AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐ ಆಮ್ ಸಾರಿ ಅಂಕಲ್​ -ಮನೆ ಮಾಲೀಕರಿಗೆ ಫೋನ್​ ಮಾಡಿ ಕ್ಷಮೆ ಕೇಳಿದ್ದರಂತೆ ‘ಸಿಡಿ ಲೇಡಿ’!

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಇಂದು ಭೇಟಿ ನೀಡಿದೆ. ಆರ್​.ಟಿ.ನಗರದ ಮನೆಗೆ ಎಸ್ಐಟಿ ತಂಡ ಭೇಟಿಕೊಟ್ಟಿತು. ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಮನೆಗೆ ಭೇಟಿಕೊಟ್ಟಿತು.

ಐ ಆಮ್ ಸಾರಿ ಅಂಕಲ್​ -ಮನೆ ಮಾಲೀಕರಿಗೆ ಫೋನ್​ ಮಾಡಿ ಕ್ಷಮೆ ಕೇಳಿದ್ದರಂತೆ ‘ಸಿಡಿ ಲೇಡಿ’!
ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಭೇಟಿ
KUSHAL V
|

Updated on:Mar 17, 2021 | 10:14 PM

Share

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಸಂತ್ರಸ್ತೆ ವಾಸವಿದ್ದ ಮನೆಗೆ ಎಸ್​ಐಟಿ ತಂಡ ಇಂದು ಭೇಟಿ ನೀಡಿದೆ. ಆರ್​.ಟಿ.ನಗರದ ಮನೆಗೆ ಎಸ್ಐಟಿ ತಂಡ ಭೇಟಿಕೊಟ್ಟಿತು. ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಮನೆಗೆ ಭೇಟಿಕೊಟ್ಟಿತು. ಈ ವೇಳೆ, ಯುವತಿ ವಾಸವಿದ್ದ ರೂಮ್​ನ ಅಧಿಕಾರಿಗಳು ಪರಿಶೀಲಿಸಿದರು. ಬಳಿಕ, ಕಟ್ಟಡದ ಮಾಲೀಕರಿಂದ ಎಸ್​ಐಟಿ ಟೀಮ್​ ಮಾಹಿತಿ ಪಡೆಯಿತು. ಸಿಡಿಯಲ್ಲಿನ ಯುವತಿ ಇತ್ತೀಚೆಗೆ ನಿಮ್ಮನ್ನು ಸಂಪರ್ಕಿಸಿದ್ರಾ? ಆಕೆ ಇಲ್ಲಿದ್ದಾಗ ಬೇರೆ ಯಾರಾದರೂ ಇಲ್ಲಿಗೆ ಬರುತ್ತಿದ್ರಾ? ಎಂದು ಮನೆ ಮಾಲೀಕರನ್ನು ಪ್ರಶ್ನಿಸಿದರಂತೆ.

ಈ ವೇಳೆ, ವಿಡಿಯೋ ಬಹಿರಂಗವಾಗುತ್ತಿದ್ದಂತೆ ಸಂತ್ರಸ್ತೆ ನಾಪತ್ತೆ ಆಗಿದ್ದಳು. ಆದರೆ, 3-4 ದಿನದ ಹಿಂದೆ ನನಗೆ ಕರೆ ಮಾಡಿದ್ದರು ಎಂದು ಮನೆ ಮಾಲೀಕರು ಎಸ್​ಐಟಿಗೆ ಮಾಹಿತಿ ನೀಡಿದ್ದಾರಂತೆ. ಅಷ್ಟೇ ಅಲ್ಲ, ಮಾಲೀಕರಿಗೆ ಕರೆಮಾಡಿ ಸಂತ್ರಸ್ತೆ ಕ್ಷಮೆ ಸಹ ಕೇಳಿದ್ದರು ಎಂಬ ಮಾಹಿತಿ ತಂಡಕ್ಕೆ ಲಭ್ಯವಾಗಿದೆ.

ಸಂಜೆ 6.30ರ ಸುಮಾರಿಗೆ ನಿವಾಸಕ್ಕೆ ಎಸ್ಐಟಿ ತಂಡ  ಭೇಟಿ ನೀಡಿತ್ತು. 2 ಬಾರಿ ನೋಟಿಸ್​​ ನೀಡಿದರೂ ಸಂತ್ರಸ್ತೆ ಪ್ರತಿಕ್ರಯಿಸದ ಹಿನ್ನೆಲೆಯಲ್ಲಿ ಮನೆ ಮಾಲೀಕರಿಂದ ತಂಡ ಸುದೀರ್ಘ ಮಾಹಿತಿ ಪಡೆದಿದೆ. ಜೊತೆಗೆ, ಸಂತ್ರಸ್ತೆಗೆ  ಸಂಬಂಧಿಸಿದ ಕೆಲ ವಸ್ತುಗಳು, ದಾಖಲೆಗಳು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯ ವೃತ್ತಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.

ಅಂದ ಹಾಗೆ, ನನ್ನ ಮಗಳನ್ನ ಅಪಹರಿಸಲಾಗಿದೆ ಎಂದು ನಿನ್ನೆ ದೂರು ದಾಖಲಾಗಿತ್ತು. ಬೆಳಗಾವಿಯ ಎಪಿಎಂಸಿ ಯಾರ್ಡ್ ಠಾಣೆಗೆ ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದರು.

‘ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು?’ ಇನ್ನು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಪಕ್ಷ ಟ್ವೀಟ್​ ಮಾಡಿದೆ. ಬ್ಲ್ಯಾಕ್​ಮೇಲ್​ ಮಾಡಿದವರಿಗೆ ಜಾರಕಿಹೊಳಿಯಿಂದ ಹಣ ಸಂದಾಯವಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಹಣ ಖರ್ಚು ಮಾಡಿದ್ದು ಯಾರು? ಇಲ್ಲಿ ಹಣಕಾಸು ಅವ್ಯವಹಾರ ನಡೆದಿರಬೇಕಲ್ಲವೇ? ಇಡಿ, ಆದಾಯ ತೆರಿಗೆ ಇಲಾಖೆಗಳು ಏಕೆ ಕಣ್ಮುಚ್ಚಿ ಕೂತಿವೆ?ತನಿಖಾ ಸಂಸ್ಥೆಗಳು ಇರುವುದು ಅಕ್ರಮ ತಡೆಯುವುದಕ್ಕಾ? ಅಥವಾ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದಕ್ಕಾ? ಎಂದು ಟ್ವೀಟ್ ಮೂಲಕ ಬಿಜೆಪಿಗೆ ಕಾಂಗ್ರೆಸ್​ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ‘ಸಿಡಿ ಲೇಡಿ’ಗೆ ಎಸ್‌ಐಟಿಯಿಂದ ಮತ್ತೆ ನೋಟಿಸ್ ಜಾರಿ

Published On - 9:39 pm, Wed, 17 March 21

Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ