆ ಆರಂಭವಾಗಿದ್ದು, ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಈ ಹಿನ್ನಲೆ ಸರ್ಕಾರಿ ಶಾಲೆಯ ಮಕ್ಕಳು ಯಾಕಾದರೂ ಮಳೆಗಾಲ ಆರಂಭವಾಯಿತೆಂದು ಚಿಂತಿಸುವಂತಾಗಿತ್ತು. ಹೌದು, ಸರ್ಕಾರಿ ಶಾಲೆಯ ಅನೇಕ ಕೊಠಡಿಗಳು ಸೋರುತ್ತಿದ್ದು, ಅನೇಕ ಕಡೆ ಬೀಳುವ ಹಂತದಲ್ಲಿತ್ತು. ಇನ್ನೂ ಅನೇಕ ಕಡೆ ಮೇಲ್ಛಾವಣಿ ಕುಸಿದು ಬೀಳುವ ಆತಂಕವಿದ್ದು, ಸರ್ಕಾರ ಹತ್ತಾರು ಭಾಗ್ಯಗಳನ್ನು ನೀಡುತ್ತಿದೆ. ಆದ್ರೆ, ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾತ್ರ ದೌರ್ಬಾಗ್ಯ ಕಾಡುತ್ತಿತ್ತು. ಅದರಂತೆ ಡಿಸಿಎಂ ತವರು ಜಿಲ್ಲೆ ರಾಮನಗರ ಜಿಲ್ಲೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More
Follow Us